<p><strong>ಕುಂದಗೋಳ:</strong> ಉತ್ತರ ಕರ್ನಾಟಕದಲ್ಲಿ ಭಕ್ತಿ, ದೈವಾರಾಧನೆಗೆ ಅನೇಕ ಸಂಪ್ರದಾಯ ಮೂಲಕ ಆಚರಿಸಲಾಗುತ್ತದೆ. ಅದರಲ್ಲಿ ವಿಶಿಷ್ಠವಾಗಿ ಕಾಣುವ ಅಕ್ಕಿಬೆಳೆ ಪೂಜೆಯೊಂದು ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಆಚರಿಸುವುದು ವಿಷೇಷವಾಗಿದೆ.</p>.<p>ಈ ಪೂಜೆಯ ತಯಾರಿಯೇ ವಿಶಿಷ್ಠವಾಗಿದೆ. ಶ್ರೀಶೈಲದ ಅರಣ್ಯ ಪ್ರದೇಶದಿಂದ ತಂದ ನಂದಿಕೋಲನ್ನು (ಬಿದಿರು) ಎತ್ತಿನ ಬಂಡಿಗಾಲಿಯ ಆಕಾರದಲ್ಲಿ ತಯಾರಿಸಿ ಅದಕ್ಕೆ ಅಕ್ಕಿ ಹಾಗೂ ಕಡಲೆ ಬೆಳೆಯನ್ನು ನೂಲುದಾರದಿಂದ ಸುತ್ತಿ ಪೂಜಿಸಲಾಗುತ್ತದೆ.</p>.<p>ಭೂಮಿಗೆ ಲಂಭವಾಗಿ ನಿಲ್ಲಿಸಿದ ಗಾಲಿಗೆ ಕೇವಲ ನೂಲಿನ ಸಹಾಯದಿಂದ ಅಕ್ಕಿ-ಬೇಳೆಗಳನ್ನು ಸುತ್ತಿದರೂ ಬೀಳದೆ ಇರುವುದು ಇಲ್ಲಿನ ಭಕ್ತರು ದೈವಭಕ್ತಿಯ ಪ್ರತೀಕ ಎಂದು ನಂಬುತ್ತಾರೆ. ಬೆತ್ತದ ಗಾಲಿಯ ಮಧ್ಯದಲ್ಲಿ ಸುಮಾರು 12 ಇಂಚಿನಷ್ಟು ಗೋಪುರ, ಸುತ್ತಲೂ 12 ಸಣ್ಣ ಗೋಪುರಗಳು ಸುಮಾರು 6 ಇಂಚಿನಷ್ಟಿರುತ್ತವೆ.</p>.<p>ಈ ಗೋಪುರಗಳಿಗೆ ಅಕ್ಕಿಯನ್ನು ನೂಲಿನ ಸಹಾಯದಿಂದ ಸುತ್ತಲಾಗುತ್ತದೆ. ಗೋಪುರಗಳ ಮಧ್ಯದ ಬೆತ್ತದ ಗಾಲಿಗೆ ಕಡಲೆ ಬೆಳೆ ಕಟ್ಟಲಾಗುತ್ತದೆ. ಈ ಗಾಲಿಯ ಸುತ್ತಲೂ ಚಕ್ರಾಕಾರದಲ್ಲಿ ವೀಳ್ಯದ ಎಲೆ ಹಾಗೂ ಹೂವುಗಳಿಂದ ಅಲಂಕರಿಸಲಾಗುತ್ತದೆ.</p>.<p>ಹಿನ್ನಲೆ: ಗ್ರಾಮದ ಕಲ್ಲನಗೌಡ್ರ ಹಾಗೂ ಫಕೀರಗೌಡ್ರ ಮನೆತನದಿಂದ ಸುಳ್ಳದ ಕಲ್ಮೇಶ್ವರ ದೇವರಿಗೆ ಬೇಡಿಕೊಂಡು, ಶ್ರೀಶೈಲ ಮಲ್ಲಿ ಕಾರ್ಜುನನ ಪ್ರತಿಕವಾಗಿ ಪೂಜೆ ಪ್ರಾರಂಭವಾಗಿದ್ದು. ನೂರಾರು ವರ್ಷಗಳ ಇತಿಹಾಸದ ಹಿನ್ನೆಲೆಯುಳ್ಳದ್ದಾಗಿದೆ.</p>.<p>ಅನೇಕ ಗ್ರಾಮಗಳಿಂದ ಜನರು ಬಂದು ಇಲ್ಲಿ ಬೇಡಿಕೊಂಡು ಇಷ್ಟಾರ್ಥ ಈಡೇರಿದ್ದಕ್ಕೆ ಪ್ರತಿವರ್ಷ ಬಂದು ದರ್ಶನ ಪಡೆದು ಅಕ್ಕಿಬೆಳೆ ಪೂಜೆ ಸೇವೆ ಸಲ್ಲಿಸಿ ಪೂಜೆಸುತ್ತಿದ್ದಾರೆ. ಭಕ್ತರ ಹರಕೆಯ ಪೂಜೆಗಳು ಮಾರ್ಚ್ 11ರಂದು 12ರಂದು ಅಂತಿಮ ಪೂಜೆ ಜರುಗಲಿದೆ.</p>.<p>ರಾತ್ರಿ ಪೂರ್ತಿ ಭಕ್ತರು ದರ್ಶನ ಪಡೆವುದರೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂದಗೋಳ:</strong> ಉತ್ತರ ಕರ್ನಾಟಕದಲ್ಲಿ ಭಕ್ತಿ, ದೈವಾರಾಧನೆಗೆ ಅನೇಕ ಸಂಪ್ರದಾಯ ಮೂಲಕ ಆಚರಿಸಲಾಗುತ್ತದೆ. ಅದರಲ್ಲಿ ವಿಶಿಷ್ಠವಾಗಿ ಕಾಣುವ ಅಕ್ಕಿಬೆಳೆ ಪೂಜೆಯೊಂದು ತಾಲ್ಲೂಕಿನ ಶಿರೂರ ಗ್ರಾಮದಲ್ಲಿ ನೂರಾರು ವರ್ಷಗಳಿಂದ ಆಚರಿಸುವುದು ವಿಷೇಷವಾಗಿದೆ.</p>.<p>ಈ ಪೂಜೆಯ ತಯಾರಿಯೇ ವಿಶಿಷ್ಠವಾಗಿದೆ. ಶ್ರೀಶೈಲದ ಅರಣ್ಯ ಪ್ರದೇಶದಿಂದ ತಂದ ನಂದಿಕೋಲನ್ನು (ಬಿದಿರು) ಎತ್ತಿನ ಬಂಡಿಗಾಲಿಯ ಆಕಾರದಲ್ಲಿ ತಯಾರಿಸಿ ಅದಕ್ಕೆ ಅಕ್ಕಿ ಹಾಗೂ ಕಡಲೆ ಬೆಳೆಯನ್ನು ನೂಲುದಾರದಿಂದ ಸುತ್ತಿ ಪೂಜಿಸಲಾಗುತ್ತದೆ.</p>.<p>ಭೂಮಿಗೆ ಲಂಭವಾಗಿ ನಿಲ್ಲಿಸಿದ ಗಾಲಿಗೆ ಕೇವಲ ನೂಲಿನ ಸಹಾಯದಿಂದ ಅಕ್ಕಿ-ಬೇಳೆಗಳನ್ನು ಸುತ್ತಿದರೂ ಬೀಳದೆ ಇರುವುದು ಇಲ್ಲಿನ ಭಕ್ತರು ದೈವಭಕ್ತಿಯ ಪ್ರತೀಕ ಎಂದು ನಂಬುತ್ತಾರೆ. ಬೆತ್ತದ ಗಾಲಿಯ ಮಧ್ಯದಲ್ಲಿ ಸುಮಾರು 12 ಇಂಚಿನಷ್ಟು ಗೋಪುರ, ಸುತ್ತಲೂ 12 ಸಣ್ಣ ಗೋಪುರಗಳು ಸುಮಾರು 6 ಇಂಚಿನಷ್ಟಿರುತ್ತವೆ.</p>.<p>ಈ ಗೋಪುರಗಳಿಗೆ ಅಕ್ಕಿಯನ್ನು ನೂಲಿನ ಸಹಾಯದಿಂದ ಸುತ್ತಲಾಗುತ್ತದೆ. ಗೋಪುರಗಳ ಮಧ್ಯದ ಬೆತ್ತದ ಗಾಲಿಗೆ ಕಡಲೆ ಬೆಳೆ ಕಟ್ಟಲಾಗುತ್ತದೆ. ಈ ಗಾಲಿಯ ಸುತ್ತಲೂ ಚಕ್ರಾಕಾರದಲ್ಲಿ ವೀಳ್ಯದ ಎಲೆ ಹಾಗೂ ಹೂವುಗಳಿಂದ ಅಲಂಕರಿಸಲಾಗುತ್ತದೆ.</p>.<p>ಹಿನ್ನಲೆ: ಗ್ರಾಮದ ಕಲ್ಲನಗೌಡ್ರ ಹಾಗೂ ಫಕೀರಗೌಡ್ರ ಮನೆತನದಿಂದ ಸುಳ್ಳದ ಕಲ್ಮೇಶ್ವರ ದೇವರಿಗೆ ಬೇಡಿಕೊಂಡು, ಶ್ರೀಶೈಲ ಮಲ್ಲಿ ಕಾರ್ಜುನನ ಪ್ರತಿಕವಾಗಿ ಪೂಜೆ ಪ್ರಾರಂಭವಾಗಿದ್ದು. ನೂರಾರು ವರ್ಷಗಳ ಇತಿಹಾಸದ ಹಿನ್ನೆಲೆಯುಳ್ಳದ್ದಾಗಿದೆ.</p>.<p>ಅನೇಕ ಗ್ರಾಮಗಳಿಂದ ಜನರು ಬಂದು ಇಲ್ಲಿ ಬೇಡಿಕೊಂಡು ಇಷ್ಟಾರ್ಥ ಈಡೇರಿದ್ದಕ್ಕೆ ಪ್ರತಿವರ್ಷ ಬಂದು ದರ್ಶನ ಪಡೆದು ಅಕ್ಕಿಬೆಳೆ ಪೂಜೆ ಸೇವೆ ಸಲ್ಲಿಸಿ ಪೂಜೆಸುತ್ತಿದ್ದಾರೆ. ಭಕ್ತರ ಹರಕೆಯ ಪೂಜೆಗಳು ಮಾರ್ಚ್ 11ರಂದು 12ರಂದು ಅಂತಿಮ ಪೂಜೆ ಜರುಗಲಿದೆ.</p>.<p>ರಾತ್ರಿ ಪೂರ್ತಿ ಭಕ್ತರು ದರ್ಶನ ಪಡೆವುದರೊಂದಿಗೆ ಜಾತ್ರೆಗೆ ತೆರೆ ಬೀಳಲಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>