<p><strong>ಗದಗ</strong>: ನಗರದ ವೀರನಾರಾಯಣ ದೇವಸ್ಥಾನ ಆವರಣದಲ್ಲಿರುವ ಬೃಂದಾವನ ಸನ್ನಿಧಾನದಲ್ಲಿ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಭಕ್ತಿಯಿಂದ ನೆರವೇರಿತು.</p>.<p>ಬೆಳಿಗ್ಗೆ 7ಕ್ಕೆ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಅಲಂಕಾರ ಸೇವೆಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.</p>.<p>ರಾಯರ ಉತ್ತರಾಧನೆ ಅಂಗವಾಗಿ ಮಂಗಳವಾರ ಗುರು ರಾಘವೇಂದ್ರ ಉತ್ಸವ ಮಂಡಳ ವತಿಯಿಂದ ಮಹಾರಥೋತ್ಸವ ನಡೆಯಿತು.</p>.<p>ವೀರನಾರಾಯಣ ದೇವಸ್ಥಾನ ಆವರಣದಿಂದ ಆರಂಭವಾದ ರಥೋತ್ಸವವು, ಸರಾಫ್ ಬಜಾರ್ನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ನಡೆಯಿತು. ರಥವನ್ನು ಹೂವು, ಹಣ್ಣು, ಬಣ್ಣದ ಬಟ್ಟೆಯೊಂದಿಗೆ ಸಿಂಗರಿಸಲಾಗಿತ್ತು. ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.</p>.<p>ಮಧ್ಯಾಹ್ನ ನೈವೇದ್ಯ, ಅಷ್ಟೋದಕ ಹಾಗೂ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.</p>.<p>ರಾತ್ರಿ 8.30ಕ್ಕೆ ಅಷ್ಟಾವಧಾನ ಸೇವೆ, ತೊಟ್ಟಿಲು ಸೇವೆ ಹಾಗೂ ಮಹಾ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.</p>.<p>ಸ್ವಾಮಿಗಳ ವೃಂದಾವನವನ್ನು ಹೂವು, ಹಣ್ಣು ಹಾಗೂ ಬೆಳ್ಳಿ ಕವಚಗಳಿಂದ ಅಲಂಕರಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಗದಗ</strong>: ನಗರದ ವೀರನಾರಾಯಣ ದೇವಸ್ಥಾನ ಆವರಣದಲ್ಲಿರುವ ಬೃಂದಾವನ ಸನ್ನಿಧಾನದಲ್ಲಿ ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವ ಭಕ್ತಿಯಿಂದ ನೆರವೇರಿತು.</p>.<p>ಬೆಳಿಗ್ಗೆ 7ಕ್ಕೆ ಅಷ್ಟೋತ್ತರ, ಪಂಚಾಮೃತ ಅಭಿಷೇಕ, ಅಲಂಕಾರ ಸೇವೆಗಳು ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.</p>.<p>ರಾಯರ ಉತ್ತರಾಧನೆ ಅಂಗವಾಗಿ ಮಂಗಳವಾರ ಗುರು ರಾಘವೇಂದ್ರ ಉತ್ಸವ ಮಂಡಳ ವತಿಯಿಂದ ಮಹಾರಥೋತ್ಸವ ನಡೆಯಿತು.</p>.<p>ವೀರನಾರಾಯಣ ದೇವಸ್ಥಾನ ಆವರಣದಿಂದ ಆರಂಭವಾದ ರಥೋತ್ಸವವು, ಸರಾಫ್ ಬಜಾರ್ನಲ್ಲಿರುವ ಆಂಜನೇಯ ಸ್ವಾಮಿ ದೇವಸ್ಥಾನದವರೆಗೆ ನಡೆಯಿತು. ರಥವನ್ನು ಹೂವು, ಹಣ್ಣು, ಬಣ್ಣದ ಬಟ್ಟೆಯೊಂದಿಗೆ ಸಿಂಗರಿಸಲಾಗಿತ್ತು. ನೂರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.</p>.<p>ಮಧ್ಯಾಹ್ನ ನೈವೇದ್ಯ, ಅಷ್ಟೋದಕ ಹಾಗೂ ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ಮಾಡಲಾಯಿತು.</p>.<p>ರಾತ್ರಿ 8.30ಕ್ಕೆ ಅಷ್ಟಾವಧಾನ ಸೇವೆ, ತೊಟ್ಟಿಲು ಸೇವೆ ಹಾಗೂ ಮಹಾ ಮಂಗಳಾರತಿಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.</p>.<p>ಸ್ವಾಮಿಗಳ ವೃಂದಾವನವನ್ನು ಹೂವು, ಹಣ್ಣು ಹಾಗೂ ಬೆಳ್ಳಿ ಕವಚಗಳಿಂದ ಅಲಂಕರಿಸಲಾಗಿತ್ತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>