ತಂಡದ ಶ್ರಮ: ಗದಗ ಜಿಲ್ಲೆಯ ಜೌಗು ಪ್ರದೇಶಗಳಲ್ಲಿನ ವಲಸೆ ಹಕ್ಕಿಗಳ ದಾಖಲೀಕರಣದ ಸಂದರ್ಭದಲ್ಲಿ ಈ ಕ್ರೌಂಚ ಪಕ್ಷಿಗಳನ್ನು ಗಜೇಂದ್ರಗಡ ವಲಯದ ಜೀಗೆರಿ ಕೆರೆ ಮತ್ತು ರೋಣ ವಲಯದ ಜಿಗಳೂರಿನ ಹೊಸಕೆರೆಯಲ್ಲಿ ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್ ನಾಯಕ, ರೋಣ ಉಪವಲಯ ಅರಣ್ಯಾಧಿಕಾರಿ ಅನ್ವರ್ ಕೊಲ್ಹಾರ, ಪರಿಸರ ಪ್ರೇಮಿ ಸಂಗಮೇಶ ಎಸ್.ಕಡಗದ, ಗುಂಡುರಾವ್ ಕುಲಕರ್ಣಿ, ಶರಣು.ಕೆ.ಗೌಡರು ಪತ್ತೆಹಚ್ಚಿದ್ದಾರೆ.