<p><strong>ಕಲಘಟಗಿ:</strong> ಕಾಡಿನಿಂದ ನಾಡಿಗೆ ಬಂದ ಆರು ಆನೆಗಳ ಹಿಂಡು, ತಾಲ್ಲೂಕಿನ ಅರಣ್ಯದಂಚಿನ ಬಿರವಳ್ಳಿ ಗ್ರಾಮದ ರೈತರ ಹೊಲದಲ್ಲಿ ಬುಧವಾರ ಬೀಡುಬಿಟ್ಟಿವೆ. ಇವುಗಳನ್ನು ಕಾಡಿನತ್ತ ಕಳುಹಿಸಲು ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ಪ್ರಯತ್ನ ನಡೆಸಿದ್ದಾರೆ.</p>.<p>ಈ ಆನೆಗಳ ಹಿಂಡು ಮಂಗಳವಾರ ರಾತ್ರಿ ಕಾಡಿನಿಂದ ಬಂದಿದ್ದು, ಬುಧವಾರ ಬೆಳಿಗ್ಗೆ ರೈತರು ತಮ್ಮ ಜಮೀನಿಗೆ ಕೆಲಸಕ್ಕೆ ಹೋದಾಗ ಆನೆಗಳ ಹಿಂಡು ಕಂಡು ಭಯಭೀತರಾಗಿದ್ದಾರೆ. ಒಂದು ಮರಿ ಆನೆಯೂ ಹಿಂಡಿನಲ್ಲಿರುವುದರಿಂದ ಮನುಷ್ಯರನ್ನು ಕಂಡ ಆನೆಗಳೂ ಭಯದಿಂದ ದಾಳಿಗೆ ಮುಂದಾಗಿದ್ದವು ಎಂದೆನ್ನಲಾಗಿದೆ.</p>.<p>ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು, ಹಿಂಡನ್ನು ಕಾಡಿನತ್ತ ಕಳುಹಿಸಲು ಕಾರ್ಯಾಚರಣೆ ನಡೆಸಿದರು. ಬುಧವಾರ ಸಂಜೆಯವರೆಗೂ ಅರಣ್ಯಾಧಿಕಾರಿಗಳ ಪ್ರಯತ್ನ ಮುಂದುವರೆದಿತ್ತು. ಆನೆಗಳು ಕಾಡಿಗೆ ಮರಳುವವರೆಗೂ ಆನೆಗಳಿರುವ ಸ್ಥಳಕ್ಕೆ ಹಾಗೂ ಹೊಲಗಳಿಗೆ ಹೋಗದಂತೆ ಸೂಚಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ತಿಳಿಸಿದರು.</p>.<p>ಡ್ರೋನ್ ಮೂಲಕ ಆನೆಗಳ ಚಲನವಲನ ಕುರಿತು ಅಧಿಕಾರಿಗಳು ನಿಗಾ ವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಲಘಟಗಿ:</strong> ಕಾಡಿನಿಂದ ನಾಡಿಗೆ ಬಂದ ಆರು ಆನೆಗಳ ಹಿಂಡು, ತಾಲ್ಲೂಕಿನ ಅರಣ್ಯದಂಚಿನ ಬಿರವಳ್ಳಿ ಗ್ರಾಮದ ರೈತರ ಹೊಲದಲ್ಲಿ ಬುಧವಾರ ಬೀಡುಬಿಟ್ಟಿವೆ. ಇವುಗಳನ್ನು ಕಾಡಿನತ್ತ ಕಳುಹಿಸಲು ಅರಣ್ಯ ಇಲಾಖೆ ಸಿಬ್ಬಂದಿ ತೀವ್ರ ಪ್ರಯತ್ನ ನಡೆಸಿದ್ದಾರೆ.</p>.<p>ಈ ಆನೆಗಳ ಹಿಂಡು ಮಂಗಳವಾರ ರಾತ್ರಿ ಕಾಡಿನಿಂದ ಬಂದಿದ್ದು, ಬುಧವಾರ ಬೆಳಿಗ್ಗೆ ರೈತರು ತಮ್ಮ ಜಮೀನಿಗೆ ಕೆಲಸಕ್ಕೆ ಹೋದಾಗ ಆನೆಗಳ ಹಿಂಡು ಕಂಡು ಭಯಭೀತರಾಗಿದ್ದಾರೆ. ಒಂದು ಮರಿ ಆನೆಯೂ ಹಿಂಡಿನಲ್ಲಿರುವುದರಿಂದ ಮನುಷ್ಯರನ್ನು ಕಂಡ ಆನೆಗಳೂ ಭಯದಿಂದ ದಾಳಿಗೆ ಮುಂದಾಗಿದ್ದವು ಎಂದೆನ್ನಲಾಗಿದೆ.</p>.<p>ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಅರಣ್ಯಾಧಿಕಾರಿಗಳು, ಹಿಂಡನ್ನು ಕಾಡಿನತ್ತ ಕಳುಹಿಸಲು ಕಾರ್ಯಾಚರಣೆ ನಡೆಸಿದರು. ಬುಧವಾರ ಸಂಜೆಯವರೆಗೂ ಅರಣ್ಯಾಧಿಕಾರಿಗಳ ಪ್ರಯತ್ನ ಮುಂದುವರೆದಿತ್ತು. ಆನೆಗಳು ಕಾಡಿಗೆ ಮರಳುವವರೆಗೂ ಆನೆಗಳಿರುವ ಸ್ಥಳಕ್ಕೆ ಹಾಗೂ ಹೊಲಗಳಿಗೆ ಹೋಗದಂತೆ ಸೂಚಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ತಿಳಿಸಿದರು.</p>.<p>ಡ್ರೋನ್ ಮೂಲಕ ಆನೆಗಳ ಚಲನವಲನ ಕುರಿತು ಅಧಿಕಾರಿಗಳು ನಿಗಾ ವಹಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>