<p><strong>ಧಾರವಾಡ</strong>: `ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ ಲೇಖಕಿ ಗೀತಾ ಕುಲಕರ್ಣಿ ಅವರು ಮಾನವೀಯ ಅನುಕಂಪದ ಜೊತೆಗೆ ಅಂತರಂಗದ ಭಾವನೆಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವ ಮನೋಭಾವ ಹೊಂದಿದ್ದರು' ಎಂದು ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಹೇಳಿದರು.<br /> <br /> ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗುರುವಾರ ನಡೆದ `ಗೀತಾ ಕುಲಕರ್ಣಿ ಸಂಸ್ಮರಣೆ' ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> <br /> `ಕಣ್ಣಿಗೆ ಕಾಣುವ ಸತ್ಯ, ನಿಜವಾದ ಸತ್ಯ ಎರಡೂ ಒಂದೇ ಅಲ್ಲ. ಧಾರವಾಡದ ಗೆಳೆಯರ ಗುಂಪಿಗಾಗಿ ಹಗಲಿರುಳು ಶ್ರಮಿಸಿದ ಶೇ.ಗೊ.ಕುಲಕರ್ಣಿಯವರು ಗೆಳೆಯರ ಗುಂಪಿನ ದೊಡ್ಡವರ ಸಣ್ಣತನದಿಂದ ಜೀವನದಲ್ಲಿ ಸಂಕಷ್ಟಗಳನ್ನು ಅನುಭವಿಸಬೇಕಾಯಿತು' ಎಂದು ವಿಷಾದಿಸಿದರು.<br /> <br /> ಸುಂದರ ಪುಸ್ತಕ ಪ್ರಕಾಶನದ ಡಾ.ಶಿವಾನಂದ ಗಾಳಿ ಅವರು ಪ್ರಕಟಿಸಿದ `ಗೀತಾಂಜಲಿ' ಕೃತಿಯನ್ನು ಬಿಡುಗಡೆ ಮಾಡಿದ ಡಾ.ಪಂಚಾಕ್ಷರಿ ಹಿರೇಮಠ, `ಗೀತಾ ಬರೀ ಲೇಖಕಿ ಅಥವಾ ಕಥೆಗಾರ್ತಿಯಾಗಿರಲಿಲ್ಲ. ಅಪಾರ ಅಂತಃಕರಣದ, ಕೋಮಲ ಮನಸ್ಸಿನ ಚೇತನ ಶಕ್ತಿಯಾ ಗಿದ್ದರು. ಅವರ ಜೀವನೋತ್ಸಾಹ ಅತ್ಯದ್ಭುತವಾ ದದ್ದಾಗಿತ್ತು. ಶ್ರದ್ಧೆ ಹಾಗೂ ಪ್ರೀತಿಯಿಂದ ಹಿಡಿದ ಕಾರ್ಯ ವನ್ನು ಅವರು ಸಾಧಿಸಿ ತೋರಿಸಬಲ್ಲ ಸಾಮರ್ಥ್ಯ ಉಳ್ಳವರಾಗಿದ್ದರು' ಎಂದರು.<br /> <br /> ಬೆಂಗಳೂರಿನ ವಸಂತ ಪುಸ್ತಕ ಪ್ರಕಾಶನದವರು ಪ್ರಕಟಿಸಿದ ಶೇ.ಗೊ.ಕುಲಕರ್ಣಿಯವರ `ನಾನು ಕಂಡ ಗೆಳೆಯರ ಗುಂಪು' ಕೃತಿ ಬಿಡುಗಡೆ ಮಾಡಿದ ಹಿರಿಯ ಕವಿ ಡಾ.ಚನ್ನವೀರ ಕಣವಿ, `ವಾತ್ಸಲ್ಯದ ವೈಯಕ್ತಿಕ ಅನುಭವ ಸಾರ್ವತ್ರಿಕವಾದಾಗ ಸಾಹಿತ್ಯದ ರುಚಿ ಹೆಚ್ಚುತ್ತದೆ. 32 ವರ್ಷಗಳ ಹಿಂದೆ ಮೂರು ಸಂಪುಟ ಗಳಲ್ಲಿ ಪ್ರಕಟಗೊಂಡಿದ್ದ ಈ ಕೃತಿ ಇಂದು ಮೂರೂ ಸೇರಿ ಒಂದೇ ಸಂಪುಟದಲ್ಲಿ ಪ್ರಕಟಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಪ್ರಾಧ್ಯಾಪಕಿ ಡಾ.ಶಾಂತಾ ಇಮ್ರಾಪುರ ಶೇ.ಗೊ.ಕುಲಕರ್ಣಿ, ಗೀತಾ ಒಡನಾಟದ ನೆನಪುಗಳನ್ನು ಹಂಚಿಕೊಂಡರು.<br /> <br /> ಡಾ.ಶ್ಯಾಮಸುಂದರ ಬಿದರಕುಂದಿ `ನಾನು ಕಂಡ ಗೆಳೆಯರ ಗುಂಪು' ಕೃತಿಯ ಕುರಿತು ಮಾತನಾಡಿದರು.<br /> <br /> ಡಾ.ವೀಣಾ ಬನ್ನಂಜೆ ಅವರು ಗೀತಾ ಕುಲಕರ್ಣಿ ಹಾಗೂ ತಮ್ಮ ನಡುವಿನ ಕೌಟುಂಬಿಕ ಬಾಂಧವ್ಯದ ನೆನಪುಗಳನ್ನು ಹೃದಯಸ್ಪರ್ಶಿಯಾಗಿ ಹಂಚಿಕೊಂಡರು.<br /> <br /> ಗೀತಾಂಜಲಿಯ ಪ್ರಧಾನ ಸಂಪಾದಕಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.<br /> <br /> ಡಾ.ಜಿನದತ್ತ ಹಡಗಲಿ ನಿರೂಪಿಸಿದರು. ರಂಜನಾ ನಾಯಕ ವಂದಿಸಿದರು. ಬೆಳಗಾವಿಯ ಕನ್ನಡ ಮಹಿಳಾ ಸಂಘದ ಸದಸ್ಯೆಯರು ಪ್ರಾರ್ಥಿಸಿದರು. ಇಂದುಮತಿ ಪಾಟೀಲ ವೇದಿಕೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: `ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿದ ಲೇಖಕಿ ಗೀತಾ ಕುಲಕರ್ಣಿ ಅವರು ಮಾನವೀಯ ಅನುಕಂಪದ ಜೊತೆಗೆ ಅಂತರಂಗದ ಭಾವನೆಗಳನ್ನು ಆತ್ಮೀಯರೊಂದಿಗೆ ಹಂಚಿಕೊಳ್ಳುವ ಮನೋಭಾವ ಹೊಂದಿದ್ದರು' ಎಂದು ಹಿರಿಯ ಪತ್ರಕರ್ತ ಡಾ.ಪಾಟೀಲ ಪುಟ್ಟಪ್ಪ ಹೇಳಿದರು.<br /> <br /> ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಗುರುವಾರ ನಡೆದ `ಗೀತಾ ಕುಲಕರ್ಣಿ ಸಂಸ್ಮರಣೆ' ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.<br /> <br /> `ಕಣ್ಣಿಗೆ ಕಾಣುವ ಸತ್ಯ, ನಿಜವಾದ ಸತ್ಯ ಎರಡೂ ಒಂದೇ ಅಲ್ಲ. ಧಾರವಾಡದ ಗೆಳೆಯರ ಗುಂಪಿಗಾಗಿ ಹಗಲಿರುಳು ಶ್ರಮಿಸಿದ ಶೇ.ಗೊ.ಕುಲಕರ್ಣಿಯವರು ಗೆಳೆಯರ ಗುಂಪಿನ ದೊಡ್ಡವರ ಸಣ್ಣತನದಿಂದ ಜೀವನದಲ್ಲಿ ಸಂಕಷ್ಟಗಳನ್ನು ಅನುಭವಿಸಬೇಕಾಯಿತು' ಎಂದು ವಿಷಾದಿಸಿದರು.<br /> <br /> ಸುಂದರ ಪುಸ್ತಕ ಪ್ರಕಾಶನದ ಡಾ.ಶಿವಾನಂದ ಗಾಳಿ ಅವರು ಪ್ರಕಟಿಸಿದ `ಗೀತಾಂಜಲಿ' ಕೃತಿಯನ್ನು ಬಿಡುಗಡೆ ಮಾಡಿದ ಡಾ.ಪಂಚಾಕ್ಷರಿ ಹಿರೇಮಠ, `ಗೀತಾ ಬರೀ ಲೇಖಕಿ ಅಥವಾ ಕಥೆಗಾರ್ತಿಯಾಗಿರಲಿಲ್ಲ. ಅಪಾರ ಅಂತಃಕರಣದ, ಕೋಮಲ ಮನಸ್ಸಿನ ಚೇತನ ಶಕ್ತಿಯಾ ಗಿದ್ದರು. ಅವರ ಜೀವನೋತ್ಸಾಹ ಅತ್ಯದ್ಭುತವಾ ದದ್ದಾಗಿತ್ತು. ಶ್ರದ್ಧೆ ಹಾಗೂ ಪ್ರೀತಿಯಿಂದ ಹಿಡಿದ ಕಾರ್ಯ ವನ್ನು ಅವರು ಸಾಧಿಸಿ ತೋರಿಸಬಲ್ಲ ಸಾಮರ್ಥ್ಯ ಉಳ್ಳವರಾಗಿದ್ದರು' ಎಂದರು.<br /> <br /> ಬೆಂಗಳೂರಿನ ವಸಂತ ಪುಸ್ತಕ ಪ್ರಕಾಶನದವರು ಪ್ರಕಟಿಸಿದ ಶೇ.ಗೊ.ಕುಲಕರ್ಣಿಯವರ `ನಾನು ಕಂಡ ಗೆಳೆಯರ ಗುಂಪು' ಕೃತಿ ಬಿಡುಗಡೆ ಮಾಡಿದ ಹಿರಿಯ ಕವಿ ಡಾ.ಚನ್ನವೀರ ಕಣವಿ, `ವಾತ್ಸಲ್ಯದ ವೈಯಕ್ತಿಕ ಅನುಭವ ಸಾರ್ವತ್ರಿಕವಾದಾಗ ಸಾಹಿತ್ಯದ ರುಚಿ ಹೆಚ್ಚುತ್ತದೆ. 32 ವರ್ಷಗಳ ಹಿಂದೆ ಮೂರು ಸಂಪುಟ ಗಳಲ್ಲಿ ಪ್ರಕಟಗೊಂಡಿದ್ದ ಈ ಕೃತಿ ಇಂದು ಮೂರೂ ಸೇರಿ ಒಂದೇ ಸಂಪುಟದಲ್ಲಿ ಪ್ರಕಟಗೊಂಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು. ಪ್ರಾಧ್ಯಾಪಕಿ ಡಾ.ಶಾಂತಾ ಇಮ್ರಾಪುರ ಶೇ.ಗೊ.ಕುಲಕರ್ಣಿ, ಗೀತಾ ಒಡನಾಟದ ನೆನಪುಗಳನ್ನು ಹಂಚಿಕೊಂಡರು.<br /> <br /> ಡಾ.ಶ್ಯಾಮಸುಂದರ ಬಿದರಕುಂದಿ `ನಾನು ಕಂಡ ಗೆಳೆಯರ ಗುಂಪು' ಕೃತಿಯ ಕುರಿತು ಮಾತನಾಡಿದರು.<br /> <br /> ಡಾ.ವೀಣಾ ಬನ್ನಂಜೆ ಅವರು ಗೀತಾ ಕುಲಕರ್ಣಿ ಹಾಗೂ ತಮ್ಮ ನಡುವಿನ ಕೌಟುಂಬಿಕ ಬಾಂಧವ್ಯದ ನೆನಪುಗಳನ್ನು ಹೃದಯಸ್ಪರ್ಶಿಯಾಗಿ ಹಂಚಿಕೊಂಡರು.<br /> <br /> ಗೀತಾಂಜಲಿಯ ಪ್ರಧಾನ ಸಂಪಾದಕಿ ಪ್ರೊ.ಮಾಲತಿ ಪಟ್ಟಣಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು.<br /> <br /> ಡಾ.ಜಿನದತ್ತ ಹಡಗಲಿ ನಿರೂಪಿಸಿದರು. ರಂಜನಾ ನಾಯಕ ವಂದಿಸಿದರು. ಬೆಳಗಾವಿಯ ಕನ್ನಡ ಮಹಿಳಾ ಸಂಘದ ಸದಸ್ಯೆಯರು ಪ್ರಾರ್ಥಿಸಿದರು. ಇಂದುಮತಿ ಪಾಟೀಲ ವೇದಿಕೆಯಲ್ಲಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>