‘ಭಾನುವಾರ ಶಾಸಕರ ಸಭೆ ಮುಖ್ಯ ಸಚೇತಕರು ಮಾಹಿತಿ ನೀಡಿದ್ದರು. ನಾನು ಬೆಂಗಳೂರಿಗೆ ಹೋಗುವೆ. ಮುಖ್ಯಮಂತ್ರಿಗಳ ಜತೆಗೇ ಮಾತನಾಡುತ್ತೇನೆ. ಯಡಿಯೂರಪ್ಪ ಅವರು ಚನ್ನಾಗಿ ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ನಾನು ಯಡಿಯೂರಪ್ಪ ಅವರು ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ದವಾಗಿರುವೆ. ಎಲ್ಲ ಜನರ ಪ್ರೀತಿ ವಿಶ್ವಾಸ ಗಳಿಸಿ ಬಿಎಸ್ವೈ ಕೆಲಸ ಮಾಡುತ್ತಿದ್ದಾರೆ’ ಎಂದು ಸುದ್ದಿಗಾರರಿಗೆ ಗುರುವಾರ ತಿಳಿಸಿದರು.