ಹುಬ್ಬಳ್ಳಿ: ಅವರಿಬ್ಬರೂ ಮಾನಸಿಕ ರೋಗಿಗಳು. ಧಾರವಾಡದ ಡಿಮ್ಹಾನ್ಸ್ನಲ್ಲಿ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿರುವ ಅವರಿಗೆ ನಿತ್ಯ ಔಷಧ ಸೇವಿಸದಿದ್ದರೆ, ಆರೋಗ್ಯದಲ್ಲಿ ಏರುಪೇರಾಗುವ ಅಪಾಯ. ಆದರೆ, ಲಾಕ್ಡೌನ್ನಿಂದಾಗಿ ತಾವಿರುವ ಗದಗ ಜಿಲ್ಲೆಯ ಲಕ್ಷ್ಮೇಶ್ವರದಿಂದ ಧಾರವಾಡಕ್ಕೆ ಬಂದು ಔಷಧ ಖರೀದಿಸಿಕೊಂಡು ಹೋಗಲಾಗದ ಸ್ಥಿತಿ ಅವರದು.