ವಿಜಯವಾಡದಿಂದ ಬೆಳಿಗ್ಗೆ 11.30ಕ್ಕೆ ಇಲ್ಲಿಗೆ ಬಂದು ನಿಂತಿದ್ದ ವಿಜಯವಾಡ– ಅಮರಾವತಿ ಎಕ್ಸ್ಪ್ರೆಸ್ ರೈಲಿನ ಸಾಮಾನ್ಯ ಬೋಗಿಯಲ್ಲಿ ರಟ್ಟಿನ ಬಾಕ್ಸ್ ಇರುವುದು ಆರ್ಪಿಎಫ್ ಪೊಲೀಸರ ಕಣ್ಣಿಗೆ ಬಿತ್ತು. ಅದನ್ನು ಹುಸೇನ್ಸಾಬ್ ಅವರಿಂದ ತರಿಸಿ, ಸ್ಟೇಷನ್ ಮಾಸ್ಟರ್ ಕೊಠಡಿಯಲ್ಲಿ ಬಿಚ್ಚಿದರು. ರಟ್ಟಿನ ಬಾಕ್ಸ್ನಲ್ಲಿದ್ದ ಪ್ಲಾಸ್ಟಿಕ್ ಬಕೆಟ್ ತೆರೆದಾಗ, ಚಿಕ್ಕ ಚಿಕ್ಕ ಎಂಟು ಪ್ಲಾಸ್ಟಿಕ್ ಬಾಕ್ಸ್ಗಳು ಕಂಡು ಬಂದಿವೆ. ಅವುಗಳು ಅಲುಗಾಡದಂತೆ ಅದರ ಒಳಗೆ ಗೋಧಿ ತುಂಬಲಾಗಿತ್ತು.