ಹುಬ್ಬಳ್ಳಿ: ‘ಅಕ್ಷಯ ತೃತೀಯದಂದು ಚಿನ್ನ ಖರೀದಿಸಿದರೆ ಒಳಿತಾಗುತ್ತದೆ’ ಎಂಬ ಪ್ರತೀತಿಯಂತೆ, ಜನ ಮಂಗಳವಾರ ಮಳಿಗೆಗಳಲ್ಲಿ ಉತ್ಸಾಹದಿಂದ ಚಿನ್ನಾಭರಣ ಖರೀದಿಸಿದರು. ರಂಜಾನ್ ರಜೆಯೂ ಇದ್ದ ಕಾರಣ ಸಂಜೆ ಹೆಚ್ಚು ಮಂದಿ ವಿವಿಧ ಅಂಗಡಿಗಳಿಗೆ ತೆರಳಿ ವಿವಿಧ ವಿನ್ಯಾಸದ ಆಭರಣಗಳನ್ನು ಖರೀದಿಸುತ್ತಿದ್ದ ದೃಶ್ಯ ಹಲವೆಡೆ ಕಂಡುಬಂತು. ಪೂರಕವಾಗಿ ಗ್ರಾಹಕರನ್ನು ಆಕರ್ಷಿಸಲು ಮಳಿಗೆಗಳಲ್ಲಿ ರಿಯಾಯಿತಿ ಜೊತೆಗೆ, ವಿವಿಧ ರೀತಿಯ ಕೊಡುಗೆಗಳನ್ನು ನೀಡಲಾಯಿತು.