ಪ್ರತಿ ವರ್ಷದಂತೆ ಈ ಬಾರಿಯೂ ಗದಗ ಜಿಲ್ಲೆಯ ಜನರು ಪರಿಸರಸ್ನೇಹಿ ಗಣೇಶ ವಿಗ್ರಹಗಳನ್ನು ಮಾತ್ರ ಖರೀದಿಸಿ ಕಲಾವಿದರನ್ನು ಪ್ರೋತ್ಸಾಹಿಸಬೇಕು. ಪಿಒಪಿ ಗಣೇಶ ಮೂರ್ತಿಗಳನ್ನು ಯಾವುದೇ ಕಾರಣಕ್ಕೂ ಕೊಳ್ಳಬೇಡಿ.–ಮುತ್ತಣ್ಣ ಭರಡಿ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಗಣೇಶ ಮೂರ್ತಿ ತಯಾರಕರ ಸಂಘ
ತಾರತಮ್ಯ ನೀತಿಯಿಂದ ತೊಂದರೆ ನಮ್ಮಲ್ಲಿ ಈಗಾಗಲೇ 3 ಅಡಿ ಎತ್ತರದ 40 ಹಾಗೂ ಸಣ್ಣ ಗಾತ್ರದ 150-200 ಮೂರ್ತಿಗಳನ್ನು ತಯಾರಿಸಿದ್ದೇವೆ. ಪ್ರತಿ ವರ್ಷ ಈ ಹೊತ್ತಿಗೆ ಶೇ 80ರಷ್ಟು ಮೂರ್ತಿಗಳು ಮುಂಗಡ ಬುಕ್ ಆಗುತ್ತಿದ್ದವು. ಆದರೆ ಈ ಬಾರಿ ಶೇ 50ರಷ್ಟು ಮಾತ್ರ ಬುಕ್ ಆಗಿವೆ. ಸರ್ಕಾರ ರಾಜ್ಯದಾದ್ಯಂತ ಪಿಒಪಿ ಗಣೇಶ ಮೂರ್ತಿ ನಿಷೇಧಿಸಿದೆ. ಆದರೆ ಬೇರೆ ಜಿಲ್ಲೆ ತಾಲ್ಲೂಕುಗಳಲ್ಲಿ ಪಿಒಪಿ ಮೂರ್ತಿಗಳ ಮಾರಾಟ ನಡೆಯುತ್ತಿರುವುದು ಅಧಿಕಾರಿಗಳು ಸರ್ಕಾರದ ತಾರತಮ್ಯ ನೀತಿಗೆ ಸಾಕ್ಷಿಯಾಗಿದೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ.–ಸುರೇಶ ಚಿತ್ರಗಾರ ಗಜೇಂದ್ರಗಡದ ಮೂರ್ತಿ ತಯಾರಕ
ತಾರತಮ್ಯ ನೀತಿಯಿಂದ ತೊಂದರೆ ನಮ್ಮಲ್ಲಿ ಈಗಾಗಲೇ 3 ಅಡಿ ಎತ್ತರದ 40 ಹಾಗೂ ಸಣ್ಣ ಗಾತ್ರದ 150-200 ಮೂರ್ತಿಗಳನ್ನು ತಯಾರಿಸಿದ್ದೇವೆ. ಪ್ರತಿ ವರ್ಷ ಈ ಹೊತ್ತಿಗೆ ಶೇ 80ರಷ್ಟು ಮೂರ್ತಿಗಳು ಮುಂಗಡ ಬುಕ್ ಆಗುತ್ತಿದ್ದವು. ಆದರೆ ಈ ಬಾರಿ ಶೇ 50ರಷ್ಟು ಮಾತ್ರ ಬುಕ್ ಆಗಿವೆ. ಸರ್ಕಾರ ರಾಜ್ಯದಾದ್ಯಂತ ಪಿಒಪಿ ಗಣೇಶ ಮೂರ್ತಿ ನಿಷೇಧಿಸಿದೆ. ಆದರೆ ಬೇರೆ ಜಿಲ್ಲೆ ತಾಲ್ಲೂಕುಗಳಲ್ಲಿ ಪಿಒಪಿ ಮೂರ್ತಿಗಳ ಮಾರಾಟ ನಡೆಯುತ್ತಿರುವುದು ಅಧಿಕಾರಿಗಳು ಸರ್ಕಾರದ ತಾರತಮ್ಯ ನೀತಿಗೆ ಸಾಕ್ಷಿಯಾಗಿದೆ. ಇದರಿಂದ ನಮಗೆ ತೊಂದರೆಯಾಗುತ್ತಿದೆ.–ಸುರೇಶ ಚಿತ್ರಗಾರ ಗಜೇಂದ್ರಗಡದ ಮೂರ್ತಿ ತಯಾರಕ
ತಯಾರಿಕಾ ವೆಚ್ಚ ಏರಿಕೆ ಪ್ರತಿ ವರ್ಷ ಮಣ್ಣಿನ ಬೆಲೆ ಮತ್ತು ಸಾರಿಗೆ ವೆಚ್ಚ ದುಬಾರಿಯಾಗುತ್ತಿದೆ. ತಯಾರಿಕಾ ವೆಚ್ಚವೂ ಏರುತ್ತಿದೆ. ಬಣ್ಣಗಳೂ ಸಹ ಈಗ ಮೊದಲಿಗಿಂತ ತುಟ್ಟಿಯಾಗಿವೆ. ಇದರಿಂದಾಗಿ ಕೆಲವೊಮ್ಮೆ ಮೂರ್ತಿ ತಯಾರು ಮಾಡುವುದು ಕಷ್ಟಕರ ಎನಿಸುತ್ತದೆ. ಆದರೆ ಮೂರು ದಶಕಗಳಿಂದ ನಮ್ಮನ್ನು ನಂಬಿರುವ ಗ್ರಾಹಕರಿಗೆ ತೊಂದರೆಯಾಗಬಾರದು ಎಂದು ಮುಂದುವರಿಸಿದ್ದೇವೆ.–ನಾಗಪ್ಪ ಬಡಿಗೇರ ಗಣಪತಿ ಮೂರ್ತಿಗಳ ತಯಾರಕ ಕೋಟುಮಚಗಿ
ಉತ್ಸಾಹಕ್ಕೆ ತಣ್ಣೀರು ನಮಗೆ ಗಣೇಶೋತ್ಸವ ಸಂಭ್ರಮ ತರುವ ಸನ್ನಿವೇಶ. ನಾವು ಶುದ್ಧ ಮಣ್ಣಿನಿಂದ ತಯಾರಿಸಿದ ಗಣಪತಿಗಳನ್ನು ತಯಾರಿಸಿ ನಿಗದಿತ ಮನೆಗಳಿಗೆ ಮಾರಾಟ ಮಾಡುತ್ತೇವೆ. ಆದರೆ ಬೃಹತ್ ಪ್ರಮಾಣದ ಸುಂದರ ಗಣಪತಿಗಳನ್ನು ತಯಾರಿಸಿ ಮಾರಾಟ ಮಾಡಬೇಕೆಂಬ ಆಸೆಗೆ ಪಿಒಪಿ ಗಣಪತಿಗಳ ಹಾವಳಿ ತಣ್ಣೀರು ಎರೆಚಿದೆ. ಇಂಥವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ತುಂಬಾ ಬೇಸರ ತರಿಸಿದೆ.–ನಾಗರಾಜ ಚಿತ್ರಗಾರ ಗಣಪತಿ ತಯಾರಕರು ನರಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.