<p><strong>ಬೆಂಗಳೂರು:</strong> ಅಗ್ರ ಶ್ರೇಯಾಂಕದ ಸ್ನಿಗ್ಧಾ ಕಾಂತ ಹಾಗೂ ಶ್ರೇಯಾಂಕರಹಿತ ಆಟಗಾರ ರೋಹಿತ್ ಗೋಪಿನಾಥ್ ಅವರು ಮಂಗಳವಾರ ಇಲ್ಲಿ ಆರಂಭಗೊಂಡ ಕೆಎಸ್ಎಲ್ಟಿಎ ಐಟಿಎಫ್ ವಿಶ್ವ ಟೆನಿಸ್ ಜೂನಿಯರ್ ಟೂರ್ನಿಯ ಪ್ರಿ ಕ್ವಾರ್ಟರ್ಫೈನಲ್ ಪ್ರವೇಶಿಸಿದರು.</p>.<p>ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ರೋಹಿತ್ ಅವರು ಬಾಲಕರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ 2-6, 6-3, 6-2ರಿಂದ ಏಳನೇ ಶ್ರೇಯಾಂಕದ ಪ್ರಕಾಶ್ ಸರನ್ ಅವರಿಗೆ ಆಘಾತ ನೀಡಿದರು. ಅಮೆರಿಕದ ನಿಯಾಂತ್ ಬದರಿನಾರಾಯಣನ್ 6-7 (4), 6-3, 6-1ರಿಂದ ಯಶ್ವಿನ್ ದಹಿಯಾ ವಿರುದ್ಧ ಜಯಗಳಿಸಿದರು.</p>.<p>ಮೂರನೇ ಶ್ರೇಯಾಂಕದ ದೇವ್ ವಿಪುಲ್ ಪಟೇಲ್, ನಾಲ್ಕನೇ ಶ್ರೇಯಾಂಕದ ವಿಶಾಲ್ ವಾಸುದೇವ್ ಎಂ. ಮತ್ತು ಅಧಿರಾಜ್ ಠಾಕೂರ್ ಅವರೂ ಎರಡನೇ ಸುತ್ತಿಗೆ ಮುನ್ನಡೆದರು.</p>.<p>ಬಾಲಕಿಯರ ವಿಭಾಗದಲ್ಲಿ ಸ್ನಿಗ್ಧಾ ಅವರು 6-2, 6-1ರಿಂದ ಶ್ರೇಯಾಂಕ ರಹಿತ ಆಟಗಾರ್ತಿ ಶ್ರೀಯಾ ದೇಶಪಾಂಡೆ ಅವರನ್ನು ನೇರ ಸೆಟ್ಗಳಲ್ಲಿ ಮಣಿಸಿ 16ರ ಘಟ್ಟಕ್ಕೆ ಪ್ರವೇಶ ಪಡೆದರು. ಸೃಷ್ಟಿ ಕಿರಣ್ ಅವರು 7-6 (6), 6-3ರಿಂದ ತೇಜಸ್ವಿ ಮನ್ನೆನ್ ವಿರುದ್ಧ ಸುಲಭ ಗೆಲುವು ದಾಖಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಅಗ್ರ ಶ್ರೇಯಾಂಕದ ಸ್ನಿಗ್ಧಾ ಕಾಂತ ಹಾಗೂ ಶ್ರೇಯಾಂಕರಹಿತ ಆಟಗಾರ ರೋಹಿತ್ ಗೋಪಿನಾಥ್ ಅವರು ಮಂಗಳವಾರ ಇಲ್ಲಿ ಆರಂಭಗೊಂಡ ಕೆಎಸ್ಎಲ್ಟಿಎ ಐಟಿಎಫ್ ವಿಶ್ವ ಟೆನಿಸ್ ಜೂನಿಯರ್ ಟೂರ್ನಿಯ ಪ್ರಿ ಕ್ವಾರ್ಟರ್ಫೈನಲ್ ಪ್ರವೇಶಿಸಿದರು.</p>.<p>ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ರೋಹಿತ್ ಅವರು ಬಾಲಕರ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ 2-6, 6-3, 6-2ರಿಂದ ಏಳನೇ ಶ್ರೇಯಾಂಕದ ಪ್ರಕಾಶ್ ಸರನ್ ಅವರಿಗೆ ಆಘಾತ ನೀಡಿದರು. ಅಮೆರಿಕದ ನಿಯಾಂತ್ ಬದರಿನಾರಾಯಣನ್ 6-7 (4), 6-3, 6-1ರಿಂದ ಯಶ್ವಿನ್ ದಹಿಯಾ ವಿರುದ್ಧ ಜಯಗಳಿಸಿದರು.</p>.<p>ಮೂರನೇ ಶ್ರೇಯಾಂಕದ ದೇವ್ ವಿಪುಲ್ ಪಟೇಲ್, ನಾಲ್ಕನೇ ಶ್ರೇಯಾಂಕದ ವಿಶಾಲ್ ವಾಸುದೇವ್ ಎಂ. ಮತ್ತು ಅಧಿರಾಜ್ ಠಾಕೂರ್ ಅವರೂ ಎರಡನೇ ಸುತ್ತಿಗೆ ಮುನ್ನಡೆದರು.</p>.<p>ಬಾಲಕಿಯರ ವಿಭಾಗದಲ್ಲಿ ಸ್ನಿಗ್ಧಾ ಅವರು 6-2, 6-1ರಿಂದ ಶ್ರೇಯಾಂಕ ರಹಿತ ಆಟಗಾರ್ತಿ ಶ್ರೀಯಾ ದೇಶಪಾಂಡೆ ಅವರನ್ನು ನೇರ ಸೆಟ್ಗಳಲ್ಲಿ ಮಣಿಸಿ 16ರ ಘಟ್ಟಕ್ಕೆ ಪ್ರವೇಶ ಪಡೆದರು. ಸೃಷ್ಟಿ ಕಿರಣ್ ಅವರು 7-6 (6), 6-3ರಿಂದ ತೇಜಸ್ವಿ ಮನ್ನೆನ್ ವಿರುದ್ಧ ಸುಲಭ ಗೆಲುವು ದಾಖಲಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>