‘ಈ ಮೊದಲು ಆಮ್ ಆದ್ಮಿ ಬಿಮಾ ಯೋಜನೆ (ಎಎಬಿವೈ) ಅಡಿ ಪೋಷಕರ ಮರಣ ವಿಮೆ ಪಾವತಿಸಲಾಗುತ್ತಿತ್ತು. ಆಗ ತಂದೆಯ ಸಹಜ ಸಾವಿಗೆ ₹30 ಸಾವಿರ ಹಾಗೂ ಅಪಘಾತ ಸಾವಿಗೆ ₹75 ಸಾವಿರ ಪರಿಹಾರ ಕೊಡಲಾಗುತ್ತಿತ್ತು. 2017ರ ಜುಲೈನಿಂದ ಪಿಎಂಜೆಜೆಬಿವೈ ಜೊತೆಗೆ ವಿಲೀನಗೊಳಿಸಲಾಗಿದ್ದು, ಪರಿಹಾರದ ಮೊತ್ತವನ್ನು ಹೆಚ್ಚಿಸಲಾಗಿದೆ. ತಂದೆ ಮೃತಪಟ್ಟ ಬಳಿಕ ಮರಣ ಪ್ರಮಾಣಪತ್ರ, ಎಫ್ಐಆರ್ ಪ್ರತಿ, ಆಧಾರ್ ಲಿಂಕ್ ಇರುವ ಬ್ಯಾಂಕ್ ಸಂಖ್ಯೆಯ ವಿವರಗಳ ಜೊತೆಗೆ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಪರಿಹಾರ ಹಣವನ್ನು ಈಗಲೇ ನೀಡಲಾಗುತ್ತದೆ. ಹೆಣ್ಣುಮಗುವಿಗೆ 18 ವರ್ಷ ತುಂಬಿದ ಬಳಿಕ ₹ 1 ಲಕ್ಷವನ್ನೂ ಕೊಡಲಾಗುತ್ತದೆ. ಒಂದೊಮ್ಮೆ 18 ವರ್ಷದೊಳಗೆ ಹೆಣ್ಣುಮಕ್ಕಳಿಗೆ ಮದುವೆ ಮಾಡಿಸಿದರೆ ಭಾಗ್ಯಲಕ್ಷ್ಮಿ ಬಾಂಡ್ನ ₹ 1 ಲಕ್ಷ ಸಿಗುವುದಿಲ್ಲ’ ಎಂದರು.