ದಾವಣಗೆರೆ: ಬಡವರಿಗೆ ತಲುಪಬೇಕಾಗಿದ್ದ 8 ಟನ್ ಪಡಿತರ ಅಕ್ಕಿ ಹಾಗೂ ಮಾರಾಟ ಮಾಡಲು ಸಾಗಿಸುತ್ತಿದ್ದ ಲಾರಿಯನ್ನು ಗ್ರಾಮಾಂತರ ಡಿವೈಎಸ್ಪಿ ವಿ.ನರಸಿಂಹ ತಾಮ್ರಧ್ವಜ ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ತಂಡ ವಶಕ್ಕೆ ಪಡೆದು ಲಾರಿ ಚಾಲಕ ಜಗದೀಶ್ನನ್ನು ಬಂಧಿಸಿದೆ.
ತಾಲೂಕಿನ ಹೆಬ್ಬಾಳು ಟೋಲ್ ಬಳಿಯ ಹುಣಸೆಕಟ್ಟೆ ಸಮೀಪ ಮಜ್ದಾ ಲಾರಿಯಲ್ಲಿ 1.19 ಲಕ್ಷ ಮೌಲ್ಯದ ಅಕ್ಕಿಯನ್ನು ಲಾರಿಯಲ್ಲಿ ತುಮಕೂರು ಹಾಗೂ ಬೆಂಗಳೂರಿಗೆ ಸಾಗಿಸಲಾಗುತ್ತಿತ್ತು. ಈ ಬಗ್ಗೆ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ್ದಾರೆ.