‘ತಾಲ್ಲೂಕಿನಲ್ಲಿ ಈ ವರ್ಷ ಸುರಿದ ಭಾರಿ ಮಳೆಗೆ ಫ್ಲೋಟಿಂಗ್ ಬಾರ್ಜ್ ಸಂಪೂರ್ಣ ಹಾಳಾಗಿದ್ದು, ಇದನ್ನು ದುರಸ್ತಿಗೊಳಿಸಲು ₹20 ಲಕ್ಷ ಅನುದಾನ ಒದಗಿಸಬೇಕು ಎಂದು ಇಲಾಖೆ ಪ್ರಸ್ತಾವ ಸಲ್ಲಿಸಿದೆ. ಅಧಿಕಾರಿಗಳು ಅವೈಜ್ಞಾನಿಕವಾಗಿ ನಿರ್ಮಿಸಿರುವ ಫ್ಲೋಟಿಂಗ್ ಬಾರ್ಜ್ ಯೋಜನೆಯಿಂದ ಸರ್ಕಾರದ ಕೋಟ್ಯಾಂತರ ರೂಪಾಯಿ ಹಣ ಪ್ರತಿ ವರ್ಷ ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದು ದುರಂತವೇ ಸರಿ’ ಎಂದು ನಾರಾಯಣಪೂರ ಗ್ರಾಮದ ರಮೇಶ, ಕನಕವಾಡ ಗ್ರಾಮದ ಹಾಶೀಮಪೀರ ಹೇಳಿದ್ದಾರೆ.