<p><strong>ಧಾರವಾಡ</strong>: ಹಲವೆಡೆ ಹೆಸರು ಬೆಳೆಗೆ ಹಳದಿ ರೋಗ (ನಂಜುರೋಗ) ಕಾಣಿಸಿಕೊಂಡಿದೆ. ಇಳುವರಿ ಕುಸಿಯುವ, ಬೆಳೆ ನಾಶವಾಗುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ. </p><p>ತಾಲ್ಲೂಕಿನ ದುಬ್ಬನಮರಡಿ, ಅಗಸನಹಳ್ಳಿ, ಕೋಟೂರ, ತಡಕೋಡ, ಕುರುಬಗಟ್ಟಿ, ಮಾದನಬಾವಿ, ಕೊಟಬಾಗಿ, ಗರಗ, ಅಮ್ಮಿನಬಾವಿ, ಶಿವಳ್ಳಿ, ಹಾರೋಬೆಳವಡಿಯಲ್ಲಿ ಕೆಲವು ಹೊಲಗಳಲ್ಲಿ ರೋಗ ಕಂಡುಬಂದಿದೆ.</p><p>ಹೆಸರು ಗಿಡದ ಎಲೆಯ ಮೇಲೆ ಹಳದಿ ಚುಕ್ಕೆಗಳಾಗಿವೆ. ಇದರಿಂದ ಗಿಡದ ಬೆಳವಣಿಗೆಗೆ ಕುಂಠಿತವಾಗಿ ಚಿಗುರೊಡೆಯದೆ ಹಳದಿ ಬಣ್ಣಕ್ಕೆ ತಿರುಗಿದವೆ. ಇಂತಹ ಗಿಡಗಳನ್ನು ರೈತರು ಕಿತ್ತು ಹಾಕುತ್ತಿದ್ದಾರೆ. </p><p>ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಆಗಾಗ ತುಂತುರು ಮಳೆಯಾಗುತ್ತಿದೆ. ಮೋಡ ಕವಿದ ವಾತಾವರಣ ಇದೆ. ಮುಂಗಾರು ಪೂರ್ವ ಹಾಗೂ ಆರಂಭದಲ್ಲಿ ಹದ ಮಳೆಯಾಗಿದ್ದು, ಜಿಲ್ಲೆಯಾದ್ಯಂತ 96 ಸಾವಿರ ಹೆಕ್ಟೇರ್ನಲ್ಲಿ ಹೆಸರು ಬಿತ್ತನೆಯಾಗಿದೆ.</p><p>‘ಎರಡು ಎಕರೆಯಲ್ಲಿ ಹೆಸರು ಬಿತ್ತನೆ ಮಾಡಿದ್ದೇನೆ. ಬೀಜ ಬಿತ್ತನೆ, ರಸಗೊಬ್ಬರ, ಎಡೆ ಖರ್ಚು ಸೇರಿ<br>ಪ್ರತಿ ಎಕರೆಗೆ ₹25 ಸಾವಿರ ವೆಚ್ಚವಾಗಿದೆ. ಎರಡು ಬಾರಿ ಔಷಧ ಸಿಂಪಡಿಸಿದರೂ ಹಳದಿ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಹಾಕಿದ ಬಂಡವಾಳವೂ ವಾಪಸ್ ಸಿಗುವ ಭರವಸೆ ಇಲ್ಲದಂತಾಗಿದೆ’ ಎಂದು ದುಬ್ಬನಮರಡಿ ರೈತ ಈರಪ್ಪ ಲಕ್ಕುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಹಳದಿ ರೋಗಕ್ಕೆ ವೈಟ್ ಪ್ಲೈ (ಬಿಳಿ ನೊಣ) ಕಾರಣವಾಗಿದ್ದು, ಒಂದು ಗಿಡದಿಂದ ಗಿಡಕ್ಕೆ ಹೋಗಿ<br>ರಸ ಹೀರುವುದರಿಂದ ರೋಗ ಹರಡುತ್ತದೆ. ಅರಂಭದಲ್ಲೇ ನಿಯಂತ್ರಿಸಬೇಕು. ರೋಗಪೀಡಿತ ಗಿಡಗಳನ್ನು ರೈತರು ಕಿತ್ತು ಹೂಳಬೇಕು. ಪ್ರಾರಂಭದಲ್ಲೇ ಕೀಟನಾಶಕ ಬಳಕೆ ಮಾಡಬೇಕು. ರೋಗದಿಂದ ಬೆಳೆಗಳಲ್ಲಿ ಸಾರಜನಕ ಕಡಿಮೆಯಾಗಿರುತ್ತದೆ. ರೈತರು 19-19-19 ರಸಗೊಬ್ಬರ ಅಥವಾ ನ್ಯಾನೊ ಯೂರಿಯಾ ಸಿಂಪಡಿಸಬೇಕು’ ಎಂದು ಕೃಷಿ ವಿಶ್ವವಿದ್ಯಾಲಯದ ಬೇಸಾಯಶಾಸ್ತ್ರ ವಿಭಾಗದ ವಿಜ್ಞಾನಿ ಬಸವರಾಜ ಏಣಗಿ ತಿಳಿಸಿದರು.</p>.<div><blockquote>ಕೃಷಿ ಇಲಾಖೆ ಅಧಿಕಾರಿಗಳು ಹೆಸರು ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಬೆಳೆಗಳನ್ನು ಉಳಿಸಿಕೊಳ್ಳಲು ಪರಿಹಾರ ತಿಳಿಸಬೇಕು</blockquote><span class="attribution">ಮಲ್ಲಿಕಾರ್ಜುನ ಬಾಳನಗೌಡ್ರ, ಶಿರೂರ ಗ್ರಾಮದ ರೈತ</span></div>.<p><strong>‘ರೋಗ ಹತೋಟಿಗೆ ಮುಂದಾಗಿ’</strong></p><p>‘ಹಳದಿ ರೋಗ ಹತೋಟಿಗೆ ಒಂದು ಲೀಟರ್ ನೀರಿಗೆ ಪ್ರೋಪಿಕೋನಜೋಲ್ ಮೂರು ಗ್ರಾಂ, ಗಂಧಕ ಅಥವಾ ಕಾರ್ಬನ್ಡೈಜೀಮ್ ಅಥವಾ 1 ಮಿ.ಲೀ. ಹೇಕ್ಸಾಕೋನಜೋಲ್ ಬೆರೆಸಿ ಸಿಂಪಡಿಸಬೇಕು. ಒಂದು ಲೀಟರ್ ನೀರಿಗೆ ಅಂತರ ವ್ಯಾಪಿ ಕೀಟನಾಶಕಗಳಾದ 5 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್ಎಲ್ ಅಥವಾ ಮುರು ಗ್ರಾಂ ಅಸಿಟಾಮಿಪ್ರೀಡ್ 20 ಎಸ್ಪಿ ಅಥವಾ 3 ಗ್ರಾಂ ಥಯಾಮಿಥಾಕ್ಸಾಂ 25 ಡಬ್ಲೂಪಿ ಬೆರೆಸಿ ಸಿಂಪಡಿಸಬೇಕು’ ಎಂದು ಧಾರವಾಡದ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅನಗೌಡರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ಹಲವೆಡೆ ಹೆಸರು ಬೆಳೆಗೆ ಹಳದಿ ರೋಗ (ನಂಜುರೋಗ) ಕಾಣಿಸಿಕೊಂಡಿದೆ. ಇಳುವರಿ ಕುಸಿಯುವ, ಬೆಳೆ ನಾಶವಾಗುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ. </p><p>ತಾಲ್ಲೂಕಿನ ದುಬ್ಬನಮರಡಿ, ಅಗಸನಹಳ್ಳಿ, ಕೋಟೂರ, ತಡಕೋಡ, ಕುರುಬಗಟ್ಟಿ, ಮಾದನಬಾವಿ, ಕೊಟಬಾಗಿ, ಗರಗ, ಅಮ್ಮಿನಬಾವಿ, ಶಿವಳ್ಳಿ, ಹಾರೋಬೆಳವಡಿಯಲ್ಲಿ ಕೆಲವು ಹೊಲಗಳಲ್ಲಿ ರೋಗ ಕಂಡುಬಂದಿದೆ.</p><p>ಹೆಸರು ಗಿಡದ ಎಲೆಯ ಮೇಲೆ ಹಳದಿ ಚುಕ್ಕೆಗಳಾಗಿವೆ. ಇದರಿಂದ ಗಿಡದ ಬೆಳವಣಿಗೆಗೆ ಕುಂಠಿತವಾಗಿ ಚಿಗುರೊಡೆಯದೆ ಹಳದಿ ಬಣ್ಣಕ್ಕೆ ತಿರುಗಿದವೆ. ಇಂತಹ ಗಿಡಗಳನ್ನು ರೈತರು ಕಿತ್ತು ಹಾಕುತ್ತಿದ್ದಾರೆ. </p><p>ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಆಗಾಗ ತುಂತುರು ಮಳೆಯಾಗುತ್ತಿದೆ. ಮೋಡ ಕವಿದ ವಾತಾವರಣ ಇದೆ. ಮುಂಗಾರು ಪೂರ್ವ ಹಾಗೂ ಆರಂಭದಲ್ಲಿ ಹದ ಮಳೆಯಾಗಿದ್ದು, ಜಿಲ್ಲೆಯಾದ್ಯಂತ 96 ಸಾವಿರ ಹೆಕ್ಟೇರ್ನಲ್ಲಿ ಹೆಸರು ಬಿತ್ತನೆಯಾಗಿದೆ.</p><p>‘ಎರಡು ಎಕರೆಯಲ್ಲಿ ಹೆಸರು ಬಿತ್ತನೆ ಮಾಡಿದ್ದೇನೆ. ಬೀಜ ಬಿತ್ತನೆ, ರಸಗೊಬ್ಬರ, ಎಡೆ ಖರ್ಚು ಸೇರಿ<br>ಪ್ರತಿ ಎಕರೆಗೆ ₹25 ಸಾವಿರ ವೆಚ್ಚವಾಗಿದೆ. ಎರಡು ಬಾರಿ ಔಷಧ ಸಿಂಪಡಿಸಿದರೂ ಹಳದಿ ರೋಗ ನಿಯಂತ್ರಣಕ್ಕೆ ಬಂದಿಲ್ಲ. ಹಾಕಿದ ಬಂಡವಾಳವೂ ವಾಪಸ್ ಸಿಗುವ ಭರವಸೆ ಇಲ್ಲದಂತಾಗಿದೆ’ ಎಂದು ದುಬ್ಬನಮರಡಿ ರೈತ ಈರಪ್ಪ ಲಕ್ಕುಂಡಿ ‘ಪ್ರಜಾವಾಣಿ’ಗೆ ತಿಳಿಸಿದರು.</p><p>‘ಹಳದಿ ರೋಗಕ್ಕೆ ವೈಟ್ ಪ್ಲೈ (ಬಿಳಿ ನೊಣ) ಕಾರಣವಾಗಿದ್ದು, ಒಂದು ಗಿಡದಿಂದ ಗಿಡಕ್ಕೆ ಹೋಗಿ<br>ರಸ ಹೀರುವುದರಿಂದ ರೋಗ ಹರಡುತ್ತದೆ. ಅರಂಭದಲ್ಲೇ ನಿಯಂತ್ರಿಸಬೇಕು. ರೋಗಪೀಡಿತ ಗಿಡಗಳನ್ನು ರೈತರು ಕಿತ್ತು ಹೂಳಬೇಕು. ಪ್ರಾರಂಭದಲ್ಲೇ ಕೀಟನಾಶಕ ಬಳಕೆ ಮಾಡಬೇಕು. ರೋಗದಿಂದ ಬೆಳೆಗಳಲ್ಲಿ ಸಾರಜನಕ ಕಡಿಮೆಯಾಗಿರುತ್ತದೆ. ರೈತರು 19-19-19 ರಸಗೊಬ್ಬರ ಅಥವಾ ನ್ಯಾನೊ ಯೂರಿಯಾ ಸಿಂಪಡಿಸಬೇಕು’ ಎಂದು ಕೃಷಿ ವಿಶ್ವವಿದ್ಯಾಲಯದ ಬೇಸಾಯಶಾಸ್ತ್ರ ವಿಭಾಗದ ವಿಜ್ಞಾನಿ ಬಸವರಾಜ ಏಣಗಿ ತಿಳಿಸಿದರು.</p>.<div><blockquote>ಕೃಷಿ ಇಲಾಖೆ ಅಧಿಕಾರಿಗಳು ಹೆಸರು ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಬೆಳೆಗಳನ್ನು ಉಳಿಸಿಕೊಳ್ಳಲು ಪರಿಹಾರ ತಿಳಿಸಬೇಕು</blockquote><span class="attribution">ಮಲ್ಲಿಕಾರ್ಜುನ ಬಾಳನಗೌಡ್ರ, ಶಿರೂರ ಗ್ರಾಮದ ರೈತ</span></div>.<p><strong>‘ರೋಗ ಹತೋಟಿಗೆ ಮುಂದಾಗಿ’</strong></p><p>‘ಹಳದಿ ರೋಗ ಹತೋಟಿಗೆ ಒಂದು ಲೀಟರ್ ನೀರಿಗೆ ಪ್ರೋಪಿಕೋನಜೋಲ್ ಮೂರು ಗ್ರಾಂ, ಗಂಧಕ ಅಥವಾ ಕಾರ್ಬನ್ಡೈಜೀಮ್ ಅಥವಾ 1 ಮಿ.ಲೀ. ಹೇಕ್ಸಾಕೋನಜೋಲ್ ಬೆರೆಸಿ ಸಿಂಪಡಿಸಬೇಕು. ಒಂದು ಲೀಟರ್ ನೀರಿಗೆ ಅಂತರ ವ್ಯಾಪಿ ಕೀಟನಾಶಕಗಳಾದ 5 ಮಿ.ಲೀ ಇಮಿಡಾಕ್ಲೋಪ್ರಿಡ್ 17.8 ಎಸ್ಎಲ್ ಅಥವಾ ಮುರು ಗ್ರಾಂ ಅಸಿಟಾಮಿಪ್ರೀಡ್ 20 ಎಸ್ಪಿ ಅಥವಾ 3 ಗ್ರಾಂ ಥಯಾಮಿಥಾಕ್ಸಾಂ 25 ಡಬ್ಲೂಪಿ ಬೆರೆಸಿ ಸಿಂಪಡಿಸಬೇಕು’ ಎಂದು ಧಾರವಾಡದ ಸಹಾಯಕ ಕೃಷಿ ನಿರ್ದೇಶಕ ರಾಜಶೇಖರ ಅನಗೌಡರ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>