‘ಕಲಬುರ್ಗಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಮಹೇಶ್ವರಾನಂದ ಮಹಾರಾಜ್ ‘ತ್ಯಾಗ ಸೇವೆಗಳ ಹರಿಕಾರ ಸ್ವಾಮಿ ವಿವೇಕಾನಂದ’ ವಿಷಯ ಕುರಿತು, ದೇವರಹುಬ್ಬಳ್ಳಿಯ ಸಿದ್ಧಾರೂಢಮಠದ ಜಾನಮ್ಮ ಅವರು ‘ಅಧ್ಯಾತ್ಮಲೋಕದ ಧ್ರುವತಾರೆ ಶ್ರೀಮಾತೆ’ ವಿಷಯದ ಕುರಿತು ಉಪನ್ಯಾಸ ನೀಡುವರು. ಹುಬ್ಬಳ್ಳಿಯ ನಲಂದಾ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕಿ ಶಾಂತಲಾ ನಾಭಾಪುರ, ತುಳಜಾ ಭವಾನಿ ಶಿಕ್ಷಣ ಸಮಿತಿ ಸದಸ್ಯ ಪರಶುರಾಮಸಾ ಎಸ್. ಹಬೀಬ, ಸುಜ್ಞಾನ ಪಬ್ಲಿಕ್ ಶಾಲೆ ಪ್ರಾಚಾರ್ಯೆ ಸ್ಮಿತಾ ಧಾರವಾಡಕರ ಭಾಗವಹಿಸುವರು. ಸಂಜೆ 5 ಗಂಟೆಗೆ ವರಸಿದ್ಧಿ ಮಂಡಳಿಯಿಂದ ಭಜನೆ ಜರುಗಲಿದೆ’ ಎಂದು ತಿಳಿಸಿದರು.