<p><strong>ಬೆಳಗುತ್ತಿ(ನ್ಯಾಮತಿ):</strong> ಗ್ರಾಮದೇವತೆ ದುರ್ಗಾದೇವಿ ದಸರಾ ಬನ್ನಿ ಜಾತ್ರಾ ಮಹೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.</p>.<p>ಪ್ರತಿವರ್ಷದಂತೆ ಮಂಗಳವಾರ ಸಂಜೆ ಅಮ್ಮನವರಿಗೆ ವಿಶೇಷ ಪೂಜೆ ಮತ್ತು ಬಾಸಿಂಗ ಪೂಜೆ ನೆರವೇರಿಸಿ ಜಾತ್ರೆಗೆ ಚಾಲನೆ ನೀಡಲಾಯಿತು.</p>.<p>ಅಕ್ಕಪಕ್ಕದ ಜಿಲ್ಲೆ, ಊರುಗಳಿಂದ ಬರುವ ಭಕ್ತರು ಮನೆಯಲ್ಲಿಯೇ ರೊಟ್ಟಿ, ಮೊಸರುಬುತ್ತಿ, ಪಲ್ಯ, ಚಟ್ನಿಪುಡಿ, ಸಿದ್ಧಪಡಿಸಿ ತಂದು ನೈವೇದ್ಯ ಮಾಡಿ ಪ್ರಸಾದ ರೂಪವಾಗಿ ಬಂಧು ಬಳಗದವರೊಂದಿಗೆ ಸ್ವೀಕರಿಸುತ್ತಾರೆ. </p>.<p>ವಿವಿಧ ಭಾಗಗಳಿಂದ ಬಂದ ಜಾನಪದ ಕಲಾವಿದರು ಡೊಳ್ಳು ಕುಣಿತ, ಭಜನೆ ಮಾಡುವ ಕಲಾವಿದರು ಮುಂಜಾನೆ ತನಕ ಭಕ್ತಿ ಸಮರ್ಪಣೆ ಮಾಡುತ್ತಾರೆ. ಮುಂಜಾನೆ ಗಂಗಾಪೂಜೆ ನೆರವೇರಿಸಿದ ನಂತರ ಅಮ್ಮನವರ ದೇವಸ್ಥಾನದ ಮುಂಭಾಗದಲ್ಲಿರುವ ಬನ್ನಿಕಟ್ಟೆಯ ಬಳಿ ಭಕ್ತರು ಜಯಘೋಷದೊಂದಿಗೆ ಬನ್ನಿ ಮುಡಿದು ಪ್ರತಿಷ್ಠಾಪನೆಗೊಳ್ಳುತ್ತಾಳೆ.</p>.<p>ವರ್ಷಕ್ಕೊಮ್ಮೆ ಗರ್ಭಗುಡಿಯಿಂದ ಹೊರಬರುವ ಅಮ್ಮನವರು ಪಲ್ಲಕ್ಕಿಯಲ್ಲಿ ಕುಳಿತು ಶಾಲೆಯ ಆವರಣಕ್ಕೆ ತೆರಳಿ ಭಕ್ತರ ಕೋರಿಕೆ-ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ನಂತರ, ಮಧ್ಯಾಹ್ನ 12.30ಕ್ಕೆ ಮರಳಿ ದೇವಸ್ಥಾನದ ಗುಡಿ ಪ್ರವೇಶ ಮಾಡುವ ಮೂಲಕ ಎರಡು ದಿನದ ಜಾತ್ರೆಗೆ ತೆರೆ ಬೀಳುತ್ತದೆ ಎಂದು ದೇವಸ್ಥಾನದ ಧರ್ಮದರ್ಶಿ ಬಿ.ಪಿ. ಕೃಷ್ಣರಾಜ ಅರಸು ಮಾಹಿತಿ ನೀಡಿದರು.</p>.<p>ಗ್ರಾಮದ ಭಕ್ತರು, ಯುವಕರು ಜಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೇವೆ ಸಲ್ಲಿಸುತ್ತಾರೆ. ಈ ಬಾರಿ ಅರಳಿಮರವನ್ನು ವಿದ್ಯುತ್ ದೀಪದಿಂದ ಆಲಂಕಾರ ಮಾಡಿರುವುದು ವಿಶೇಷವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗುತ್ತಿ(ನ್ಯಾಮತಿ):</strong> ಗ್ರಾಮದೇವತೆ ದುರ್ಗಾದೇವಿ ದಸರಾ ಬನ್ನಿ ಜಾತ್ರಾ ಮಹೋತ್ಸವ ಬುಧವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.</p>.<p>ಪ್ರತಿವರ್ಷದಂತೆ ಮಂಗಳವಾರ ಸಂಜೆ ಅಮ್ಮನವರಿಗೆ ವಿಶೇಷ ಪೂಜೆ ಮತ್ತು ಬಾಸಿಂಗ ಪೂಜೆ ನೆರವೇರಿಸಿ ಜಾತ್ರೆಗೆ ಚಾಲನೆ ನೀಡಲಾಯಿತು.</p>.<p>ಅಕ್ಕಪಕ್ಕದ ಜಿಲ್ಲೆ, ಊರುಗಳಿಂದ ಬರುವ ಭಕ್ತರು ಮನೆಯಲ್ಲಿಯೇ ರೊಟ್ಟಿ, ಮೊಸರುಬುತ್ತಿ, ಪಲ್ಯ, ಚಟ್ನಿಪುಡಿ, ಸಿದ್ಧಪಡಿಸಿ ತಂದು ನೈವೇದ್ಯ ಮಾಡಿ ಪ್ರಸಾದ ರೂಪವಾಗಿ ಬಂಧು ಬಳಗದವರೊಂದಿಗೆ ಸ್ವೀಕರಿಸುತ್ತಾರೆ. </p>.<p>ವಿವಿಧ ಭಾಗಗಳಿಂದ ಬಂದ ಜಾನಪದ ಕಲಾವಿದರು ಡೊಳ್ಳು ಕುಣಿತ, ಭಜನೆ ಮಾಡುವ ಕಲಾವಿದರು ಮುಂಜಾನೆ ತನಕ ಭಕ್ತಿ ಸಮರ್ಪಣೆ ಮಾಡುತ್ತಾರೆ. ಮುಂಜಾನೆ ಗಂಗಾಪೂಜೆ ನೆರವೇರಿಸಿದ ನಂತರ ಅಮ್ಮನವರ ದೇವಸ್ಥಾನದ ಮುಂಭಾಗದಲ್ಲಿರುವ ಬನ್ನಿಕಟ್ಟೆಯ ಬಳಿ ಭಕ್ತರು ಜಯಘೋಷದೊಂದಿಗೆ ಬನ್ನಿ ಮುಡಿದು ಪ್ರತಿಷ್ಠಾಪನೆಗೊಳ್ಳುತ್ತಾಳೆ.</p>.<p>ವರ್ಷಕ್ಕೊಮ್ಮೆ ಗರ್ಭಗುಡಿಯಿಂದ ಹೊರಬರುವ ಅಮ್ಮನವರು ಪಲ್ಲಕ್ಕಿಯಲ್ಲಿ ಕುಳಿತು ಶಾಲೆಯ ಆವರಣಕ್ಕೆ ತೆರಳಿ ಭಕ್ತರ ಕೋರಿಕೆ-ಸಮಸ್ಯೆಗಳಿಗೆ ಪರಿಹಾರ ಸೂಚಿಸಿದ ನಂತರ, ಮಧ್ಯಾಹ್ನ 12.30ಕ್ಕೆ ಮರಳಿ ದೇವಸ್ಥಾನದ ಗುಡಿ ಪ್ರವೇಶ ಮಾಡುವ ಮೂಲಕ ಎರಡು ದಿನದ ಜಾತ್ರೆಗೆ ತೆರೆ ಬೀಳುತ್ತದೆ ಎಂದು ದೇವಸ್ಥಾನದ ಧರ್ಮದರ್ಶಿ ಬಿ.ಪಿ. ಕೃಷ್ಣರಾಜ ಅರಸು ಮಾಹಿತಿ ನೀಡಿದರು.</p>.<p>ಗ್ರಾಮದ ಭಕ್ತರು, ಯುವಕರು ಜಾತ್ರೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸೇವೆ ಸಲ್ಲಿಸುತ್ತಾರೆ. ಈ ಬಾರಿ ಅರಳಿಮರವನ್ನು ವಿದ್ಯುತ್ ದೀಪದಿಂದ ಆಲಂಕಾರ ಮಾಡಿರುವುದು ವಿಶೇಷವಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>