<p><strong>ಧಾರವಾಡ:</strong> ರಾಜ್ಯದ ಜಲ ಸಂಪನ್ಮೂಲ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಗೆ (ವಾಲ್ಮಿ) ಅಂತರರಾಷ್ಟ್ರೀಯ ನೀರಾವರಿ ಮತ್ತು ಒಳಚರಂಡಿ ಮಂಡಳಿ (ಐಸಿಐಡಿ) ಅವರಿಂದ ವಾಟ್ಸೇವ್-2024 ಪ್ರಶಸ್ತಿ ಲಭಿಸಿದೆ ಎಂದು ವಾಲ್ಮಿ ನಿರ್ದೇಶಕ ರಾಜೇಂದ್ರ ಪೋದ್ದಾರ ತಿಳಿಸಿದರು.</p>.<p>ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸೆ.3ರಂದು ನಡೆದ 9ನೇ ಏಷಿಯನ್ ಪ್ರಾದೇಶಿಕ ಸಮ್ಮೇಳನದಲ್ಲಿ ಐಸಿಐಡಿ ಅಧ್ಯಕ್ಷ ಮಾರ್ಕೊ ಆರ್ಸಿಯೆರಿ ಅವರಿಂದ ಪ್ರಶಸ್ತಿ ಸ್ವೀಕರಿಸಲಾಯಿತು ಎಂದರು.</p>.<p>ರಾಜ್ಯದಲ್ಲಿ ರೈತರ ಸಹಭಾಗಿತ್ವದ ನೀರಾವರಿ ಪದ್ಧತಿ ಅಳವಡಿಸುವಲ್ಲಿ ವಾಲ್ಮಿ ಸಂಸ್ಥೆಯು ಯಶಸ್ವಿಗೊಳಿಸಿದೆ. ಈ ಪದ್ಧತಿ ಅಡಿಯಲ್ಲಿ ಸಾವಿರಾರು ನೀರು ಬಳಕೆದಾರ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗಿದ್ದು, ಸುಸ್ಥಿರ ನೀರಾವರಿ ಸಾಧಿಸಲಾಗುತ್ತಿದೆ ಎಂದು ತಿಳಿಸಿದರು.</p>.<p>ವಾಲ್ಮಿಯು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಮೂಲಕ ಕಾಲುವೆ ಸ್ವಚ್ಛತೆ, ಸವಳು-ಜವಳು ನಿರ್ವಹಣೆ, ನೀರು ಬಳಕೆದಾರರ ಸಂಘಗಳ ಪುನಶ್ಚೇತನ, ಉಪಗ್ರಹ ಆಧಾರಿತ ಮೂಲಕ ತರಬೇತಿ ಆಯೋಜಿಸುತ್ತಿದ್ದು, ಇದರಿಂದ ರೈತರಲ್ಲಿ ವೈಜ್ಞಾನಿಕ ನೀರು ಮತ್ತು ಮಣ್ಣಿನ ನಿರ್ವಹಣೆ ಕಲ್ಪನೆ ಮೂಡಿದೆ ಎಂದರು.</p>.<p>ಭೀಮಾ ನಾಯ್ಕ, ಪ್ರಭಾಕರ ಹಾದಿಮನಿ, ಯೋಗೇಂದ್ರನಾಥ, ಬಸವರಾಜ ಪೂಜಾರ, ಸುವರ್ಣಾ ದೊಡಮನಿ, ಮಹದೇವಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ:</strong> ರಾಜ್ಯದ ಜಲ ಸಂಪನ್ಮೂಲ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಗೆ (ವಾಲ್ಮಿ) ಅಂತರರಾಷ್ಟ್ರೀಯ ನೀರಾವರಿ ಮತ್ತು ಒಳಚರಂಡಿ ಮಂಡಳಿ (ಐಸಿಐಡಿ) ಅವರಿಂದ ವಾಟ್ಸೇವ್-2024 ಪ್ರಶಸ್ತಿ ಲಭಿಸಿದೆ ಎಂದು ವಾಲ್ಮಿ ನಿರ್ದೇಶಕ ರಾಜೇಂದ್ರ ಪೋದ್ದಾರ ತಿಳಿಸಿದರು.</p>.<p>ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಸೆ.3ರಂದು ನಡೆದ 9ನೇ ಏಷಿಯನ್ ಪ್ರಾದೇಶಿಕ ಸಮ್ಮೇಳನದಲ್ಲಿ ಐಸಿಐಡಿ ಅಧ್ಯಕ್ಷ ಮಾರ್ಕೊ ಆರ್ಸಿಯೆರಿ ಅವರಿಂದ ಪ್ರಶಸ್ತಿ ಸ್ವೀಕರಿಸಲಾಯಿತು ಎಂದರು.</p>.<p>ರಾಜ್ಯದಲ್ಲಿ ರೈತರ ಸಹಭಾಗಿತ್ವದ ನೀರಾವರಿ ಪದ್ಧತಿ ಅಳವಡಿಸುವಲ್ಲಿ ವಾಲ್ಮಿ ಸಂಸ್ಥೆಯು ಯಶಸ್ವಿಗೊಳಿಸಿದೆ. ಈ ಪದ್ಧತಿ ಅಡಿಯಲ್ಲಿ ಸಾವಿರಾರು ನೀರು ಬಳಕೆದಾರ ಸಹಕಾರಿ ಸಂಘಗಳನ್ನು ಸ್ಥಾಪಿಸಲಾಗಿದ್ದು, ಸುಸ್ಥಿರ ನೀರಾವರಿ ಸಾಧಿಸಲಾಗುತ್ತಿದೆ ಎಂದು ತಿಳಿಸಿದರು.</p>.<p>ವಾಲ್ಮಿಯು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಮೂಲಕ ಕಾಲುವೆ ಸ್ವಚ್ಛತೆ, ಸವಳು-ಜವಳು ನಿರ್ವಹಣೆ, ನೀರು ಬಳಕೆದಾರರ ಸಂಘಗಳ ಪುನಶ್ಚೇತನ, ಉಪಗ್ರಹ ಆಧಾರಿತ ಮೂಲಕ ತರಬೇತಿ ಆಯೋಜಿಸುತ್ತಿದ್ದು, ಇದರಿಂದ ರೈತರಲ್ಲಿ ವೈಜ್ಞಾನಿಕ ನೀರು ಮತ್ತು ಮಣ್ಣಿನ ನಿರ್ವಹಣೆ ಕಲ್ಪನೆ ಮೂಡಿದೆ ಎಂದರು.</p>.<p>ಭೀಮಾ ನಾಯ್ಕ, ಪ್ರಭಾಕರ ಹಾದಿಮನಿ, ಯೋಗೇಂದ್ರನಾಥ, ಬಸವರಾಜ ಪೂಜಾರ, ಸುವರ್ಣಾ ದೊಡಮನಿ, ಮಹದೇವಗೌಡ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>