‘ಇಂತಹ ಕಲುಷಿತ ವಾತಾವರಣದಲ್ಲಿ ನಾವು ಇನ್ನೂ ರಾಜಕಾರಣ ಮಾಡಬೇಕಿದೆ. ಓಟು ಹಾಕುವವರು ಮೂವರಿಂದಲೂ ಪಡೆದುಕೊಂಡು ಒಬ್ಬರಿಗೆ ವೋಟು ಹಾಕಿ ಇನ್ನಿಬ್ಬರಿಗೆ ಟೋಪಿ ಹಾಕುತ್ತಾರೆ. ಟೋಪಿ ಹಾಕಿಸಿಕೊಂಡವನು ಸೋಲುತ್ತಾನೆ. ಎಂದಾರೂ ಆರಿಸಿ ಬಂದರೆ ಅವನು ಎಲ್ಲರಿಗೂ ಟೋಪಿ ಹಾಕುತ್ತಾನೆ. ಇವತ್ತು ದುಡ್ಡಿದ್ದವರದ್ದೇ ರಾಜಕಾರಣವಾಗಿದೆ. ಪಕ್ಷಗಳು ಇಂದು ವ್ಯಕ್ತಿ ನೋಡದೇ ಹಣ ಇದ್ದವನಿಗೆ ಟಿಕೆಟ್ ನೀಡುತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.