<p><strong>ದಾವಣಗೆರೆ: </strong>ಅಪರೂಪದ ರೋಗಗಳ ಔಷಧ ವೆಚ್ಚ ದುಬಾರಿಯಾಗಿದೆ. ಕಡಿಮೆ ವೆಚ್ಚದಲ್ಲಿ ಹೇಗೆ ಔಷಧ ಒದಗಿಸಬಹುದು ಎಂಬುದರ ಬಗ್ಗೆಯೂ ಬಯೋ ಟೆಕ್ನಾಲಜಿ ಎಂಜಿನಿಯರ್ಗಳು ಗಮನಹರಿಸಬೇಕು ಎಂದು ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಸಲಹೆ ನೀಡಿದರು.</p>.<p>ಜೈವಿಕ ತಂತ್ರಜ್ಞಾನದಲ್ಲಿನ ತಂತ್ರಗಳ ಕುರಿತು ಬಿಐಟಿಯಲ್ಲಿ ಸೋಮವಾರ ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಭಾರತದಲ್ಲಿ ಏಳು ಸಾವಿರ ಅಪರೂಪದ ರೋಗಗಳಿವೆ. ಇವುಗಳನ್ನು ಕೆ7 ಎಂದು ಗುರುತಿಸಲಾಗಿದೆ. ಒಂದೊಂದು ರೋಗಗಳ ವೆಚ್ಚವೂ ₹ ಲಕ್ಷ ದಾಟುತ್ತಿದೆ. ಔಷಧ ತಯಾರಿಯ ವೆಚ್ಚ ಕಡಿಮೆ ಮಾಡಿದರೆ ರೋಗಿಗಳಿಗೆ ಕಡಿಮೆಯಲ್ಲಿ ಒದಗಿಸಲು ಸಾಧ್ಯ. ಭವಿಷ್ಯದ ಆರೋಗ್ಯ ಸೇವೆ ಜೈವಿಕ ತಂತ್ರಜ್ಞಾನದ ಎಂಜಿನಿಯರ್ಗಳ ಕೈಯಲ್ಲಿದೆ ಎಂದು ಹೇಳಿದರು.</p>.<p>ಕಾರ್ಗಿಲ್ ಇಂಡಿಯಾದ ಬಸವರಾಜ್ ಅಂಗಡಿ, ‘ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಇದೆ. ಸ್ಪರ್ಧೆಯನ್ನು ಎದುರಿಸಲು ಕಾರ್ಯಾಗಾರ, ತರಬೇತಿಗಳ ಮೂಲಕ ಶಸಕ್ತರಾಗಬೇಕು. ಪ್ರಾಯೋಗಿಕ ಜ್ಞಾನದಿಂದ ದಕ್ಷವಾಗಿ ಕಾರ್ಯ ನಿರ್ವಹಿಸಲು ಸಾಧ್ಯ’ ಎಂದರು ತಿಳಿಸಿದರು.</p>.<p>ಜೀವನ ಎಂದೂ ನಿಂತ ನೀರಲ್ಲ. ಕಲಿಯುವಿಕೆಗೆ ಎಂದೂ ಕೊನೆಯಿಲ್ಲ. ಏಕಲವ್ಯನ ಛಲ ಎಲ್ಲರ ಸಾಧನೆಗೆ ಸ್ಫೂರ್ತಿಯಾಗಬೇಕು ಎಂದರು.</p>.<p>ದಾವಣಗೆರೆ ವಿಶ್ವವಿದ್ಯಾಲಯದ ಬಯೊಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ. ಎಸ್.ಎಂ. ಗೋಪಿನಾಥ್, ‘ಶೈಕ್ಷಣಿಕ ಕಲಿಕೆ ಹಾಗೂ ಕೈಗಾರಿಕಾ ಅಗತ್ಯಗಳ ನಡುವಿನ ಅಂತರವನ್ನು ಸರಿದೂಗಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಉದ್ಯಮಗಳು ಬಯಸುವ ಕೌಶಲಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಸದಾಶಿವಪ್ಪ, ‘ಹಿಂದಿನ ವ್ಯವಸ್ಥೆಯಲ್ಲಿ ಬಾಯಿಪಾಠ, ಅರ್ಥ ಮಾಡಿಕೊಳ್ಳುವುದು ಹಾಗೂ ಅನ್ವಯಿಸುವುದಕ್ಕೆ ಶಿಕ್ಷಣ ಸೀಮಿತವಾಗಿತ್ತು. ಈಗ ವಿಶ್ಲೇಷಣೆ, ಮೌಲ್ಯಮಾಪನ ಹಾಗೂ ಸೃಜನಶೀಲತೆಯನ್ನು ಬಯಸುತ್ತಿದೆ’ ಎಂದು ಹೇಳಿದರು.</p>.<p>ಡಾ.ಬಿ.ಇ. ರಂಗಸ್ವಾಮಿ ಸ್ವಾಗತಿಸಿದರು. ಪೂಜಾ ಬಿ.ಎಸ್. ವಂದಿಸಿದರು. ನಿಹಾರಿಕಾ ರೆಡ್ಡಿ ಮತ್ತು ಸಹನಾ ಗೌಡರ್ ಕಾರ್ಯಕ್ರಮ ನಿರೂಪಿಸಿದರು.</p>.<p class="Briefhead"><strong>‘ಕೋವಿಡ್ 19ಗೆ ಔಷಧ ಕಂಡುಕೊಳ್ಳಬೇಕು’</strong></p>.<p>ಕೊರೊನಾ ವೈರಸ್ನಿಂದ ಬರುವ ‘ಕೋವಿಡ್ 19’ ಸೋಂಕಿಗೆ ಇನ್ನೂ ಔಷಧ ಕಂಡು ಹಿಡಿದಿಲ್ಲ. ಈ ವೈರಸ್ ಬಂದ ಮೇಲೆ ಜೈವಿಕ ತಂತ್ರಜ್ಞಾನ ಸಂಶೋಧಕರಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಪ್ರೊ. ವೃಷಭೇಂದ್ರಪ್ಪ ತಿಳಿಸಿದರು.</p>.<p>ಫಾಸ್ಟ್ಫುಡ್, ತಂಪು ಪಾನೀಯಗಳನ್ನು ಬಿಟ್ಟುನಿಂಬೆರಸವನ್ನು ಸೇವಿಸಿದರೆ ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿದ್ದರೆ ಕೋವಿಡ್ 19 ಸಹಿತ ಯಾವುದೇ ರೋಗಗಳಿಂದ ದೂರ ಇರಲು ಸಾಧ್ಯ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ: </strong>ಅಪರೂಪದ ರೋಗಗಳ ಔಷಧ ವೆಚ್ಚ ದುಬಾರಿಯಾಗಿದೆ. ಕಡಿಮೆ ವೆಚ್ಚದಲ್ಲಿ ಹೇಗೆ ಔಷಧ ಒದಗಿಸಬಹುದು ಎಂಬುದರ ಬಗ್ಗೆಯೂ ಬಯೋ ಟೆಕ್ನಾಲಜಿ ಎಂಜಿನಿಯರ್ಗಳು ಗಮನಹರಿಸಬೇಕು ಎಂದು ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಸಲಹೆ ನೀಡಿದರು.</p>.<p>ಜೈವಿಕ ತಂತ್ರಜ್ಞಾನದಲ್ಲಿನ ತಂತ್ರಗಳ ಕುರಿತು ಬಿಐಟಿಯಲ್ಲಿ ಸೋಮವಾರ ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.</p>.<p>ಭಾರತದಲ್ಲಿ ಏಳು ಸಾವಿರ ಅಪರೂಪದ ರೋಗಗಳಿವೆ. ಇವುಗಳನ್ನು ಕೆ7 ಎಂದು ಗುರುತಿಸಲಾಗಿದೆ. ಒಂದೊಂದು ರೋಗಗಳ ವೆಚ್ಚವೂ ₹ ಲಕ್ಷ ದಾಟುತ್ತಿದೆ. ಔಷಧ ತಯಾರಿಯ ವೆಚ್ಚ ಕಡಿಮೆ ಮಾಡಿದರೆ ರೋಗಿಗಳಿಗೆ ಕಡಿಮೆಯಲ್ಲಿ ಒದಗಿಸಲು ಸಾಧ್ಯ. ಭವಿಷ್ಯದ ಆರೋಗ್ಯ ಸೇವೆ ಜೈವಿಕ ತಂತ್ರಜ್ಞಾನದ ಎಂಜಿನಿಯರ್ಗಳ ಕೈಯಲ್ಲಿದೆ ಎಂದು ಹೇಳಿದರು.</p>.<p>ಕಾರ್ಗಿಲ್ ಇಂಡಿಯಾದ ಬಸವರಾಜ್ ಅಂಗಡಿ, ‘ಎಲ್ಲ ಕ್ಷೇತ್ರಗಳಲ್ಲಿ ಸ್ಪರ್ಧೆ ಇದೆ. ಸ್ಪರ್ಧೆಯನ್ನು ಎದುರಿಸಲು ಕಾರ್ಯಾಗಾರ, ತರಬೇತಿಗಳ ಮೂಲಕ ಶಸಕ್ತರಾಗಬೇಕು. ಪ್ರಾಯೋಗಿಕ ಜ್ಞಾನದಿಂದ ದಕ್ಷವಾಗಿ ಕಾರ್ಯ ನಿರ್ವಹಿಸಲು ಸಾಧ್ಯ’ ಎಂದರು ತಿಳಿಸಿದರು.</p>.<p>ಜೀವನ ಎಂದೂ ನಿಂತ ನೀರಲ್ಲ. ಕಲಿಯುವಿಕೆಗೆ ಎಂದೂ ಕೊನೆಯಿಲ್ಲ. ಏಕಲವ್ಯನ ಛಲ ಎಲ್ಲರ ಸಾಧನೆಗೆ ಸ್ಫೂರ್ತಿಯಾಗಬೇಕು ಎಂದರು.</p>.<p>ದಾವಣಗೆರೆ ವಿಶ್ವವಿದ್ಯಾಲಯದ ಬಯೊಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ. ಎಸ್.ಎಂ. ಗೋಪಿನಾಥ್, ‘ಶೈಕ್ಷಣಿಕ ಕಲಿಕೆ ಹಾಗೂ ಕೈಗಾರಿಕಾ ಅಗತ್ಯಗಳ ನಡುವಿನ ಅಂತರವನ್ನು ಸರಿದೂಗಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಉದ್ಯಮಗಳು ಬಯಸುವ ಕೌಶಲಗಳನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.</p>.<p>ಕಾಲೇಜಿನ ಪ್ರಾಂಶುಪಾಲ ಡಾ. ಕೆ. ಸದಾಶಿವಪ್ಪ, ‘ಹಿಂದಿನ ವ್ಯವಸ್ಥೆಯಲ್ಲಿ ಬಾಯಿಪಾಠ, ಅರ್ಥ ಮಾಡಿಕೊಳ್ಳುವುದು ಹಾಗೂ ಅನ್ವಯಿಸುವುದಕ್ಕೆ ಶಿಕ್ಷಣ ಸೀಮಿತವಾಗಿತ್ತು. ಈಗ ವಿಶ್ಲೇಷಣೆ, ಮೌಲ್ಯಮಾಪನ ಹಾಗೂ ಸೃಜನಶೀಲತೆಯನ್ನು ಬಯಸುತ್ತಿದೆ’ ಎಂದು ಹೇಳಿದರು.</p>.<p>ಡಾ.ಬಿ.ಇ. ರಂಗಸ್ವಾಮಿ ಸ್ವಾಗತಿಸಿದರು. ಪೂಜಾ ಬಿ.ಎಸ್. ವಂದಿಸಿದರು. ನಿಹಾರಿಕಾ ರೆಡ್ಡಿ ಮತ್ತು ಸಹನಾ ಗೌಡರ್ ಕಾರ್ಯಕ್ರಮ ನಿರೂಪಿಸಿದರು.</p>.<p class="Briefhead"><strong>‘ಕೋವಿಡ್ 19ಗೆ ಔಷಧ ಕಂಡುಕೊಳ್ಳಬೇಕು’</strong></p>.<p>ಕೊರೊನಾ ವೈರಸ್ನಿಂದ ಬರುವ ‘ಕೋವಿಡ್ 19’ ಸೋಂಕಿಗೆ ಇನ್ನೂ ಔಷಧ ಕಂಡು ಹಿಡಿದಿಲ್ಲ. ಈ ವೈರಸ್ ಬಂದ ಮೇಲೆ ಜೈವಿಕ ತಂತ್ರಜ್ಞಾನ ಸಂಶೋಧಕರಿಗೆ ಬೇಡಿಕೆ ಹೆಚ್ಚಾಗಿದೆ ಎಂದು ಪ್ರೊ. ವೃಷಭೇಂದ್ರಪ್ಪ ತಿಳಿಸಿದರು.</p>.<p>ಫಾಸ್ಟ್ಫುಡ್, ತಂಪು ಪಾನೀಯಗಳನ್ನು ಬಿಟ್ಟುನಿಂಬೆರಸವನ್ನು ಸೇವಿಸಿದರೆ ಬೇಸಿಗೆಯಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ರೋಗನಿರೋಧಕ ಶಕ್ತಿ ಹೆಚ್ಚಿದ್ದರೆ ಕೋವಿಡ್ 19 ಸಹಿತ ಯಾವುದೇ ರೋಗಗಳಿಂದ ದೂರ ಇರಲು ಸಾಧ್ಯ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>