ಕಡಿಮೆ ಫಲಿತಾಂಶ ಕೊಟ್ಟ ಶಿಕ್ಷಕರಿಗೆ ಬಡ್ತಿ ಇಲ್ಲ ಎಂದು ಈಚೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆದೇಶ ಹೊರಡಿಸಿರುವುದು ಗಮನಕ್ಕೆ ಬಂದಿದೆ. ಸರ್ಕಾರಿ ಶಾಲೆಗಳಲ್ಲಿ ಓದುವ ಮಕ್ಕಳಿಗೆ ಬಿಸಿಯೂಟದ ಹೊಣೆಗಾರಿಕೆ, ಮೊಟ್ಟೆ, ಹಾಲು, ಬಾಳೆಹಣ್ಣು ಕೊಡುವುದು, ಪಠ್ಯೇತರ ವಿಷಯಗಳಿಗೆ ಸಂಬಂಧಿಸಿದ ಸಾಮಗ್ರಿ ಖರೀದಿಸುವುದು ಇಂತಹ ಹಲವು ಜವಾಬ್ದಾರಿಗಳನ್ನು ಶಿಕ್ಷಕರಿಗೆ ನೀಡಲಾಗಿದೆ.