<p><strong>ನ್ಯಾಮತಿ</strong>: ತಾಲ್ಲೂಕಿನ ಮುಸ್ಸೆನಾಳ್ ಮತ್ತು ದೊಡ್ಡೇರಿ ಗ್ರಾಮಗಳಿಗೆ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಭಾನುವಾರ ಬಂದಿದ್ದ ಡಿ.ಜೆ. ವಾಹನಗಳನ್ನು (ಡಿಸ್ಕ್ ಜಾಕಿ) ಪೊಲೀಸರು ವಾಪಸ್ ಕಳುಹಿಸಿದರು. </p>.<p>ದೊಡ್ಡೇರಿ ಗ್ರಾಮದಲ್ಲಿ ಡಿ.ಜೆ ಸಂಗೀತಕ್ಕೆ ಸಂಬಂಧಿಸಿದ ಉಪಕರಣಗಳನ್ನು ವಾಹನದಿಂದ ಕೆಳಗೆ ಇಳಿಸಿ ಜೋಡಣೆಗೆ ಸಿದ್ಧತೆ ಮಾಡಿಕೊಳ್ಳುವಾಗ ಪೊಲೀಸರು ತಡೆದು ಠಾಣೆಗೆ ಕರೆತಂದರು. ಮುಸ್ಸೇನಾಳ್ ಗ್ರಾಮದ ಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಡಿ.ಜೆ.ಯನ್ನು ಮಾರ್ಗಮಧ್ಯೆ ಕಂಚುಗಾರನಹಳ್ಳಿ ಬಳಿ ತಡೆದು ಪೊಲೀಸ್ ಠಾಣೆಗೆ ಕರೆತರಲಾಯಿತು.</p>.<p>ಡಿ.ಜೆ ಬಳಕೆ ನಿರ್ಬಂಧ ಕುರಿತಂತೆ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದ ಬಗ್ಗೆ ಎರಡೂ ಡಿ.ಜೆ. ಮಾಲೀಕರಿಗೆ ಮಾಹಿತಿ ನೀಡಿದ ಸಬ್ ಇನ್ಸ್ಪೆಕ್ಟರ್ ಹೊಳೆಬಸಪ್ಪ ಹೂಳಿ ಅವರು, ಮುಚ್ಚಳಿಗೆ ಪತ್ರ ಬರೆಸಿಕೊಂಡು ವಾಪಸ್ ಹೋಗುವಂತೆ ಸೂಚಿಸಿದರು.</p>.<p>ಪೊಲೀಸರ ಈ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ‘ಪೊಲೀಸರ ಸೂಚನೆಯನ್ನು ನಾವು ಪಾಲಿಸುತ್ತೇವೆ. ಯಾರೂ ಡಿ.ಜೆ. ಬಳಸಬೇಡಿ’ ಎಂದು ಡಿ.ಜೆ.ಮಾಲೀಕರು ಸಾರ್ವಜನಿಕರಲ್ಲಿ ಮನವಿ ಮಾಡಿದರು.</p>.<p>ಈ ಸಂದರ್ಭದಲ್ಲಿ ಎ.ಎಸ್.ಐ ಮಲ್ಲೇಶಪ್ಪ, ಸಿಬ್ಬಂದಿ ಕೆ.ಮಂಜುನಾಥ, ಮಹೇಶನಾಯ್ಕ, ದೇವರಾಜ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯಾಮತಿ</strong>: ತಾಲ್ಲೂಕಿನ ಮುಸ್ಸೆನಾಳ್ ಮತ್ತು ದೊಡ್ಡೇರಿ ಗ್ರಾಮಗಳಿಗೆ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಭಾನುವಾರ ಬಂದಿದ್ದ ಡಿ.ಜೆ. ವಾಹನಗಳನ್ನು (ಡಿಸ್ಕ್ ಜಾಕಿ) ಪೊಲೀಸರು ವಾಪಸ್ ಕಳುಹಿಸಿದರು. </p>.<p>ದೊಡ್ಡೇರಿ ಗ್ರಾಮದಲ್ಲಿ ಡಿ.ಜೆ ಸಂಗೀತಕ್ಕೆ ಸಂಬಂಧಿಸಿದ ಉಪಕರಣಗಳನ್ನು ವಾಹನದಿಂದ ಕೆಳಗೆ ಇಳಿಸಿ ಜೋಡಣೆಗೆ ಸಿದ್ಧತೆ ಮಾಡಿಕೊಳ್ಳುವಾಗ ಪೊಲೀಸರು ತಡೆದು ಠಾಣೆಗೆ ಕರೆತಂದರು. ಮುಸ್ಸೇನಾಳ್ ಗ್ರಾಮದ ಗಣಪತಿ ವಿಸರ್ಜನೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಡಿ.ಜೆ.ಯನ್ನು ಮಾರ್ಗಮಧ್ಯೆ ಕಂಚುಗಾರನಹಳ್ಳಿ ಬಳಿ ತಡೆದು ಪೊಲೀಸ್ ಠಾಣೆಗೆ ಕರೆತರಲಾಯಿತು.</p>.<p>ಡಿ.ಜೆ ಬಳಕೆ ನಿರ್ಬಂಧ ಕುರಿತಂತೆ ಜಿಲ್ಲಾಧಿಕಾರಿ ಹೊರಡಿಸಿರುವ ಆದೇಶದ ಬಗ್ಗೆ ಎರಡೂ ಡಿ.ಜೆ. ಮಾಲೀಕರಿಗೆ ಮಾಹಿತಿ ನೀಡಿದ ಸಬ್ ಇನ್ಸ್ಪೆಕ್ಟರ್ ಹೊಳೆಬಸಪ್ಪ ಹೂಳಿ ಅವರು, ಮುಚ್ಚಳಿಗೆ ಪತ್ರ ಬರೆಸಿಕೊಂಡು ವಾಪಸ್ ಹೋಗುವಂತೆ ಸೂಚಿಸಿದರು.</p>.<p>ಪೊಲೀಸರ ಈ ನಡೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದರು. ‘ಪೊಲೀಸರ ಸೂಚನೆಯನ್ನು ನಾವು ಪಾಲಿಸುತ್ತೇವೆ. ಯಾರೂ ಡಿ.ಜೆ. ಬಳಸಬೇಡಿ’ ಎಂದು ಡಿ.ಜೆ.ಮಾಲೀಕರು ಸಾರ್ವಜನಿಕರಲ್ಲಿ ಮನವಿ ಮಾಡಿದರು.</p>.<p>ಈ ಸಂದರ್ಭದಲ್ಲಿ ಎ.ಎಸ್.ಐ ಮಲ್ಲೇಶಪ್ಪ, ಸಿಬ್ಬಂದಿ ಕೆ.ಮಂಜುನಾಥ, ಮಹೇಶನಾಯ್ಕ, ದೇವರಾಜ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>