<p><strong>ದಾವಣಗೆರೆ:</strong> ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ‘ಕಥೆ’ ಮತ್ತು ‘ಕವನ’ ರಚನೆ ಸ್ಪರ್ಧೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಮಾತ್ರ ಅವಕಾಶ ಕಲ್ಪಿಸಿದ್ದಕ್ಕಾಗಿ ಸ್ಪರ್ಧಾಳುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಪಸ್ವರಕ್ಕೆ ಮಣಿದ ಆಯೋಜಕರು ಕೊನೆಯ ಕ್ಷಣದಲ್ಲಿ ಕನ್ನಡದಲ್ಲಿ ಕಥೆ, ಕವನ ರಚನೆಗೂ ಅವಕಾಶ ಮಾಡಿಕೊಟ್ಟರು.</p> <p>ಇಲ್ಲಿನ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ಭಾನುವಾರ ಆರಂಭವಾದ ಉತ್ಸವದಲ್ಲಿ ಮಧ್ಯಾಹ್ನ ಕವನ ರಚನೆ ಸ್ಪರ್ಧೆ ನಡೆಯಿತು. ಕಥಾ ಸ್ಪರ್ಧೆಗೆ 20 ಹಾಗೂ ಕವನ ರಚನೆ ಸ್ಪರ್ಧೆಗೆ 22 ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.</p> <p>‘ಭವಿಷ್ಯದ ಭಾರತವನ್ನು ಮಹಾಶಕ್ತಿಯಾಗಿ ಕಾಣಲು ನನ್ನ ದೃಷ್ಟಿಕೋನ’ ಎಂಬ ವಿಷಯದ ಮೇಲೆ ಕಥೆ ಬರೆಯುವಂತೆ ಸೂಚಿಸಲಾಗಿತ್ತು. ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆದ ಕಥೆ ಮತ್ತು ಕವನವನ್ನು ಮಾತ್ರ ಆಯ್ಕೆ ಮಾಡಲಾಗುವುದು ಎಂಬ ಆಯೋಜಕರ ಷರತ್ತು ಸ್ಪರ್ಧಾಳುಗಳನ್ನು ಕೆರಳಿಸಿತು.</p> <p>ಸ್ಪರ್ಧೆಯಲ್ಲಿ ಪಾಲ್ಗೊಂಡವರು ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡದಲ್ಲಿ ಮಾತ್ರವೇ ಕಥೆ–ಕವನ ಬರೆಯುವುದಾಗಿ ಪಟ್ಟು ಹಿಡಿದರು. ‘ಸ್ಪರ್ಧೆಯಲ್ಲಿ ಗೆದ್ದವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುತ್ತಿರುವುದರಿಂದ ಕನ್ನಡ ಪರಿಗಣಿಸುವುದಿಲ್ಲ’ ಎಂಬುದನ್ನು ಈ ಮೊದಲೇ ತಿಳಿಸಲಾಗಿತ್ತು ಎಂದು ಆಯೋಜಕರು ಸಮರ್ಥನೆ ನೀಡಿದರು. ಸ್ಪರ್ಧಾಳುಗಳ ಒತ್ತಡಕ್ಕೆ ಮಣಿದು ಕನ್ನಡದಲ್ಲಿ ಕಥೆ–ಕವನ ರಚನೆಗೆ ಅವಕಾಶ ಮಾಡಿಕೊಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ:</strong> ರಾಜ್ಯ ಮಟ್ಟದ ಯುವಜನೋತ್ಸವದಲ್ಲಿ ‘ಕಥೆ’ ಮತ್ತು ‘ಕವನ’ ರಚನೆ ಸ್ಪರ್ಧೆಯಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಗೆ ಮಾತ್ರ ಅವಕಾಶ ಕಲ್ಪಿಸಿದ್ದಕ್ಕಾಗಿ ಸ್ಪರ್ಧಾಳುಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಅಪಸ್ವರಕ್ಕೆ ಮಣಿದ ಆಯೋಜಕರು ಕೊನೆಯ ಕ್ಷಣದಲ್ಲಿ ಕನ್ನಡದಲ್ಲಿ ಕಥೆ, ಕವನ ರಚನೆಗೂ ಅವಕಾಶ ಮಾಡಿಕೊಟ್ಟರು.</p> <p>ಇಲ್ಲಿನ ಬಾಪೂಜಿ ಎಂಬಿಎ ಕಾಲೇಜು ಆವರಣದಲ್ಲಿ ಭಾನುವಾರ ಆರಂಭವಾದ ಉತ್ಸವದಲ್ಲಿ ಮಧ್ಯಾಹ್ನ ಕವನ ರಚನೆ ಸ್ಪರ್ಧೆ ನಡೆಯಿತು. ಕಥಾ ಸ್ಪರ್ಧೆಗೆ 20 ಹಾಗೂ ಕವನ ರಚನೆ ಸ್ಪರ್ಧೆಗೆ 22 ಸ್ಪರ್ಧಾಳುಗಳು ಪಾಲ್ಗೊಂಡಿದ್ದರು.</p> <p>‘ಭವಿಷ್ಯದ ಭಾರತವನ್ನು ಮಹಾಶಕ್ತಿಯಾಗಿ ಕಾಣಲು ನನ್ನ ದೃಷ್ಟಿಕೋನ’ ಎಂಬ ವಿಷಯದ ಮೇಲೆ ಕಥೆ ಬರೆಯುವಂತೆ ಸೂಚಿಸಲಾಗಿತ್ತು. ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬರೆದ ಕಥೆ ಮತ್ತು ಕವನವನ್ನು ಮಾತ್ರ ಆಯ್ಕೆ ಮಾಡಲಾಗುವುದು ಎಂಬ ಆಯೋಜಕರ ಷರತ್ತು ಸ್ಪರ್ಧಾಳುಗಳನ್ನು ಕೆರಳಿಸಿತು.</p> <p>ಸ್ಪರ್ಧೆಯಲ್ಲಿ ಪಾಲ್ಗೊಂಡವರು ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕನ್ನಡದಲ್ಲಿ ಮಾತ್ರವೇ ಕಥೆ–ಕವನ ಬರೆಯುವುದಾಗಿ ಪಟ್ಟು ಹಿಡಿದರು. ‘ಸ್ಪರ್ಧೆಯಲ್ಲಿ ಗೆದ್ದವರು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುತ್ತಿರುವುದರಿಂದ ಕನ್ನಡ ಪರಿಗಣಿಸುವುದಿಲ್ಲ’ ಎಂಬುದನ್ನು ಈ ಮೊದಲೇ ತಿಳಿಸಲಾಗಿತ್ತು ಎಂದು ಆಯೋಜಕರು ಸಮರ್ಥನೆ ನೀಡಿದರು. ಸ್ಪರ್ಧಾಳುಗಳ ಒತ್ತಡಕ್ಕೆ ಮಣಿದು ಕನ್ನಡದಲ್ಲಿ ಕಥೆ–ಕವನ ರಚನೆಗೆ ಅವಕಾಶ ಮಾಡಿಕೊಡಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>