<p><strong>ಗಜೇಂದ್ರಗಡ/ಹೊಳೆಆಲೂರು:</strong> ಮಂಗೋಲಿಯಾ ಮತ್ತು ಚೀನಾದೇಶದ ಕ್ರೌಂಚ ಪಕ್ಷಿಗಳು (Demoiselle crane) ಈ ಬಾರಿಯ ಚಳಿಗಾಲದ ಋತುವಿನಲ್ಲಿ ಪ್ರಥಮ ಬಾರಿಗೆ ಗದಗ ಜಿಲ್ಲೆಯ ಗಜೇಂದ್ರಗಡ ಮತ್ತು ರೋಣ ವಲಯದ ಕೆರೆಗಳಿಗೆ ವಲಸೆ ಬಂದಿದ್ದು ಪಕ್ಷಿಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.</p>.<p>ಈ ಕ್ರೌಂಚ ಪಕ್ಷಿಗಳು ಚಳಿಗಾಲವನ್ನು ಭಾರತದಲ್ಲಿ ಕಳೆದು ಇಲ್ಲಿ ಬೇಸಿಗೆ ಆರಂಭವಾದ ನಂತರ ಪುನಃ ತಮ್ಮ ಮೂಲಸ್ಥಾನಕ್ಕೆ ಮರಳುತ್ತವೆ. ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕ್ರೌಂಚ ಪಕ್ಷಿಗಳಿಗೆ ಸಾಂಸ್ಕೃತಿಕ ಮಹತ್ವವನ್ನೇ ನೀಡಲಾಗಿದೆ.</p>.<p>ಈ ರಾಜ್ಯಗಳಲ್ಲಿ ಕೊಂಜ ಅಥವಾ ಕುರ್ಜಾ ಎನ್ನುತ್ತಾರೆ. ನಮ್ಮ ಭಾಗದಲ್ಲಿ ಸ್ಥಳೀಯವಾಗಿ ಕ್ರೌಂಚ ಪಕ್ಷಿಗಳನ್ನು ಕೊರಕೊಂಚ, ಕಡ್ಲಿಗೊಂಚಲ, ಗೊಂಗಾ ಎಂದು ಕರೆಯುವರು. ಇವು ಗ್ರುಡೇ ಕುಟುಂಬಕ್ಕೆ ಸೇರಿದ ಪಕ್ಷಿಗಳಾಗಿದ್ದು ವೈಜ್ಞಾನಿಕವಾಗಿ ‘ಗ್ರಸ್ ವರ್ಗೊ’ ಎನ್ನುವರು. ಈ ಪಕ್ಷಿಗಳು ಅತಿ ಎತ್ತರ ಮತ್ತು ದೂರದ ಸ್ಥಾನವನ್ನು ಹಿಮಾಲಯ ಪರ್ವತದ ಮೂಲಕ ಡಿಸೆಂಬರ್ ಮೊದಲ ವಾರದಲ್ಲಿ ಭಾರತದ ಉಷ್ಣವಲಯ ರಾಜ್ಯಗಳ ಜೌಗುಪ್ರದೇಶಗಳಿಗೆ ವಲಸೆ ಬರುತ್ತವೆ.</p>.<p>ತಂಡದ ಶ್ರಮ: ಗದಗ ಜಿಲ್ಲೆಯ ಜೌಗು ಪ್ರದೇಶಗಳಲ್ಲಿನ ವಲಸೆ ಹಕ್ಕಿಗಳ ದಾಖಲೀಕರಣದ ಸಂದರ್ಭದಲ್ಲಿ ಈ ಕ್ರೌಂಚ ಪಕ್ಷಿಗಳನ್ನು ಗಜೇಂದ್ರಗಡ ವಲಯದ ಜೀಗೆರಿ ಕೆರೆ ಮತ್ತು ರೋಣ ವಲಯದ ಜಿಗಳೂರಿನ ಹೊಸಕೆರೆಯಲ್ಲಿ ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್ ನಾಯಕ, ರೋಣ ಉಪವಲಯ ಅರಣ್ಯಾಧಿಕಾರಿ ಅನ್ವರ್ ಕೊಲ್ಹಾರ, ಪರಿಸರ ಪ್ರೇಮಿ ಸಂಗಮೇಶ ಎಸ್.ಕಡಗದ, ಗುಂಡುರಾವ್ ಕುಲಕರ್ಣಿ, ಶರಣು.ಕೆ.ಗೌಡರು ಪತ್ತೆಹಚ್ಚಿದ್ದಾರೆ.</p>.<p>ಕಾಮನ್ ಕ್ರೇನ್ ಡೆಮೊಸೆಲ್ ಕ್ರೇನ್ ಸಮೋಹದ ಜೊತೆ ಅಕಸ್ಮಾತಾಗಿ ಬಂದಿರುತ್ತದೆ. ಇದು ಪುನಃ ಈ ಗುಂಪಿನೊಂದಿಗೆ ಚಳಿಗಾಲ ಮುಗಿದ ನಂತರವೇ ಮೂಲಸ್ಥಾನಕ್ಕೆ ಮರಳುತ್ತದೆ. ಕಾಮನ್ ಕ್ರೇನ್ ಕರ್ನಾಟಕದಲ್ಲಿ ದಾಖಲಾಗಿರುವುದು ತೀರಾ ವಿರಳ.</p>.<p>ಬೀದರ್ ಮತ್ತು ರಾಯಚೂರನಲ್ಲಿ ದಾಖಲಾಗಿರುವದನ್ನು ಬಿಟ್ಟರೆ ಗದಗ ಜಿಲ್ಲೆಯಲ್ಲಿ ಇತ್ತೀಚೆಗೆ ದಾಖಲಾಗಿರುತ್ತದೆ. ಯಾವುದೇ ವಿದೇಶಿ ವಲಸೆ ಹಕ್ಕಿಗಳಿಗೆ ಇಲ್ಲಿರುವ ಜೌಗು ಪ್ರದೇಶಗಳು ತಮ್ಮ ವಲಸೆ ವಾಸಕ್ಕೆ ಸುರಕ್ಷಿತವೆಂದು ಖಚಿತವಾದರೆ ಪ್ರತಿವರ್ಷ ವಲಸೆ ಹಕ್ಕಿಗಳು ಇಂತಹ ಜೌಗುಪ್ರದೇಶಗಳಿಗೆ ವಲಸೆಬರುತ್ತವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.</p>.<p>*<br />ಅಕಾಲಿಕ ಮಳೆ, ವಾತವರಣ ದಲ್ಲಿನ ವ್ಯತ್ಯಾಸ ಹಕ್ಕಿಗಳ ವಲಸೆ ಮಾರ್ಗ ಪಥದಲ್ಲಿ ಬದಲಾವಣೆಯಾಗಿ ಜೌಗು ಪ್ರದೇಶಕ್ಕೆ ಬಂದಿವೆ. ಈ ಹಿಂದೆ ಕುಷ್ಟಗಿಯ ನಿಡಶೇಸಿ ಕೆರೆ, ಆಲಮಟ್ಟಿ ಹಿನ್ನೀರಿನ ಕಂಡು ಬಂದಿದ್ದವು.<br /><em><strong>-ಮಂಜುನಾಥ ಎಸ್ ನಾಯಕ, ಜೀವ ವೈವಿಧ್ಯ ಸಂಶೋಧಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗಜೇಂದ್ರಗಡ/ಹೊಳೆಆಲೂರು:</strong> ಮಂಗೋಲಿಯಾ ಮತ್ತು ಚೀನಾದೇಶದ ಕ್ರೌಂಚ ಪಕ್ಷಿಗಳು (Demoiselle crane) ಈ ಬಾರಿಯ ಚಳಿಗಾಲದ ಋತುವಿನಲ್ಲಿ ಪ್ರಥಮ ಬಾರಿಗೆ ಗದಗ ಜಿಲ್ಲೆಯ ಗಜೇಂದ್ರಗಡ ಮತ್ತು ರೋಣ ವಲಯದ ಕೆರೆಗಳಿಗೆ ವಲಸೆ ಬಂದಿದ್ದು ಪಕ್ಷಿಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.</p>.<p>ಈ ಕ್ರೌಂಚ ಪಕ್ಷಿಗಳು ಚಳಿಗಾಲವನ್ನು ಭಾರತದಲ್ಲಿ ಕಳೆದು ಇಲ್ಲಿ ಬೇಸಿಗೆ ಆರಂಭವಾದ ನಂತರ ಪುನಃ ತಮ್ಮ ಮೂಲಸ್ಥಾನಕ್ಕೆ ಮರಳುತ್ತವೆ. ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ಕ್ರೌಂಚ ಪಕ್ಷಿಗಳಿಗೆ ಸಾಂಸ್ಕೃತಿಕ ಮಹತ್ವವನ್ನೇ ನೀಡಲಾಗಿದೆ.</p>.<p>ಈ ರಾಜ್ಯಗಳಲ್ಲಿ ಕೊಂಜ ಅಥವಾ ಕುರ್ಜಾ ಎನ್ನುತ್ತಾರೆ. ನಮ್ಮ ಭಾಗದಲ್ಲಿ ಸ್ಥಳೀಯವಾಗಿ ಕ್ರೌಂಚ ಪಕ್ಷಿಗಳನ್ನು ಕೊರಕೊಂಚ, ಕಡ್ಲಿಗೊಂಚಲ, ಗೊಂಗಾ ಎಂದು ಕರೆಯುವರು. ಇವು ಗ್ರುಡೇ ಕುಟುಂಬಕ್ಕೆ ಸೇರಿದ ಪಕ್ಷಿಗಳಾಗಿದ್ದು ವೈಜ್ಞಾನಿಕವಾಗಿ ‘ಗ್ರಸ್ ವರ್ಗೊ’ ಎನ್ನುವರು. ಈ ಪಕ್ಷಿಗಳು ಅತಿ ಎತ್ತರ ಮತ್ತು ದೂರದ ಸ್ಥಾನವನ್ನು ಹಿಮಾಲಯ ಪರ್ವತದ ಮೂಲಕ ಡಿಸೆಂಬರ್ ಮೊದಲ ವಾರದಲ್ಲಿ ಭಾರತದ ಉಷ್ಣವಲಯ ರಾಜ್ಯಗಳ ಜೌಗುಪ್ರದೇಶಗಳಿಗೆ ವಲಸೆ ಬರುತ್ತವೆ.</p>.<p>ತಂಡದ ಶ್ರಮ: ಗದಗ ಜಿಲ್ಲೆಯ ಜೌಗು ಪ್ರದೇಶಗಳಲ್ಲಿನ ವಲಸೆ ಹಕ್ಕಿಗಳ ದಾಖಲೀಕರಣದ ಸಂದರ್ಭದಲ್ಲಿ ಈ ಕ್ರೌಂಚ ಪಕ್ಷಿಗಳನ್ನು ಗಜೇಂದ್ರಗಡ ವಲಯದ ಜೀಗೆರಿ ಕೆರೆ ಮತ್ತು ರೋಣ ವಲಯದ ಜಿಗಳೂರಿನ ಹೊಸಕೆರೆಯಲ್ಲಿ ಜೀವವೈವಿಧ್ಯ ಸಂಶೋಧಕ ಮಂಜುನಾಥ ಎಸ್ ನಾಯಕ, ರೋಣ ಉಪವಲಯ ಅರಣ್ಯಾಧಿಕಾರಿ ಅನ್ವರ್ ಕೊಲ್ಹಾರ, ಪರಿಸರ ಪ್ರೇಮಿ ಸಂಗಮೇಶ ಎಸ್.ಕಡಗದ, ಗುಂಡುರಾವ್ ಕುಲಕರ್ಣಿ, ಶರಣು.ಕೆ.ಗೌಡರು ಪತ್ತೆಹಚ್ಚಿದ್ದಾರೆ.</p>.<p>ಕಾಮನ್ ಕ್ರೇನ್ ಡೆಮೊಸೆಲ್ ಕ್ರೇನ್ ಸಮೋಹದ ಜೊತೆ ಅಕಸ್ಮಾತಾಗಿ ಬಂದಿರುತ್ತದೆ. ಇದು ಪುನಃ ಈ ಗುಂಪಿನೊಂದಿಗೆ ಚಳಿಗಾಲ ಮುಗಿದ ನಂತರವೇ ಮೂಲಸ್ಥಾನಕ್ಕೆ ಮರಳುತ್ತದೆ. ಕಾಮನ್ ಕ್ರೇನ್ ಕರ್ನಾಟಕದಲ್ಲಿ ದಾಖಲಾಗಿರುವುದು ತೀರಾ ವಿರಳ.</p>.<p>ಬೀದರ್ ಮತ್ತು ರಾಯಚೂರನಲ್ಲಿ ದಾಖಲಾಗಿರುವದನ್ನು ಬಿಟ್ಟರೆ ಗದಗ ಜಿಲ್ಲೆಯಲ್ಲಿ ಇತ್ತೀಚೆಗೆ ದಾಖಲಾಗಿರುತ್ತದೆ. ಯಾವುದೇ ವಿದೇಶಿ ವಲಸೆ ಹಕ್ಕಿಗಳಿಗೆ ಇಲ್ಲಿರುವ ಜೌಗು ಪ್ರದೇಶಗಳು ತಮ್ಮ ವಲಸೆ ವಾಸಕ್ಕೆ ಸುರಕ್ಷಿತವೆಂದು ಖಚಿತವಾದರೆ ಪ್ರತಿವರ್ಷ ವಲಸೆ ಹಕ್ಕಿಗಳು ಇಂತಹ ಜೌಗುಪ್ರದೇಶಗಳಿಗೆ ವಲಸೆಬರುತ್ತವೆ ಎನ್ನುತ್ತಾರೆ ವನ್ಯಜೀವಿ ತಜ್ಞರು.</p>.<p>*<br />ಅಕಾಲಿಕ ಮಳೆ, ವಾತವರಣ ದಲ್ಲಿನ ವ್ಯತ್ಯಾಸ ಹಕ್ಕಿಗಳ ವಲಸೆ ಮಾರ್ಗ ಪಥದಲ್ಲಿ ಬದಲಾವಣೆಯಾಗಿ ಜೌಗು ಪ್ರದೇಶಕ್ಕೆ ಬಂದಿವೆ. ಈ ಹಿಂದೆ ಕುಷ್ಟಗಿಯ ನಿಡಶೇಸಿ ಕೆರೆ, ಆಲಮಟ್ಟಿ ಹಿನ್ನೀರಿನ ಕಂಡು ಬಂದಿದ್ದವು.<br /><em><strong>-ಮಂಜುನಾಥ ಎಸ್ ನಾಯಕ, ಜೀವ ವೈವಿಧ್ಯ ಸಂಶೋಧಕ</strong></em></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>