ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಶಿರಹಟ್ಟಿ | ಬರಗಾಲದಿಂದ ರೈತ ಕಂಗಾಲು: ಮಧ್ಯಂತರ ಪರಿಹಾರಕ್ಕಾಗಿ ಬೇಡಿಕೆ

ನಿಂಗಪ್ಪ ಹಮ್ಮಿಗಿ
Published : 24 ನವೆಂಬರ್ 2023, 7:02 IST
Last Updated : 24 ನವೆಂಬರ್ 2023, 7:02 IST
ಫಾಲೋ ಮಾಡಿ
Comments
ಮಳೆ ಇಲ್ಲದೆ ಶೇಂಗಾ ಬೆಳೆ ಒಣಗುತ್ತಿರುವುದು
ಮಳೆ ಇಲ್ಲದೆ ಶೇಂಗಾ ಬೆಳೆ ಒಣಗುತ್ತಿರುವುದು
ತಾಲ್ಲೂಕಿನಲ್ಲಿ 28385 ಹೆಕ್ಟೇರ್ ಪ್ರದೇಶ ಬರಗಾಲ ಪೀಡಿತ ಎಂದು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ₹45 ಲಕ್ಷ ಪರಿಹಾರವನ್ನು ತಾಲ್ಲೂಕಿನ ಹೆಸರು ಬೆಳೆದ ರೈತರಿಗೆ ನೀಡಲಾಗುತ್ತಿದೆ
ರೇವಣೆಪ್ಪ ಮನಗೂಳಿ ಕೃಷಿ ಇಲಾಖೆ ಅಧಿಕಾರಿ
ಈ ವರ್ಷದ ಪರಿಸ್ಥಿತಿ ಬಾಳ ಕೆಟೈತ್ರಿ. ಮಳಿ ಇಲ್ಲ ಬೆಳಿ ಇಲ್ಲ. ದನಕರಕ ಹೊಟ್ಟು ಇಲ್ದಂಗ ಆಗೈತ್ರಿ. ವರ್ಷಾ ಬೆಳಿವಿಮಿ ಕಟ್ಟಿದ್ರೂ ಉಪಯೋಗ ಆಗಿಲ್ಲ. ಈ ವರ್ಷ ಆದ್ರೂ ಪರಿಹಾರ ನೀಡ್ರಿ. ಇಲ್ಲಾ ಅಂದ್ರ ಗುಳಿ ಹೋಗೋದು ಅನಿವಾರ್ಯ ನೋಡ್ರಿ
ಹಾಲಮ್ಮ ಸಂಶಿ ರೈತ ಮಹಿಳೆ
ಸಮಸ್ಯೆಗಳ ಸುಳಿಯಲ್ಲಿ ರೈತ
ಮುಂಗಾರಿನಲ್ಲಿ ಬಿತ್ತನೆ ಮಾಡಿದ್ದ ಶೇಂಗಾ ಗೋವಿನ ಜೋಳ ಹತ್ತಿ ಹೆಸರು ಬೆಳೆಗಳು ಸಂಪೂರ್ಣ ಹಾಳಾಗಿವೆ. ಮುಖ್ಯ ಬೆಳೆಯಾದ ಶೇಂಗಾ ಬೆಳೆಯ ಫಸಲು ಕೈಗೆ ಸಿಗದೆ ಕಳೆದ ವಾರ ಆದ ಮಳೆಗೆ ಹೊಟ್ಟು ಸಹ ಕೆಟ್ಟು ದನಕರುಗಳಿಗೆ ಮೇವು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಗಾರದ ಬೆಲೆ ತೂಗುವ ಹೊಟ್ಟನ್ನು ಖರೀದಿ ಮಾಡವ ಶಕ್ತಿಯೂ ಸಹ ರೈತರಲ್ಲಿಲ್ಲ. ಆದ್ದರಿಂದ ಕೂಸಿನಂತೆ ಜೋಪಾನ ಮಾಡಿದ ಜಾನುವಾರುಗಳನ್ನು ಸಹ ಮಾರುತ್ತಿದ್ದಾರೆ. ಅಲ್ಲದೇ ಹೊಟ್ಟೆಪಾಡಿಗಾಗಿ ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ತಾಲ್ಲೂಕಿನ ರೈತರಿಗೆ ಶೀಘ್ರ ಪರಿಹಾರ ನೀಡಬೇಕೆಂಬುದು ರೈತ ಸಂಘಟನೆಗಳ ಆಗ್ರಹವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT