<p><strong>ನ್ಯಾಮತಿ:</strong> ತಾಲ್ಲೂಕಿನ ಶಿಕಾರಿಪುರ–ಸವಳಂಗ ರಸ್ತೆಯ ಮಾಚಿಗೊಂಡನಹಳ್ಳಿ ಗ್ರಾಮದ ಬಸ್ ನಿಲ್ದಾಣ ಮುಂಭಾಗ ಇಬ್ಬರು ಬೈಕ್ ಸವಾರರನ್ನು ಬಂಧಿಸಿ, ಅವರ ಬಳಿ ಇದ್ದ ಗಾಂಜಾವನ್ನು ಮಂಗಳವಾರ ವಶಕ್ಕೆ ಪಡೆಯಲಾಗಿದೆ.</p>.<p>ಶಿಕಾರಿಪುರದ ಅಖಿಯಾಜ್ ಅಹಮ್ಮದ್(54) ಮತ್ತು ಹಾರನಹಳ್ಳಿ ಗ್ರಾಮದ ಸೈಯದ್ ಶಫೀವುಲ್ಲಾ (58) ಬಂಧಿತ ಆರೋಪಿಗಳು. ಹಾವೇರಿಯ ಮೌಲಾ ತಲೆಮರೆಸಿಕೊಂಡಿರುವ ಆರೋಪಿ.</p>.<p>ಆರೋಪಿಗಳಿಂದ 1ಕೆ.ಜಿ.160ಗ್ರಾಂ ತೂಕದ (1,160) ಅಂದಾಜು ₹ 1,10,000 ಮೌಲ್ಯದ ಗಾಂಜಾಸೊಪ್ಪು, ಒಂದು ಬೈಕ್, ಒಂದು ಮೊಬೈಲ್ಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಎನ್.ಎಸ್. ರವಿ ತಿಳಿಸಿದ್ದಾರೆ.</p>.<p>ಕಾರ್ಯಾಚರಣೆಯಲ್ಲಿ ಎಸ್ಪಿ ಕಚೇರಿಯ ಪಿಎಸ್ಐ ಸಾಗರ್ ಅತ್ತಾರ್ವಾಲಾ, ಅಬಕಾರಿ ಉಪಾಧೀಕ್ಷಕ ಹೊನ್ನಾಳಿ ವಿಭಾಗದ ಮುರಡೇಶ, ಪಿಡಿಒ ಜಿ.ಬಿ. ವಿಜಯಕುಮಾರ, ನೀರಗಂಟಿ ಪ್ರಶಾಂತ, ಸಿಬ್ಬಂದಿ ಮಂಜಪ್ಪ, ನಾಗರಾಜನಾಯ್ಕ, ಪ್ರವೀಣ, ಶಿವರಾಜ, ಗೋವಿಂದರಾಜು, ಮಂಜಪ್ಪ, ಷಣ್ಮುಖ ಪಾಲ್ಗೊಂಡಿದ್ದರು</p>
<p><strong>ನ್ಯಾಮತಿ:</strong> ತಾಲ್ಲೂಕಿನ ಶಿಕಾರಿಪುರ–ಸವಳಂಗ ರಸ್ತೆಯ ಮಾಚಿಗೊಂಡನಹಳ್ಳಿ ಗ್ರಾಮದ ಬಸ್ ನಿಲ್ದಾಣ ಮುಂಭಾಗ ಇಬ್ಬರು ಬೈಕ್ ಸವಾರರನ್ನು ಬಂಧಿಸಿ, ಅವರ ಬಳಿ ಇದ್ದ ಗಾಂಜಾವನ್ನು ಮಂಗಳವಾರ ವಶಕ್ಕೆ ಪಡೆಯಲಾಗಿದೆ.</p>.<p>ಶಿಕಾರಿಪುರದ ಅಖಿಯಾಜ್ ಅಹಮ್ಮದ್(54) ಮತ್ತು ಹಾರನಹಳ್ಳಿ ಗ್ರಾಮದ ಸೈಯದ್ ಶಫೀವುಲ್ಲಾ (58) ಬಂಧಿತ ಆರೋಪಿಗಳು. ಹಾವೇರಿಯ ಮೌಲಾ ತಲೆಮರೆಸಿಕೊಂಡಿರುವ ಆರೋಪಿ.</p>.<p>ಆರೋಪಿಗಳಿಂದ 1ಕೆ.ಜಿ.160ಗ್ರಾಂ ತೂಕದ (1,160) ಅಂದಾಜು ₹ 1,10,000 ಮೌಲ್ಯದ ಗಾಂಜಾಸೊಪ್ಪು, ಒಂದು ಬೈಕ್, ಒಂದು ಮೊಬೈಲ್ಲನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಇನ್ಸ್ಪೆಕ್ಟರ್ ಎನ್.ಎಸ್. ರವಿ ತಿಳಿಸಿದ್ದಾರೆ.</p>.<p>ಕಾರ್ಯಾಚರಣೆಯಲ್ಲಿ ಎಸ್ಪಿ ಕಚೇರಿಯ ಪಿಎಸ್ಐ ಸಾಗರ್ ಅತ್ತಾರ್ವಾಲಾ, ಅಬಕಾರಿ ಉಪಾಧೀಕ್ಷಕ ಹೊನ್ನಾಳಿ ವಿಭಾಗದ ಮುರಡೇಶ, ಪಿಡಿಒ ಜಿ.ಬಿ. ವಿಜಯಕುಮಾರ, ನೀರಗಂಟಿ ಪ್ರಶಾಂತ, ಸಿಬ್ಬಂದಿ ಮಂಜಪ್ಪ, ನಾಗರಾಜನಾಯ್ಕ, ಪ್ರವೀಣ, ಶಿವರಾಜ, ಗೋವಿಂದರಾಜು, ಮಂಜಪ್ಪ, ಷಣ್ಮುಖ ಪಾಲ್ಗೊಂಡಿದ್ದರು</p>