ತಾಲ್ಲೂಕಿನಲ್ಲಿ ಅತಿವೃಷ್ಟಿ ಮಳೆಯ ಹೊಡೆತಕ್ಕೆ ಸಿಲುಕಿ ಬೆಳೆ ಹಾನಿಗೊಳಗಾಗಿದೆ. ಉಳಿದುಳಿದ ಬೆಳೆಗೆ ಮಳೆಯ ಅವಶ್ಯಕತೆ ಇದೆ ಮಳೆಯಾದರೆ ಹೆಸರು ಉತ್ತಮ ಇಳುವರಿ ಬರಬಹುದು ತೇವಾಂಶ ಕೊರತೆ ಕಾಣುತ್ತಿದೆ. ಗೋವಿನಜೋಳಕ್ಕೆ ಲದ್ದಿಹುಳು ಬರದಂತೆ ತಡೆಯಲು ಸಕಾಲದಲ್ಲಿ ರೈತರು ಔಷಧಿ ಸಿಂಪರಣೆ ಮಾಡಲು ಗಮನ ಹರಿಸಬೇಕು.
– ಶ್ರೀನಾಥ್ ಚಿಮ್ಮಲಗಿ ಸಹಾಯಕ ಕೃಷಿ ನಿರ್ದೇಶಕರು ನವಲಗುಂದ
ಈಗಾಗಲೇ ಎಕರೆಗೆ ಹದಿನೈದು ಇಪ್ಪತ್ತು ಸಾವಿರ ರೂಪಾಯಿ ಖರ್ಚಾಗಿದೆ. ಮೋಡಗಳಿದ್ದರೂ ನಿಲ್ಲುತ್ತಿಲ್ಲ. ಗಾಳಿಗೆ ಚದುರಿ ಹೋಗುತ್ತಿವೆ. ಮಳೆಯಿಲ್ಲದೆ ಹೆಸರು ಬೆಳೆ ಬಾಡುತ್ತಿದೆ. ಗೋವಿನಜೋಳ ಮೇಲೆಳದೆ ಕಮರಿ ಹೋಗುವಂತಾಗಿದ್ದು ಮತ್ತೆ ನಷ್ಟ ಅನುಭವಿಸುವ ಆತಂಕ ಎದುರಾಗಿದೆ.