ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ಹುಬ್ಬಳ್ಳಿ | ಪ್ರೋತ್ಸಾಹದ ಕೊರತೆ: ಬಣ್ಣ ಕಳೆದುಕೊಂಡ ವೃತ್ತಿ ರಂಗಭೂಮಿ

ನೇಪಥ್ಯೆಕ್ಕೆ ಸರಿಯುತ್ತಿರುವ ಕಲಾವಿದರು
Published : 4 ನವೆಂಬರ್ 2024, 5:31 IST
Last Updated : 4 ನವೆಂಬರ್ 2024, 5:31 IST
ಫಾಲೋ ಮಾಡಿ
Comments
ಕೋವಿಡ್ ನಂತರ ಹಲವು ನಾಟಕ ಕಂಪನಿಗಳು ಮುಚ್ಚಿದವು. ಕಲಾವಿದರು ರಂಗಭೂಮಿಯಿಂದ ವಿಮುಖರಾದರು. ಈ ಪರಂಪರೆಯನ್ನು ಮುಂದುವರಿಸುವ ಉದ್ದೇಶದಿಂದ ಮತ್ತೆ ಕಂಪನಿ ಆರಂಭಿಸಲಾಗಿದೆ. ರಂಗಭೂಮಿ ಕಲಾವಿದರಿಗೆ ನಿಯಮಿತವಾಗಿ ಮಾಸಾಶನ ಬರುತ್ತಿಲ್ಲ. ಅಲ್ಲದೆ ಮಾಸಾಶನ ಹೆಚ್ಚಳ ಮಾಡಿಲ್ಲ. ವೃತ್ತಿ ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಯೋಜನೆ ರೂಪಿಸಬೇಕು
-ಪಾಪು ಕಲ್ಲೂರು, ಮಾಲೀಕ ಹೊಳೆಹುಚ್ಚೇಶ್ವರ ನಾಟ್ಯಸಂಘ ಕಮತಗಿ
ವೃತ್ತಿರಂಗಭೂಮಿ ಕ್ಷೇತ್ರಕ್ಕೆ ಐದು ವರ್ಷವಿದ್ದಾಗಲೇ ಪ್ರವೇಶ ಮಾಡಿದ್ದೇನೆ. ಸುಮಾರು 50 ವರ್ಷಗಳ ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ್ದೇನೆ. ಮೊದಲಿಗೆ ಇದ್ದ ವೈಭವ ಈಗ ಇಲ್ಲ. ಈಗಿನ ಯುವ ಕಲಾವಿದರಲ್ಲಿ ಬದ್ಧತೆಯ ಕೊರತೆ ಇದೆ. ಅಲ್ಲದೇ ಸಹೃದಯ ಕಲಾಪ್ರೇಕ್ಷಕರು ಕಡಿಮೆಯಾಗಿದ್ದಾರೆ. ನನ್ನ ಕುಟುಂಬದ ಪ್ರೋತ್ಸಾಹದಿಂದ ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ನಾಟಕ ನಮ್ಮ ತಾಯಿ ಇದ್ದ ಹಾಗೆ ಈಗ ಹೆಚ್ಚಿನ ಸಮಯಗಳಲ್ಲಿ ಧಾರವಾಹಿಯಲ್ಲಿ ಅಭಿನಯಿಸುತ್ತಿದ್ದೇನೆ. ಬೆಂಗಳೂರು–ಹುಬ್ಬಳ್ಳಿ ಓಡಾಟ ನಿರಂತರವಿದೆ. ಸರ್ಕಾರ ವೃತ್ತಿ ರಂಗಭೂಮಿಯನ್ನು ಉಳಿಸಲು ಪ್ರೋತ್ಸಾಹ ನೀಡಬೇಕು.
-ಸುನಂದಾ ಹೊಸಪೇಟೆ ವೃತ್ತಿರಂಗಭೂಮಿ ಕಲಾವಿದೆ
ವೃತ್ತಿರಂಗ ಭೂಮಿ ಕ್ಷೇತ್ರ ಉಳಿಸಲು ಹಾಗೂ ಜೀವಂತವಾಗಿಡಲು ಸುಮಾರು 50 ವರ್ಷ ಶ್ರಮಿಸಿದ್ದೇನೆ. ಆರಂಭದಲ್ಲಿ ಇದ್ದ ಸಂಸ್ಕೃತಿ ಕಳಕಳಿ ಈಗಿಲ್ಲ. ಇದರ ಮಧ್ಯೆಯೂ ಕಲಾವಿದರ ಸಂಕಷ್ಟಕ್ಕೆ ಸಾಕಷ್ಟು ಶ್ರಮಿಸಿದ್ದೇನೆ. ಹಿರಿಯರಾದ ಮಾಜಿ ಸಂಸದ ಐ.ಜಿ.ಸನದಿ ಸೇರಿದಂತೆ ಅನೇಕರ ಸಹಯೋಗದೊಂದಿಗೆ ಉತ್ತಮ ರಂಗಮಂದಿರ ಪಡೆಯಲು ಹೋರಾಟ ನಡೆದಿದೆ. ಈ ಹಿಂದೆ ಕಲಾವಿದರಿಗಾಗಿ ನಿವೇಶನಗಳನ್ನು ಕೊಡಿಸಿದ್ದೇವೆ. ಸಂಬಂಧಿಸಿದ ಇಲಾಖೆ ಕಲೆ ಕಲಾವಿದರನ್ನು ಉಳಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು.
ಡಾ.ಗೋವಿಂದ ಮಣ್ಣೂರು ಹಿರಿಯ ರಂಗಕರ್ಮಿ
ವೃತ್ತಿರಂಗಭೂಮಿ ಕಲಾವಿದರಿಗೆ ತರಬೇತಿಯ ಅಗತ್ಯವಿದೆ. ನಾಟಕ ಮಾಧ್ಯಮಕ್ಕೆ ಒಂದು ರೀತಿ ಶಿಸ್ತು ತರಬೇಕಿದೆ. ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳ ಜೊತೆ ಸ್ಪರ್ಧಿಸಬೇಕಾದ ಅನಿವಾರ್ಯತೆ ಇದೆ. ಸಿನಿಮಾ ರಂಗ ನಾಟಕ ಲೋಕಕ್ಕೆ ದೊಡ್ಡ ಹೊಡೆತ ನೀಡಿದೆ. ವೃತ್ತಿರಂಗಭೂಮಿಯ ಕಲಾವಿದರು ಆಧುನಿಕತೆಗೆ ತಕ್ಕಂತೆ ಹೊಂದಿಕೊಂಡು ಪ್ರದರ್ಶನ ನೀಡಬೇಕಿದೆ. ಪ್ರೇಕ್ಷಕರ ಕೊರತೆ ನಾಟಕ ರಂಗ ಕಾಡುತ್ತಿದೆ. ಮೊದಲ ವೈಭವ ತರಲು ಮತ್ತೆ ಶ್ರಮಿಸುತ್ತಿದ್ದೇವೆ
-ಬಸವರಾಜ ಬೆಂಗೇರಿ ಹಿರಿಯ ರಂಗ ಸಂಘಟಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT