<p><strong>ಹುಬ್ಬಳ್ಳಿ:</strong> ನಗರದ ಕೇಶ್ವಾಪುರ ಬಸ್ ನಿಲ್ದಾಣದಲ್ಲಿ ಇಬ್ಬರು ಮಕ್ಕಳೊಂದಿಗೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಮಹಿಳೆ, ಮಂಗಳವಾರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಏನೂ ಅರಿವಿಲ್ಲದಂತೆ ತಾಯಿಯ ಶವದ ಬಳಿ ಆಡುತ್ತಿದ್ದ ಮಕ್ಕಳನ್ನು ಕಂಡು ಸಾರ್ವಜನಿಕರು ಮಮ್ಮಲ ಮರುಗಿದರು.</p>.<p>ಮೃತಪಟ್ಟ ಮಹಿಳೆ ರುಕ್ಮಿಣಿ (48) ಎಂದು ಗುರುತಿಸಲಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ತಾಯಿಯ ಶವದ ಎದುರು ಹತ್ತು ಮತ್ತು ಎಂಟು ವರ್ಷದ ಇಬ್ಬರು ಗಂಡು ಮಕ್ಕಳು ಓಡಾಡುತ್ತಿದ್ದರು. ಚಿಕ್ಕ ಮಗ ಬಟ್ಟೆಯಿಲ್ಲದೆ ಆಟವಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು, ಬಟ್ಟೆ ತಂದು ತೊಡಿಸಿ, ತಿಂಡಿ ತಂದು ಕೊಟ್ಟರು. ಮಕ್ಕಳ ಅನಾಥ ಸ್ಥಿತಿ ಕಂಡು ಕೆಲವರು ಕಣ್ಣೀರು ಸುರಿಸಿದರು.</p>.<p>ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಮಾಹಿತಿ ಸಂಗ್ರಹಿಸಿ ಶವವನ್ನು ಕೆಎಂಸಿ–ಆರ್ಐ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. </p>.<p>‘ಕೆಲವು ವರ್ಷಗಳಿಂದ ಇಬ್ಬರು ಗಂಡು ಮಕ್ಕಳೊಂದಿಗೆ ಮಹಿಳೆ, ಭಿಕ್ಷೆ ಬೇಡುತ್ತ ಬಸ್ ತಂಗುದಾಣದಲ್ಲಿ ವಾಸುತ್ತಿದ್ದಳು. ಪ್ರತಿದಿನ ಸಾರ್ವಜನಿಕರು ಊಟ, ತಿಂಡಿ ನೀಡುತ್ತಿದ್ದರು. ಇತ್ತೀಚಿಗೆ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರಿಂದ, ದೊಡ್ಡ ಮಗನೇ ಭಿಕ್ಷೆ ಬೇಡಿ ಸಲುಹುತ್ತಿದ್ದ’ ಎಂದು ಸ್ಥಳೀಯ ನಿವಾಸಿಗಳು ಹೇಳಿದರು.</p>.<p>‘ಮಹಿಳೆಯ ಸಂಬಂಧಿಕರು ಶಬರಿನಗರದಲ್ಲಿರುವ ಮಾಹಿತಿ ತಿಳಿದು, ಮಕ್ಕಳನ್ನು ಅವರಿಗೆ ಒಪ್ಪಿಸಿದ್ದೇವೆ’ ಎಂದು ಇನ್ಸ್ಪೆಕ್ಟರ್ ಕೆ.ಎಸ್. ಹಟ್ಟಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ನಗರದ ಕೇಶ್ವಾಪುರ ಬಸ್ ನಿಲ್ದಾಣದಲ್ಲಿ ಇಬ್ಬರು ಮಕ್ಕಳೊಂದಿಗೆ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದ ಮಹಿಳೆ, ಮಂಗಳವಾರ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಏನೂ ಅರಿವಿಲ್ಲದಂತೆ ತಾಯಿಯ ಶವದ ಬಳಿ ಆಡುತ್ತಿದ್ದ ಮಕ್ಕಳನ್ನು ಕಂಡು ಸಾರ್ವಜನಿಕರು ಮಮ್ಮಲ ಮರುಗಿದರು.</p>.<p>ಮೃತಪಟ್ಟ ಮಹಿಳೆ ರುಕ್ಮಿಣಿ (48) ಎಂದು ಗುರುತಿಸಲಾಗಿದೆ. ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p>ತಾಯಿಯ ಶವದ ಎದುರು ಹತ್ತು ಮತ್ತು ಎಂಟು ವರ್ಷದ ಇಬ್ಬರು ಗಂಡು ಮಕ್ಕಳು ಓಡಾಡುತ್ತಿದ್ದರು. ಚಿಕ್ಕ ಮಗ ಬಟ್ಟೆಯಿಲ್ಲದೆ ಆಟವಾಡುತ್ತಿರುವುದನ್ನು ಗಮನಿಸಿದ ಸಾರ್ವಜನಿಕರು, ಬಟ್ಟೆ ತಂದು ತೊಡಿಸಿ, ತಿಂಡಿ ತಂದು ಕೊಟ್ಟರು. ಮಕ್ಕಳ ಅನಾಥ ಸ್ಥಿತಿ ಕಂಡು ಕೆಲವರು ಕಣ್ಣೀರು ಸುರಿಸಿದರು.</p>.<p>ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಮಾಹಿತಿ ಸಂಗ್ರಹಿಸಿ ಶವವನ್ನು ಕೆಎಂಸಿ–ಆರ್ಐ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. </p>.<p>‘ಕೆಲವು ವರ್ಷಗಳಿಂದ ಇಬ್ಬರು ಗಂಡು ಮಕ್ಕಳೊಂದಿಗೆ ಮಹಿಳೆ, ಭಿಕ್ಷೆ ಬೇಡುತ್ತ ಬಸ್ ತಂಗುದಾಣದಲ್ಲಿ ವಾಸುತ್ತಿದ್ದಳು. ಪ್ರತಿದಿನ ಸಾರ್ವಜನಿಕರು ಊಟ, ತಿಂಡಿ ನೀಡುತ್ತಿದ್ದರು. ಇತ್ತೀಚಿಗೆ ಮಹಿಳೆ ಅನಾರೋಗ್ಯದಿಂದ ಬಳಲುತ್ತಿದ್ದರಿಂದ, ದೊಡ್ಡ ಮಗನೇ ಭಿಕ್ಷೆ ಬೇಡಿ ಸಲುಹುತ್ತಿದ್ದ’ ಎಂದು ಸ್ಥಳೀಯ ನಿವಾಸಿಗಳು ಹೇಳಿದರು.</p>.<p>‘ಮಹಿಳೆಯ ಸಂಬಂಧಿಕರು ಶಬರಿನಗರದಲ್ಲಿರುವ ಮಾಹಿತಿ ತಿಳಿದು, ಮಕ್ಕಳನ್ನು ಅವರಿಗೆ ಒಪ್ಪಿಸಿದ್ದೇವೆ’ ಎಂದು ಇನ್ಸ್ಪೆಕ್ಟರ್ ಕೆ.ಎಸ್. ಹಟ್ಟಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>