ಸಮ್ಮಿಶ್ರ ಸರ್ಕಾರದ ಮೇಲೆ ತಮ್ಮ ಹಿಡಿತ ಸಾಧಿಸಲು ಅತೃಪ್ತರನ್ನು ಎತ್ತಿಕಟ್ಟುತ್ತಿರುವವರೇ ನೀವು ಎಂಬ ಆರೋಪ ಕೇಳಿಬರುತ್ತಿದೆಯಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಶಾಸಕರನ್ನು ಕರೆದುಕೊಂಡುಹೋಗಿ ಹೋಟೆಲ್ನಲ್ಲಿ ಇಡಲು ಯಾರಿಗಾದರೂ ನಾನೂ ಹೇಳಿದ್ದೇನಾ? ನನ್ನ ಸಲಹೆ ಮೇರೆಗೆ ಅವರೆಲ್ಲ ಹೋಗಿದ್ದಾರಾ? ಏನ್ರಿ ಇದು ಮೂರ್ಖತನ? ಇದರಲ್ಲಿ ಏನಾದರೂ ಸತ್ಯ ಇದೆಯಾ? ತೋಳ, ಕುರಿಮರಿ ಕಥೆ ಇದೆಯಲ್ಲಾ ಹಾಗಾಯಿತು ಇದು’ ಎಂದು ರೇಗಿದರು.