<p><strong>ಸಾಸ್ವೆಹಳ್ಳಿ</strong>: ಇಲ್ಲಿಗೆ ಸಮೀಪದ ಡಬಲ್ ಗೇಟಿನ ಉಪ ನಾಲೆಯಲ್ಲಿ ತುಂಬಿಕೊಂಡಿದ್ದ ಹೂಳನ್ನು ರೈತರೇ ಸ್ವಂತ ಖರ್ಚಿನಿಂದ ತೆಗೆಸಿದ್ದಾರೆ.</p>.<p>ಉಪನಾಲೆಯಲ್ಲಿ ಗಿಡಗಂಟಿಗಳು ಬೆಳೆದು ಹೂಳು ತುಂಬಿಕೊಂಡಿತ್ತು. ಇದರಿಂದಾಗಿ ಕೆಳಭಾಗದ ಗದ್ದೆಗಳಿಗೆ ನೀರು ಬರುತ್ತಿರಲಿಲ್ಲ. ಈ ಬಗ್ಗೆ ರೈತರು ಹಲವು ಬಾರಿ ನೀರಾವರಿ ಇಲಾಖೆಯ ಗಮನಕ್ಕೆ ತಂದಿದ್ದರೂ ಇಲಾಖೆಯವರು ಸ್ಪಂದಿಸಿರಲಿಲ್ಲ. ಕೆಳಭಾಗದ 50ಕ್ಕೂ ಹೆಚ್ಚು ರೈತರು ಸ್ವಂತ ಖರ್ಚಿನಿಂದ ಹಿಟಾಚಿ ಬಳಸಿ ಉಪನಾಲೆ ಸ್ವಚ್ಛಗೊಳಿಸಿಕೊಂಡೆವು ಎಂದು ರೈತ ನರಸಿಂಹಪ್ಪ ತಿಳಿಸಿದರು.</p>.<p>ಮಳೆಗಾಲದಲ್ಲಿ ಅಷ್ಟೊಂದು ಸಮಸ್ಯೆಯಾಗುವುದಿಲ್ಲ. ಬೇಸಿಗೆಯಲ್ಲಿ ನೀರಿಗಾಗಿಯೇ ನಾವು ಜಗಳವಾಡಬೇಕಾಗುತ್ತದೆ. ಆದ್ದರಿಂದ ಈ ಕಾಲುವೆಗೆ ಶಾಶ್ವತ ಪರಿಹಾರವನ್ನು ನೀಡುವಂತೆ ಆಗಬೇಕು ಎಂದು ರೈತರು ಒತ್ತಾಯಿಸಿದರು.</p>.<p>ಭದ್ರಾ ಉಪನಾಲೆಯ 19ನೇ ಡಿಸ್ಟ್ರಿಬ್ಯೂಟ್ನಲ್ಲಿ ಹೂಳು ತುಂಬಿದ್ದು, ಇದು ಕಾಡಾ ವಿಭಾಗಕ್ಕೆ ಬರುತ್ತದೆ. ಇದನ್ನು ನೀರು ಬಳಕೆದಾರರ ಸಹಕಾರ ಸಂಘದವರೆ ನಿರ್ವಹಣೆ ಮಾಡಬೇಕಗಿತು. ಸಂಘದವರ ನಿರ್ಲಕ್ಷ್ಯವೇ ಕಾರಣ’ ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ನಾರಾಯಣಸ್ವಾಮಿ ತಿಳಿಸಿದರು.</p>.<p>ರೈತರಾದ ನವೀನ್ ಕುಮಾರ್, ನರಸಿಂಹಪ್ಪ, ಸುರೇಶ್, ಅಮ್ಜಾದ್, ರಹಿಂ ಸಾಬ್, ಕರಿಬಸಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಾಸ್ವೆಹಳ್ಳಿ</strong>: ಇಲ್ಲಿಗೆ ಸಮೀಪದ ಡಬಲ್ ಗೇಟಿನ ಉಪ ನಾಲೆಯಲ್ಲಿ ತುಂಬಿಕೊಂಡಿದ್ದ ಹೂಳನ್ನು ರೈತರೇ ಸ್ವಂತ ಖರ್ಚಿನಿಂದ ತೆಗೆಸಿದ್ದಾರೆ.</p>.<p>ಉಪನಾಲೆಯಲ್ಲಿ ಗಿಡಗಂಟಿಗಳು ಬೆಳೆದು ಹೂಳು ತುಂಬಿಕೊಂಡಿತ್ತು. ಇದರಿಂದಾಗಿ ಕೆಳಭಾಗದ ಗದ್ದೆಗಳಿಗೆ ನೀರು ಬರುತ್ತಿರಲಿಲ್ಲ. ಈ ಬಗ್ಗೆ ರೈತರು ಹಲವು ಬಾರಿ ನೀರಾವರಿ ಇಲಾಖೆಯ ಗಮನಕ್ಕೆ ತಂದಿದ್ದರೂ ಇಲಾಖೆಯವರು ಸ್ಪಂದಿಸಿರಲಿಲ್ಲ. ಕೆಳಭಾಗದ 50ಕ್ಕೂ ಹೆಚ್ಚು ರೈತರು ಸ್ವಂತ ಖರ್ಚಿನಿಂದ ಹಿಟಾಚಿ ಬಳಸಿ ಉಪನಾಲೆ ಸ್ವಚ್ಛಗೊಳಿಸಿಕೊಂಡೆವು ಎಂದು ರೈತ ನರಸಿಂಹಪ್ಪ ತಿಳಿಸಿದರು.</p>.<p>ಮಳೆಗಾಲದಲ್ಲಿ ಅಷ್ಟೊಂದು ಸಮಸ್ಯೆಯಾಗುವುದಿಲ್ಲ. ಬೇಸಿಗೆಯಲ್ಲಿ ನೀರಿಗಾಗಿಯೇ ನಾವು ಜಗಳವಾಡಬೇಕಾಗುತ್ತದೆ. ಆದ್ದರಿಂದ ಈ ಕಾಲುವೆಗೆ ಶಾಶ್ವತ ಪರಿಹಾರವನ್ನು ನೀಡುವಂತೆ ಆಗಬೇಕು ಎಂದು ರೈತರು ಒತ್ತಾಯಿಸಿದರು.</p>.<p>ಭದ್ರಾ ಉಪನಾಲೆಯ 19ನೇ ಡಿಸ್ಟ್ರಿಬ್ಯೂಟ್ನಲ್ಲಿ ಹೂಳು ತುಂಬಿದ್ದು, ಇದು ಕಾಡಾ ವಿಭಾಗಕ್ಕೆ ಬರುತ್ತದೆ. ಇದನ್ನು ನೀರು ಬಳಕೆದಾರರ ಸಹಕಾರ ಸಂಘದವರೆ ನಿರ್ವಹಣೆ ಮಾಡಬೇಕಗಿತು. ಸಂಘದವರ ನಿರ್ಲಕ್ಷ್ಯವೇ ಕಾರಣ’ ಎಂದು ನೀರಾವರಿ ಇಲಾಖೆಯ ಎಂಜಿನಿಯರ್ ನಾರಾಯಣಸ್ವಾಮಿ ತಿಳಿಸಿದರು.</p>.<p>ರೈತರಾದ ನವೀನ್ ಕುಮಾರ್, ನರಸಿಂಹಪ್ಪ, ಸುರೇಶ್, ಅಮ್ಜಾದ್, ರಹಿಂ ಸಾಬ್, ಕರಿಬಸಪ್ಪ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>