<p>ದಾವಣಗೆರೆ: ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗವು ಜಿಲ್ಲೆಯಾದ್ಯಂತ ನಿಧಾನಗತಿಯಲ್ಲಿ ಹೆಚ್ಚುತ್ತಿದೆ. ವಾರದ ಹಿಂದೆ ಜಿಲ್ಲೆಯಲ್ಲಿ 90 ಜಾನುವಾರುಗಳಲ್ಲಿ ಈ ರೋಗ ಕಂಡುಬಂದಿತ್ತು. ಇದೀಗ ಆ ಸಂಖ್ಯೆ 216ಕ್ಕೆ ಏರಿದೆ. ಲಸಿಕೆ ನೀಡುವ ಪ್ರಕ್ರಿಯೆ ವೇಗ ಪಡೆದುಕೊಂಡಿದೆ.</p>.<p>ವಿಪರೀತ ಜ್ವರ ಬಂದು ಚರ್ಮ ಗಂಟುಕಟ್ಟುವ ಈ ರೋಗವು (ಲಂಪಿ ಸ್ಕಿನ್ ಡಿಸೀಸ್) ಎರಡು ವರ್ಷಗಳ ಈಚೆಗೆ ಭಾರತದಲ್ಲಿ ಕಾಣಿಸಿಕೊಂಡಿತ್ತು. ಕೆಲವು ವಾರಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಹರಡುವ ಮೂಲಕ ರೈತರಲ್ಲಿ ಆತಂಕ ಸೃಷ್ಟಿಸಿದೆ.</p>.<p>ಲಸಿಕೆ ನೀಡಿ 21 ದಿನ ಬೇಕು: ‘ಕ್ಯಾಪ್ರಿಫಾಕ್ಸ್’ ಎಂಬ ಹೆಸರಿನ ವೈರಾಣುವಿನಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಈಗ ಇದೇ ವೈರಾಣುವಿನ ಜೀವಂತ ಲಸಿಕೆಯನ್ನೇ ಪ್ರತಿರೋಧಕ ಔಷಧವಾಗಿ ನೀಡಲಾಗುತ್ತಿದೆ. ಜಾನುವಾರಿಗೆ ಈ ಲಸಿಕೆ ನೀಡಿದ ಮೇಲೆ ಈ ರೋಗದ ನಿರೋಧಕ ಶಕ್ತಿಯು ಜಾನುವಾರುಗಳ ದೇಹದಲ್ಲಿ ಅಭಿವೃದ್ಧಿಯಾಗಲು ಕನಿಷ್ಠ 21 ದಿನಗಳಾದರೂ ಬೇಕು. ಹಾಗಾಗಿ ಲಸಿಕೆ ನೀಡಿದ ಕೂಡಲೇ ಈ ಸಾಂಕ್ರಮಿಕ ರೋಗ ಬರುವುದಿಲ್ಲ ಎಂದು ರೈತರು ಭಾವಿಸಬಾರದು ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಸೊಳ್ಳೆ, ಉಣ್ಣೆ, ನೊಣ, ಕುದುರೆ ನೊಣ ಹಾಗೂ ವಿವಿಧ ಕೀಟಗಳ ಮೂಲಕ ಈ ಕಾಯಿಲೆ ಹರಡುತ್ತದೆ. ಆದರೆ ಆರೋಗ್ಯವಂತ ಜಾನುವಾರುಗಳಿಗೆ ಇದರಿಂದ ಏನೂ ಸಮಸ್ಯೆ ಉಂಟಾಗುವುದಿಲ್ಲ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜಾನುವಾರುಗಳಿಗೆ ತೀವ್ರ ಸಮಸ್ಯೆಯಾಗುತ್ತದೆ. ಜಿಲ್ಲೆಯಲ್ಲಿ ಈವರೆಗೆ ಈ ಕಾಯಿಲೆ ಬಂದ ಎಲ್ಲ ಜಾನುವಾರುಗಳು ಚೇತರಿಸಿಕೊಳ್ಳುತ್ತಿವೆ. ಯಾವುದೇ ಜಾನುವಾರು ಸಾವಿಗೀಡಾಗಿಲ್ಲ ಎಂದು ಅವರು ಮಾಹಿತಿ ನೀಡಿದರು.</p>.<p>ದನಕರುಗಳಿಗೆ ಚರ್ಮಗಂಟು ರೋಗ ಬಂದ ಕೂಡಲೇ ಲಸಿಕೆ ಹಾಕಿಸಲು ರೈತರು ಪಶುವೈದ್ಯರನ್ನು ಕರೆದೊಯ್ಯುತ್ತಿದ್ದಾರೆ. ರೋಗ ಕಾಣಿಸಿಕೊಂಡ ಜಾನುವಾರುಗಳಿಗೆ ಈ ಲಸಿಕೆ ನೀಡಿದರೂ ಪ್ರಯೋಜನವಿಲ್ಲ. ಅವುಗಳಿಗೆ ಔಷಧ ಕೊಡಬೇಕು. ರೋಗ ಕಾಣಿಸದ ಜಾನುವಾರುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಿಸಬೇಕು. ರೋಗ ಕಾಣಿಸಿರುವ ಸ್ಥಳದಿಂದ 3 ಕಿಲೋಮೀಟರ್ ವ್ಯಾಪ್ತಿಯ ಹಳ್ಳಿಗಳ ಜಾನುವಾರುಗಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.</p>.<p>30 ಸಾವಿರ ಡೋಸ್: ಜಿಲ್ಲೆಯಲ್ಲಿ ಸದ್ಯ 30 ಸಾವಿರ ಡೋಸ್ ಲಸಿಕೆ ಲಭ್ಯವಿದ್ದು, ಅಗತ್ಯವಿರುವ ಜಾನುವಾರುಗಳಿಗೆ ನೀಡಲಾಗುತ್ತಿದೆ. ಅ.15ಕ್ಕೆ ಇನ್ನಷ್ಟು ಲಸಿಕೆ ಬರಲಿದೆ. ಈ ರೋಗವು ಮನುಷ್ಯರಿಗೆ ಹರಡುವುದಿಲ್ಲ. ಕುರಿ, ಮೇಕೆಗಳಿಗೂ ಹರಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.</p>.<p>ಅಂಕಿ ಅಂಶ</p>.<p>3.28 ಲಕ್ಷ</p>.<p>ದಾವಣಗೆರೆ ಜಿಲ್ಲೆಯಲ್ಲಿ ಇರುವ ಜಾನುವಾರುಗಳ ಸಂಖ್ಯೆ</p>.<p>4,053</p>.<p>ವಿಮೆ ಹೊಂದಿರುವ ಜಾನುವಾರುಗಳು</p>.<p>216</p>.<p>ಚರ್ಮಗಂಟು ರೊಗ ಕಾಣಿಸಿಕೊಂಡ ಜಾನುವಾರುಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ದಾವಣಗೆರೆ: ಜಾನುವಾರುಗಳಲ್ಲಿ ಕಾಣಿಸಿಕೊಂಡಿರುವ ಚರ್ಮಗಂಟು ರೋಗವು ಜಿಲ್ಲೆಯಾದ್ಯಂತ ನಿಧಾನಗತಿಯಲ್ಲಿ ಹೆಚ್ಚುತ್ತಿದೆ. ವಾರದ ಹಿಂದೆ ಜಿಲ್ಲೆಯಲ್ಲಿ 90 ಜಾನುವಾರುಗಳಲ್ಲಿ ಈ ರೋಗ ಕಂಡುಬಂದಿತ್ತು. ಇದೀಗ ಆ ಸಂಖ್ಯೆ 216ಕ್ಕೆ ಏರಿದೆ. ಲಸಿಕೆ ನೀಡುವ ಪ್ರಕ್ರಿಯೆ ವೇಗ ಪಡೆದುಕೊಂಡಿದೆ.</p>.<p>ವಿಪರೀತ ಜ್ವರ ಬಂದು ಚರ್ಮ ಗಂಟುಕಟ್ಟುವ ಈ ರೋಗವು (ಲಂಪಿ ಸ್ಕಿನ್ ಡಿಸೀಸ್) ಎರಡು ವರ್ಷಗಳ ಈಚೆಗೆ ಭಾರತದಲ್ಲಿ ಕಾಣಿಸಿಕೊಂಡಿತ್ತು. ಕೆಲವು ವಾರಗಳಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ಹರಡುವ ಮೂಲಕ ರೈತರಲ್ಲಿ ಆತಂಕ ಸೃಷ್ಟಿಸಿದೆ.</p>.<p>ಲಸಿಕೆ ನೀಡಿ 21 ದಿನ ಬೇಕು: ‘ಕ್ಯಾಪ್ರಿಫಾಕ್ಸ್’ ಎಂಬ ಹೆಸರಿನ ವೈರಾಣುವಿನಿಂದ ಈ ರೋಗ ಕಾಣಿಸಿಕೊಳ್ಳುತ್ತದೆ. ಅದಕ್ಕೆ ಈಗ ಇದೇ ವೈರಾಣುವಿನ ಜೀವಂತ ಲಸಿಕೆಯನ್ನೇ ಪ್ರತಿರೋಧಕ ಔಷಧವಾಗಿ ನೀಡಲಾಗುತ್ತಿದೆ. ಜಾನುವಾರಿಗೆ ಈ ಲಸಿಕೆ ನೀಡಿದ ಮೇಲೆ ಈ ರೋಗದ ನಿರೋಧಕ ಶಕ್ತಿಯು ಜಾನುವಾರುಗಳ ದೇಹದಲ್ಲಿ ಅಭಿವೃದ್ಧಿಯಾಗಲು ಕನಿಷ್ಠ 21 ದಿನಗಳಾದರೂ ಬೇಕು. ಹಾಗಾಗಿ ಲಸಿಕೆ ನೀಡಿದ ಕೂಡಲೇ ಈ ಸಾಂಕ್ರಮಿಕ ರೋಗ ಬರುವುದಿಲ್ಲ ಎಂದು ರೈತರು ಭಾವಿಸಬಾರದು ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>ಸೊಳ್ಳೆ, ಉಣ್ಣೆ, ನೊಣ, ಕುದುರೆ ನೊಣ ಹಾಗೂ ವಿವಿಧ ಕೀಟಗಳ ಮೂಲಕ ಈ ಕಾಯಿಲೆ ಹರಡುತ್ತದೆ. ಆದರೆ ಆರೋಗ್ಯವಂತ ಜಾನುವಾರುಗಳಿಗೆ ಇದರಿಂದ ಏನೂ ಸಮಸ್ಯೆ ಉಂಟಾಗುವುದಿಲ್ಲ. ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜಾನುವಾರುಗಳಿಗೆ ತೀವ್ರ ಸಮಸ್ಯೆಯಾಗುತ್ತದೆ. ಜಿಲ್ಲೆಯಲ್ಲಿ ಈವರೆಗೆ ಈ ಕಾಯಿಲೆ ಬಂದ ಎಲ್ಲ ಜಾನುವಾರುಗಳು ಚೇತರಿಸಿಕೊಳ್ಳುತ್ತಿವೆ. ಯಾವುದೇ ಜಾನುವಾರು ಸಾವಿಗೀಡಾಗಿಲ್ಲ ಎಂದು ಅವರು ಮಾಹಿತಿ ನೀಡಿದರು.</p>.<p>ದನಕರುಗಳಿಗೆ ಚರ್ಮಗಂಟು ರೋಗ ಬಂದ ಕೂಡಲೇ ಲಸಿಕೆ ಹಾಕಿಸಲು ರೈತರು ಪಶುವೈದ್ಯರನ್ನು ಕರೆದೊಯ್ಯುತ್ತಿದ್ದಾರೆ. ರೋಗ ಕಾಣಿಸಿಕೊಂಡ ಜಾನುವಾರುಗಳಿಗೆ ಈ ಲಸಿಕೆ ನೀಡಿದರೂ ಪ್ರಯೋಜನವಿಲ್ಲ. ಅವುಗಳಿಗೆ ಔಷಧ ಕೊಡಬೇಕು. ರೋಗ ಕಾಣಿಸದ ಜಾನುವಾರುಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಲಸಿಕೆ ಹಾಕಿಸಬೇಕು. ರೋಗ ಕಾಣಿಸಿರುವ ಸ್ಥಳದಿಂದ 3 ಕಿಲೋಮೀಟರ್ ವ್ಯಾಪ್ತಿಯ ಹಳ್ಳಿಗಳ ಜಾನುವಾರುಗಳಿಗೆ ಲಸಿಕೆ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು.</p>.<p>30 ಸಾವಿರ ಡೋಸ್: ಜಿಲ್ಲೆಯಲ್ಲಿ ಸದ್ಯ 30 ಸಾವಿರ ಡೋಸ್ ಲಸಿಕೆ ಲಭ್ಯವಿದ್ದು, ಅಗತ್ಯವಿರುವ ಜಾನುವಾರುಗಳಿಗೆ ನೀಡಲಾಗುತ್ತಿದೆ. ಅ.15ಕ್ಕೆ ಇನ್ನಷ್ಟು ಲಸಿಕೆ ಬರಲಿದೆ. ಈ ರೋಗವು ಮನುಷ್ಯರಿಗೆ ಹರಡುವುದಿಲ್ಲ. ಕುರಿ, ಮೇಕೆಗಳಿಗೂ ಹರಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.</p>.<p>ಅಂಕಿ ಅಂಶ</p>.<p>3.28 ಲಕ್ಷ</p>.<p>ದಾವಣಗೆರೆ ಜಿಲ್ಲೆಯಲ್ಲಿ ಇರುವ ಜಾನುವಾರುಗಳ ಸಂಖ್ಯೆ</p>.<p>4,053</p>.<p>ವಿಮೆ ಹೊಂದಿರುವ ಜಾನುವಾರುಗಳು</p>.<p>216</p>.<p>ಚರ್ಮಗಂಟು ರೊಗ ಕಾಣಿಸಿಕೊಂಡ ಜಾನುವಾರುಗಳು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>