‘ಮನ್ ಕೀ ಬಾತ್’ನಲ್ಲಿ ಪ್ರಧಾನಿ ಅವರು ಶ್ಲಾಘಿಸಿದ ವ್ಯಕ್ತಿಗಳೆಲ್ಲರನ್ನೂ ಈ ಬಾರಿಯ ಗಣರಾಜ್ಯೋತ್ಸವಕ್ಕೆ ಅತಿಥಿಯಾಗಿ ಆಹ್ವಾನಿಸಿದ್ದು ವಿಶೇಷವಾಗಿತ್ತು. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ ಸಿಂಗ್ ಠಾಕೂರ್ ಅವರು ನಮ್ಮನ್ನು ಭೇಟಿಯಾಗಿ ಆಪ್ತ ಸಂವಾದ ನಡೆಸಿದರು. ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿದ ನಮ್ಮ ದೇಶದ ಸಾಧಕರೆಲ್ಲರೂ ಸಂಸ್ಕೃತಿ, ಕಲೆ, ಪರಂಪರೆ ಪ್ರತೀಕವಾಗಿದ್ದಾರೆ. ನಿಮ್ಮ ಸಾಧನೆಗಳು ಹೀಗೆಯೇ ಮುಂದುವರೆಯಲಿ ಎಂದು ಶುಭ ಹಾರೈಸಿದರು’ ಎಂದು ಕಾವೆಂಶ್ರೀ ತಿಳಿಸಿದ್ದಾರೆ.