ನಗರದಲ್ಲಿ ಶನಿವಾರ ಸಂಘದ ಸದಸ್ಯರೊಂದಿಗೆ ಈರುಳ್ಳಿಯ ಹಾರ ಮಾಡಿ ಧರಿಸಿಕೊಂಡು ಬಂದು ಪತ್ರಿಕಾಗೋಷ್ಠಿ ನಡೆಸಿದ ಅವರು, ‘ಈರುಳ್ಳಿ ಬೆಳೆಗಾರರು ಸಂಕಷ್ಟದಲ್ಲಿರುವಾಗಲೇ ರಫ್ತು ನಿಷೇಧ ಮಾಡಿದ್ದು ಸರಿಯಲ್ಲ. ರಾಜ್ಯದ 13 ಜಿಲ್ಲೆಗಳಲ್ಲಿ ಒಟ್ಟು 30 ಲಕ್ಷದಷ್ಟು ಈರುಳ್ಳಿ ಬೆಳೆಗಾರರಿದ್ದು, ಗದಗ, ಹುಬ್ಬಳ್ಳಿ– ಧಾರವಾಡ, ಬಾಗಲಕೋಟೆಯಲ್ಲಿ ಅಧಿಕವಾಗಿ ಬೆಳೆಯುತ್ತಾರೆ. ರೈತರ ಬೆಳೆಗೆ ತಕ್ಕ ಬೆಲೆ ಸಿಗುತ್ತಿಲ್ಲ. ಈರುಳ್ಳಿ ಕ್ವಿಂಟಲ್ಗೆ ₹1200 ಆಗಿದ್ದು, ಬೆಳೆಯಲು ₹1,800 ಖರ್ಚು ಆಗುತ್ತದೆ. ಹೀಗಾದರೆ ರೈತರ ಪಾಡೇನು’ ಎಂದು ಬೇಸರ ವ್ಯಕ್ತಪಡಿಸಿದರು.