ರೋಗಿಗಳಿಗೆ ಸಾರ್ವಜನಿಕರು ಉದ್ಯಮಿಗಳು ದಾನಿಗಳ ನೆರವಿನಿಂದ ಪೌಷ್ಟಿಕ ಆಹಾರ ಒದಗಿಸಲು ಕೇಂದ್ರ ಸರ್ಕಾರ ‘ನಿಕ್ಷಯ್ ಮಿತ್ರ’ ಅಭಿಯಾನ ಆರಂಭಿಸಿದೆ. ಈ ಅಭಿಯಾನದಡಿ ಜಿಲ್ಲೆಯಲ್ಲಿ 300 ದಾನಿಗಳು ಹೆಸರು ನೋಂದಾಯಿಸಿ ಕ್ಷಯ ರೋಗಿಗಳಿಗೆ ನೆರವು ನೀಡುತ್ತಿದ್ದಾರೆ. ಅಭಿಯಾನದಡಿ ಕ್ಷಯ ರೋಗಿಗಳನ್ನು ದತ್ತು ಪಡೆಯಲು ಅಥವ ಅವರಿಗೆ ಅವಶ್ಯವಾದ ಪೌಷ್ಟಿಕ ಆಹಾರ ಒಗಿಸಲು ಅವಕಾಶವಿದ್ದು ಕೆಲವು ದಾನಿಗಳು ನಿಯಮಿತವಾಗಿ ನೆರವು ನೀಡುತ್ತಿದ್ದಾರೆ. ‘ಕ್ಷಯ ರೋಗಿಗಳಿಗೆ ಸಮರ್ಪಕವಾಗಿ ಪೌಷ್ಟಿಕ ಆಹಾರ ಒದಗಿಸಿದರೆ ಅವರು ಶೀಘ್ರವೇ ಗುಣಮುಖರಾಗಬಹುದಾಗಿದೆ ಆದರೆ ಅನೇಕರು ಬಡತನದ ಕಾರಣಕ್ಕೆ ಪೌಷ್ಟಿಕ ಆಹಾರದಿಂದ ವಂಚಿತರಾಗುತ್ತಿದ್ದಾರೆ. ಸರ್ಕಾರದ ಸೌಲಭ್ಯಗಳೊಂದಿಗೆ ದಾನಿಗಳು ಸಂಘ– ಸಂಸ್ಥೆಗಳ ನೆರವಿನ ಮೂಲಕ ಕ್ಷಯ ರೋಗಿಗಳಿಗೆ ಅಗತ್ಯ ಚಿಕಿತ್ಸೆಯೊಂದಿಗೆ ಪೌಷ್ಟಿಕ ಆಹಾರ ಸಾಮಗ್ರಿಗಳನ್ನೂ ವಿತರಿಸಲಾಗುತ್ತಿದೆ’ ಎನ್ನುತ್ತಾರೆ ಜಿಲ್ಲಾ ಕ್ಷಯ ನಿರ್ಮೂಲನಾಧಿಕಾರಿ ಡಾ. ಪಿ.ಡಿ.ಮುರಳೀಧರ್.
ಕ್ಷಯ ರೋಗಿಗಳಿಗೆ ವರ್ಷದ ಅವಧಿಗೆ ಪ್ರತೀ ತಿಂಗಳು ಫುಡ್ ಕಿಟ್ ವಿತರಿಸಲು ಜೆಎಸ್ಡಬ್ಲ್ಯೂ ಪ್ರತಿಷ್ಠಾನ ಮುಂದಾಗಿದೆ. ಅವಶ್ಯವಿದ್ದರೆ ಮುಂದಿನ ದಿನಗಳಲ್ಲೂ ನೆರವು ಪಡೆಯ ಲಾಗುತ್ತದೆ. ಅಂದಾಜು ₹ 1 ಕೋಟಿ ಮೊತ್ತದ ಕಾರ್ಯಕ್ರಮ ಇದಾಗಿದೆ
ಜಿ.ಎಂ.ಗಂಗಾಧರಸ್ವಾಮಿ, ಜಿಲ್ಲಾಧಿಕಾರಿ
ಕ್ಷಯವು ವಾಸಿ ಮಾಡಬಹುದಾದ ಕಾಯಿಲೆ. ದೃಢಪಟ್ಟ ಕೂಡಲೇ ಚಿಕಿತ್ಸೆ ಪಡೆದರೆ ನಿರ್ಮೂಲನೆ ಮಾಡಬಹುದು. ಚಿಕಿತ್ಸೆ, ಸೌಲಭ್ಯ ನೀಡುವ ಜತೆಗೆ ರೋಗಿಗಳು ಬಯಸಿ ದರೆ ಅವರ ಗೋಪ್ಯತೆ ಕಾಪಾಡಲಾಗುವುದು
ಡಾ.ಮುರಳೀಧರ್ ಪಿ.ಡಿ., ಜಿಲ್ಲಾ ಕ್ಷಯ ನಿರ್ಮೂಲನಾಧಿಕಾರಿ
ಫುಡ್ ಕಿಟ್ ವಿತರಣೆಯಿಂದ ಪೌಷ್ಟಿಕ ಆಹಾರ ದೊರೆಯುತ್ತಿದೆ. ಇದರಿಂದಾಗಿ ತೂಕವೂ ಹೆಚ್ಚುತ್ತಿದೆ. ಸರ್ಕಾರದಿಂದ ಉಚಿತವಾಗಿ ಔಷಧಿ ದೊರೆಯುತ್ತಿರುವುದರಿಂದ ಅನುಕೂಲ ಆಗುತ್ತಿದೆ