<p><strong>ಕಲಘಟಗಿ</strong>: ಪ್ರಸ್ತುತ ವರ್ಷ ಅತಿ ಹೆಚ್ಚು ಮಳೆಯಾದರೂ ಬೆಳೆ ಹಾನಿ ಸಮೀಕ್ಷೆಯಿಂದ ತಾಲ್ಲೂಕು ಅನ್ನು ಕೈಬಿಡಲಾಗಿದ್ದು, ಮರುಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಹಾಗೂ ರೈತ ಸಂಘಟನೆ ಮುಖಂಡರು ಸೋಮವಾರ ತಹಶೀಲ್ದಾರ್ ಹಾಗೂ ಕೃಷಿ ಇಲಾಖೆಗೆ ಮನವಿ ಸಲ್ಲಿಸಿದರು.</p>.<p>ರೈತರು ಸಾಲ, ಶೂಲ ಮಾಡಿ ಬಿತ್ತನೆ ಬೀಜ ಹಾಗೂ ಗೊಬ್ಬರ ಖರೀದಿಸಿ ಬೆಳೆ ಬೆಳೆದಿರುತ್ತಾರೆ. ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಳೆಗೆ ಮೆಕ್ಕೆಜೋಳ, ಸೋಯಾಬಿನ್ ಇತರೆ ಬೆಳೆಗಳು ಹಾನಿ ಸಂಭವಿಸಿದೆ. ಜಿಲ್ಲೆಯ ಕಲಘಟಗಿ- ಅಳ್ಳಾವರ ಹೊರತುಪಡಿಸಿ ಉಳಿದ ತಾಲ್ಲೂಕು ಬೆಳೆ ಹಾನಿ ಪಟ್ಟಿಗೆ ಸೇರ್ಪಡೆಯಾಗಿ ಇಲ್ಲಿನ ರೈತ ವರ್ಗಕ್ಕೆ ಅನ್ಯಾಯವೆಸಗಿದ್ದಾರೆ. ಇಲ್ಲಿನ ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ಸರಿಯಾಗಿ ಮಾಹಿತಿ ನೀಡದೆ ಇರುವದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದರು.</p>.<p>ಸಂಬಂಧಪಟ್ಟ ಅಧಿಕಾರಿಗಳು ರೈತರ ಜಮೀನು ಪರಿಶೀಲಿಸಿ ಬೆಳೆ ಹಾನಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರೊಂದಿಗೆ ಪ್ರತಿಭಟನೆ ನಡೆಸಲಾಗುವದು ಎಂದು ಒತ್ತಾಯಿಸಿದರು.</p>.<p>ರೈತ ಮುಖಂಡರಾದ ವೀರಪ್ಪ ಶೀಗಿಗಟ್ಟಿ, ಹನುಮಂತಪ್ಪ ಕಲ್ಲವಡ್ಡರ, ಚಂದ್ರಯ್ಯ ಕುರಡಿಕೇರಿ ಬಸಪ್ಪ ಧಾರವಾಡ,ಬಸವರಾಜ ಕೊಪ್ಪದ ಗಾಣಿಗೇರ, ಚನ್ನಪ್ಪ ಹುಬ್ಬಳ್ಳಿ, ಮಾರುತಿ ಬೆನಕಣ್ಣವರ, ಮಹದೇವಪ್ಪ ಬಾರಕೇರ, ಕಲ್ಲಪ್ಪ ಕೀರೆಸೂರ ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಘಟಗಿ</strong>: ಪ್ರಸ್ತುತ ವರ್ಷ ಅತಿ ಹೆಚ್ಚು ಮಳೆಯಾದರೂ ಬೆಳೆ ಹಾನಿ ಸಮೀಕ್ಷೆಯಿಂದ ತಾಲ್ಲೂಕು ಅನ್ನು ಕೈಬಿಡಲಾಗಿದ್ದು, ಮರುಸೇರ್ಪಡೆ ಮಾಡಬೇಕು ಎಂದು ಒತ್ತಾಯಿಸಿ ಜೆಡಿಎಸ್ ಹಾಗೂ ರೈತ ಸಂಘಟನೆ ಮುಖಂಡರು ಸೋಮವಾರ ತಹಶೀಲ್ದಾರ್ ಹಾಗೂ ಕೃಷಿ ಇಲಾಖೆಗೆ ಮನವಿ ಸಲ್ಲಿಸಿದರು.</p>.<p>ರೈತರು ಸಾಲ, ಶೂಲ ಮಾಡಿ ಬಿತ್ತನೆ ಬೀಜ ಹಾಗೂ ಗೊಬ್ಬರ ಖರೀದಿಸಿ ಬೆಳೆ ಬೆಳೆದಿರುತ್ತಾರೆ. ಆಗಸ್ಟ್ ತಿಂಗಳಲ್ಲಿ ಅತಿ ಹೆಚ್ಚು ಮಳೆಗೆ ಮೆಕ್ಕೆಜೋಳ, ಸೋಯಾಬಿನ್ ಇತರೆ ಬೆಳೆಗಳು ಹಾನಿ ಸಂಭವಿಸಿದೆ. ಜಿಲ್ಲೆಯ ಕಲಘಟಗಿ- ಅಳ್ಳಾವರ ಹೊರತುಪಡಿಸಿ ಉಳಿದ ತಾಲ್ಲೂಕು ಬೆಳೆ ಹಾನಿ ಪಟ್ಟಿಗೆ ಸೇರ್ಪಡೆಯಾಗಿ ಇಲ್ಲಿನ ರೈತ ವರ್ಗಕ್ಕೆ ಅನ್ಯಾಯವೆಸಗಿದ್ದಾರೆ. ಇಲ್ಲಿನ ಅಧಿಕಾರಿಗಳು ಬೆಳೆ ಹಾನಿ ಬಗ್ಗೆ ಸರಿಯಾಗಿ ಮಾಹಿತಿ ನೀಡದೆ ಇರುವದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದರು.</p>.<p>ಸಂಬಂಧಪಟ್ಟ ಅಧಿಕಾರಿಗಳು ರೈತರ ಜಮೀನು ಪರಿಶೀಲಿಸಿ ಬೆಳೆ ಹಾನಿ ಪಟ್ಟಿಗೆ ಸೇರ್ಪಡೆ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರೊಂದಿಗೆ ಪ್ರತಿಭಟನೆ ನಡೆಸಲಾಗುವದು ಎಂದು ಒತ್ತಾಯಿಸಿದರು.</p>.<p>ರೈತ ಮುಖಂಡರಾದ ವೀರಪ್ಪ ಶೀಗಿಗಟ್ಟಿ, ಹನುಮಂತಪ್ಪ ಕಲ್ಲವಡ್ಡರ, ಚಂದ್ರಯ್ಯ ಕುರಡಿಕೇರಿ ಬಸಪ್ಪ ಧಾರವಾಡ,ಬಸವರಾಜ ಕೊಪ್ಪದ ಗಾಣಿಗೇರ, ಚನ್ನಪ್ಪ ಹುಬ್ಬಳ್ಳಿ, ಮಾರುತಿ ಬೆನಕಣ್ಣವರ, ಮಹದೇವಪ್ಪ ಬಾರಕೇರ, ಕಲ್ಲಪ್ಪ ಕೀರೆಸೂರ ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>