<p><strong>ಉಪ್ಪಿನಬೆಟಗೇರಿ:</strong> ಉಪ್ಪಿನಬೆಟಗೇರಿಯ ದೇವಸ್ಥಾನ ಸೇರಿದಂತೆ ವಿವಿಧೆಡೆ ಯುವಕ ಮಂಡಳದಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ಸೆಪ್ಟೆಂಬರ್ 2, 4 ಹಾಗೂ 6ರಂದು ನಡೆಯಲಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ.</p>.<p>ಈಗಾಗಲೇ ಕೆಲವು ಮನೆ ಹಾಗೂ ಶಾಲೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿದ್ದು, 7, 9 ಹಾಗೂ 11ನೇ ದಿನದ ವಿಸರ್ಜನೆ ಹಂತ, ಹಂತವಾಗಿ ನಡೆಯಲಿದೆ.</p>.<p>ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಬೈಲಹೊಂಗಲ ರಸ್ತೆಯ ತುಪ್ಪರಿಹಳ್ಳದ ಸೇತುವೆ ಮುಂಭಾಗದಲ್ಲಿ 10 ಅಡಿ ಆಳ, 50ಅಡಿ ಅಗಲ ಮತ್ತು ಉದ್ದದ ಗುಂಡಿ ತೆಗೆಯಲಾಗಿದೆ.</p>.<p>ರಾತ್ರಿ ವೇಳೆ ವಿಸರ್ಜನೆ ಕಾರ್ಯ ನಡೆಯುವುದರಿಂದ ಆ ಸ್ಥಳದಲ್ಲಿ ಹೈ ಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಹಳೇ ಬಸ್ ನಿಲ್ಧಾಣದಿಂದ ತುಪ್ಪರಿ ಹಳ್ಳದ ಸೇತುವೆ ವರೆಗಿನ ರಸ್ತೆಯ ಅಕ್ಕ-ಪಕ್ಕದಲ್ಲಿ ಸಂಗ್ರಹವಾದ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ. </p>.<p>ಗರಗ ಪೊಲೀಸ್ ಠಾಣೆ ವತಿಯಿಂದ ಈಗಾಗಲೇ ಶಾಂತಿ ಸಭೆ ಮತ್ತು ಪ್ರಮುಖ ಬೀದಿಯಲ್ಲಿ ಎರಡು ಭಾರಿ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಲಾಗಿದೆ.</p>.<p>Quote - ಶಾಂತಿ ಸೌಹಾರ್ದದಿಂದ ಎಲ್ಲ ಯುವಕ ಮಂಡಳದವರು ಮೆರವಣಿಗೆ ಮೂಲಕ ರಾತ್ರಿ 10 ಗಂಟೆಯೊಳಗೆ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಬೇಕು ಸಮೀರ ಮುಲ್ಲಾ ಸಿಪಿಐ</p>.<p>Quote - ಗ್ರಾಮದಲ್ಲಿ 19 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು ವಿಸರ್ಜನೆಗಾಗಿ ಗ್ರಾಮ ಪಂಚಾಯಿತಿ ತುಪ್ಪರಿ ಹಳ್ಳದ ಸೇತುವೆ ಬಳಿ ಸಕಲ ಸಿದ್ದತೆ ಮಾಡಿದೆ ಬಶೀರ ಅಹ್ಮದ ಮಾಳಗಿಮನಿ ಅಧ್ಯಕ್ಷ ಗ್ರಾಮ ಪಂಚಾಯಿತಿ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಪ್ಪಿನಬೆಟಗೇರಿ:</strong> ಉಪ್ಪಿನಬೆಟಗೇರಿಯ ದೇವಸ್ಥಾನ ಸೇರಿದಂತೆ ವಿವಿಧೆಡೆ ಯುವಕ ಮಂಡಳದಿಂದ ಪ್ರತಿಷ್ಠಾಪಿಸಿರುವ ಗಣೇಶ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ಸೆಪ್ಟೆಂಬರ್ 2, 4 ಹಾಗೂ 6ರಂದು ನಡೆಯಲಿದ್ದು, ಸ್ಥಳೀಯ ಗ್ರಾಮ ಪಂಚಾಯಿತಿ ಸಕಲ ಸಿದ್ಧತೆ ಮಾಡಿಕೊಂಡಿದೆ.</p>.<p>ಈಗಾಗಲೇ ಕೆಲವು ಮನೆ ಹಾಗೂ ಶಾಲೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಲಾಗಿದ್ದು, 7, 9 ಹಾಗೂ 11ನೇ ದಿನದ ವಿಸರ್ಜನೆ ಹಂತ, ಹಂತವಾಗಿ ನಡೆಯಲಿದೆ.</p>.<p>ಗಣೇಶ ಮೂರ್ತಿಗಳ ವಿಸರ್ಜನೆಗಾಗಿ ಬೈಲಹೊಂಗಲ ರಸ್ತೆಯ ತುಪ್ಪರಿಹಳ್ಳದ ಸೇತುವೆ ಮುಂಭಾಗದಲ್ಲಿ 10 ಅಡಿ ಆಳ, 50ಅಡಿ ಅಗಲ ಮತ್ತು ಉದ್ದದ ಗುಂಡಿ ತೆಗೆಯಲಾಗಿದೆ.</p>.<p>ರಾತ್ರಿ ವೇಳೆ ವಿಸರ್ಜನೆ ಕಾರ್ಯ ನಡೆಯುವುದರಿಂದ ಆ ಸ್ಥಳದಲ್ಲಿ ಹೈ ಮಾಸ್ಟ್ ದೀಪಗಳನ್ನು ಅಳವಡಿಸಲಾಗಿದೆ. ಹಳೇ ಬಸ್ ನಿಲ್ಧಾಣದಿಂದ ತುಪ್ಪರಿ ಹಳ್ಳದ ಸೇತುವೆ ವರೆಗಿನ ರಸ್ತೆಯ ಅಕ್ಕ-ಪಕ್ಕದಲ್ಲಿ ಸಂಗ್ರಹವಾದ ತ್ಯಾಜ್ಯ ವಿಲೇವಾರಿ ಮಾಡಲಾಗಿದೆ. </p>.<p>ಗರಗ ಪೊಲೀಸ್ ಠಾಣೆ ವತಿಯಿಂದ ಈಗಾಗಲೇ ಶಾಂತಿ ಸಭೆ ಮತ್ತು ಪ್ರಮುಖ ಬೀದಿಯಲ್ಲಿ ಎರಡು ಭಾರಿ ಪಥಸಂಚಲನ ನಡೆಸಿ ಜಾಗೃತಿ ಮೂಡಿಸಲಾಗಿದೆ.</p>.<p>Quote - ಶಾಂತಿ ಸೌಹಾರ್ದದಿಂದ ಎಲ್ಲ ಯುವಕ ಮಂಡಳದವರು ಮೆರವಣಿಗೆ ಮೂಲಕ ರಾತ್ರಿ 10 ಗಂಟೆಯೊಳಗೆ ಗಣೇಶ ಮೂರ್ತಿಗಳ ವಿಸರ್ಜನೆ ಮಾಡಬೇಕು ಸಮೀರ ಮುಲ್ಲಾ ಸಿಪಿಐ</p>.<p>Quote - ಗ್ರಾಮದಲ್ಲಿ 19 ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದ್ದು ವಿಸರ್ಜನೆಗಾಗಿ ಗ್ರಾಮ ಪಂಚಾಯಿತಿ ತುಪ್ಪರಿ ಹಳ್ಳದ ಸೇತುವೆ ಬಳಿ ಸಕಲ ಸಿದ್ದತೆ ಮಾಡಿದೆ ಬಶೀರ ಅಹ್ಮದ ಮಾಳಗಿಮನಿ ಅಧ್ಯಕ್ಷ ಗ್ರಾಮ ಪಂಚಾಯಿತಿ </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>