ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಭ್ರಮದ ಸಿದ್ಧಾರೂಢರ ರಥೋತ್ಸವ

Published 10 ಮಾರ್ಚ್ 2024, 14:51 IST
Last Updated 10 ಮಾರ್ಚ್ 2024, 14:51 IST
ಅಕ್ಷರ ಗಾತ್ರ

ಉಪ್ಪಿನಬೆಟಗೇರಿ: ಮಹಾಶಿವರಾತ್ರಿ ಪ್ರಯುಕ್ತ ಸಮೀಪದ ಕರಡಿಗುಡ್ಡ ಗ್ರಾಮದ ಸಿದ್ಢಾರೂಢಸ್ವಾಮಿ ರಥೋತ್ಸವ  ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾನುವಾರ ಸಂಭ್ರಮದಿಂದ ಜರುಗಿತು.

ಬೆಳಿಗ್ಗೆ ರುದ್ರಾಭಿಷೇಕ, ವಿವಿಧ ಪೂಜಾ ಕಾರ್ಯಕ್ರಮಗಳು ನೆರವೇರಿದವು. ಸಂಜೆ 5ಕ್ಕೆ ಸಿದ್ಧಾರೂಢಸ್ವಾಮಿ  ದೇವಸ್ಥಾನದಿಂದ ವಿವಿಧ ವಾದ್ಯಮೇಳದೊಂದಿಗೆ ರಥೋತ್ಸವ ಆರಂಭವಾಯಿತು.

‌ಭಕ್ತರು ರಥಕ್ಕೆ ಲಿಂಬೆ ಹಣ್ಣು, ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಮಧ್ಯಾಹ್ನ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಈ ವೇಳೆ ಶ್ರೀಕಾಂತ ಚಿಕ್ಕಮಠ, ನೀಲಪ್ಪ ಮೇಟಿ, ಮಲ್ಲಿಕಾರ್ಜುನ ಕುರಗುಂದ, ಬಸವರಾಜ ಅಂಗಡಿ, ಬಸವರಾಜ ಹೊಸುರ, ಮಹಾದೇವ ಉಳ್ಳಿಗೇರಿ, ಶಿವಶಂಕರ ಬಾಚಗುಂಡಿ, ಶಿವಪ್ಪ ಗಡ್ಡಿ, ಮಲ್ಲಿಕಾರ್ಜುನ ಜಕ್ಕನ್ನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT