ಬಡವರು ಸಾಯಬೇಕಾ?: ‘ಬಡವರಿಗೆ ಒಂದು ಬಾರಿ ಆಹಾರದ ಕಿಟ್ ಕೊಟ್ಟಿ ಸುಮ್ಮನಾಗಿದ್ದಾರೆ. 20 ದಿನಗಳ ಕಾಲ ಲಾಕ್ಡೌನ್ ಮಾಡಿ ಎಂಟು ದಿನಕ್ಕಾಗುವಷ್ಟೂ ಆಹಾರ ಧಾನ್ಯ ಕೊಡುವುದಿಲ್ಲ. ಕೇಳಿದರೆ ಕೊಟ್ಟು ಬಂದಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ. ಬಡವರು ಹಸಿವಿನಿಂದ ಸಾಯಬೇಕಾ? ಐದು ದಿನಕ್ಕೆ, ಎಂಟು ದಿನಕ್ಕೆ ಮತ್ತೊಮ್ಮೆ ಕಿಟ್ ಕೊಡಬೇಕು. ಆದರೆ, ದಾನಿಗಳು ಕೊಟ್ಟಿರುವ ಕಿಟ್ಗಳನ್ನೂ ಇವರು ಬೀಗ ಹಾಕಿ ಇಟ್ಟುಕೊಂಡಿದ್ದಾರೆ. ಸರ್ಕಾರದಿಂದ ಏನನ್ನೂ ಕೊಡಲಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.