ತುಂಗಭದ್ರಾ ನದಿಯಲ್ಲಿ ನೀರು ಹರಿಯದ್ದರಿಂದ ಭತ್ತದ ಇಳುವರಿ ಕಳೆದ ವರ್ಷಕ್ಕಿಂತ ಕಡಿಮೆಯಾಗಿದೆ. ಅನ್ಯ ಬೆಳೆಗಳಿಗೆ ಹೋಲಿಸಿದರೆ ಭತ್ತದ ಬೆಳೆಯಿಂದ ರೈತರು ಸ್ವಲ್ಪ ಆದಾಯ ಪಡೆದುಕೊಂಡಿದ್ದಾರೆ
ಮಾರುತಿ ಕೊಳಲ ಚಂದ್ರಶೇಖರ ಮಜ್ಜಿಗಿ ಭತ್ತ ಬೆಳೆದ ರೈತರು ಕೊರ್ಲಹಳ್ಳಿ
ಭತ್ತದ ಹುಲ್ಲಿನಿಂದಲೂ ಲಾಭ
ಭತ್ತದ ಕೊಯ್ಲಿನ ನಂತರ ಜಮೀನಿನಲ್ಲಿ ಉಳಿಯುವ ಭತ್ತದ ಹುಲ್ಲನ್ನು ರೈತರು ಮಾರಾಟ ಮಾಡುತ್ತಾರೆ. ಒಂದು ಟ್ಯ್ರಾಕ್ಟರ್ ಭತ್ತದ ಹುಲ್ಲು ₹1500ರಿಂದ ₹2 ಸಾವಿರವರೆಗೂ ಮಾರಾಟವಾಗುತ್ತದೆ. ಪ್ರಸ್ತುತ ವರ್ಷ ಮುಂಗಾರು ಕೈಕೊಟ್ಟಿರುವುದರಿಂದ ಜಾನುವಾರುಗಳಿಗೆ ಹೊಟ್ಟು ಮೇವು ದೊರೆಯದಂತಾಗಿದೆ. ಹೀಗಾಗಿ ಜಾನುವಾರುಗಳುಳ್ಳ ರೈತರು ಭತ್ತದ ಹುಲ್ಲು ಖರೀದಿಗೆ ಮುಂದಾಗಿದ್ದಾರೆ. ಈ ಕಾರಣದಿಂದಾಗಿ ಭತ್ತದ ಹುಲ್ಲು ಕಳೆದ ವರ್ಷಕ್ಕಿಂತ ಈ ವರ್ಷ ಜೋರಾಗಿ ಮಾರಾಟವಾಗುತ್ತಲಿದೆ. ಜಿಲ್ಲೆಯ ವಿವಿಧ ಭಾಗಗಳ ರೈತರು ಜಮೀನುಗಳಿಗೆ ಆಗಮಿಸಿ ಭತ್ತದ ಹುಲ್ಲನ್ನು ಖರೀದಿಸುತ್ತಿದ್ದಾರೆ.