ನಿರ್ಲಕ್ಷ್ಯವೇ ಕಾರಣ ಮಲಪ್ರಭಾ ಕಾಲುವೆಗಳು ಇದ್ದೂ ಇಲ್ಲದಂತಾಗಿವೆ. ಕಾಲುವೆಗಳ ಸರಿಯಾದ ನಿರ್ವಹಣೆ ಸ್ವಚ್ಛತೆ ಇಲ್ಲದ ಪರಿಣಾಮ ನವಿಲುತೀರ್ಥ ಜಲಾಶಯ ಭರ್ತಿಯಾದರೂ ಅದರ ನೀರು ನಮ್ಮ ಜಮೀನುಗಳಿಗೆ ಹರಿಯುತ್ತಿಲ್ಲ. ಇದಕ್ಕೆ ನೀರಾವರಿ ಇಲಾಖೆ ಹಾಗೂ ಸರ್ಕಾರದ ನಿರ್ಲಕ್ಷ್ಯವೇ ಕಾರಣವಾಗಿದೆ. ನವೆಂಬರ್ ಒಳಗಾಗಿ ಸ್ವಚ್ಛತೆ ಮಾಡದಿದ್ದರೆ ರೈತರ ಹೋರಾಟ ಅನಿವಾರ್ಯಎಸ್.ಬಿ.ಜೋಗಣ್ಣವರ ರೈತ ಹೋರಾಟಗಾರ
ಮೊಂಡ ಸರ್ಕಾರ ಮೊಂಡ ಜನಪ್ರತಿನಿಧಿಗಳು. ಇದರಿಂದ ರೈತರ ಗೋಳು ಅವರಿಗೆ ಕೇಳದು. ಪ್ರತಿ ವರ್ಷ ಕೆಳಹಂತದ ಕಾಲುವೆಗಳಿಗೆ ನೀರು ಹರಿಯದೇ ಇರುವುದು ಸಾಮಾನ್ಯ. ಇದನ್ನು ಪರಿಹರಿಸಬೇಕಾದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ. ಸರ್ಕಾರಕ್ಕೆ ಮತ್ತೊಮ್ಮೆ ರೈತ ಬಂಡಾಯ ಬೇಕಾದಂತೆ ಕಾಣುತ್ತಿದೆ.ವಿಜಯ ಕುಲಕರ್ಣಿ ರೈತ ಹೋರಾಟಗಾರ
ಹೋರಾಟವೇ ಎಲ್ಲದಕ್ಕೂ ಮದ್ದು ನೀರಾವರಿ ಕಾಲುವೆಗಳು ಸರಿಯಾಗಿ ನಿರ್ವಹಣೆಯಾಗದೇ ಎಲ್ಲ ಜಮೀನುಗಳಿಗೆ ಸಮರ್ಪಕವಾಗಿ ನೀರು ತಲುಪುತ್ತಿಲ್ಲ. ಇದಕ್ಕಾಗಿ ಜನಪ್ರತಿನಿಧಿಗಳಿಗೆ ಅಧಿಕಾರಿಗಳಿಗೆ ಮನವಿ ಮಾಡಿದ್ದೇವೆ. ಆದರೂ ಸಾಕಾರಗೊಳ್ಳುತ್ತಿಲ್ಲ. ಈ ವ್ಯವಸ್ಥೆ ನೋಡಿದರೆ ಪ್ರತಿಯೊಂದನ್ನೂ ಹೋರಾಟದ ಮೂಲಕ ಪಡೆಯಬೇಕಾಗಿದೆ.ಬಸವರಾಜ ಸಾಬಳೆ ರೈತ ಸಂಘದ ಮುಖಂಡ ನರಗುಂದ
ತೋರಿಕೆಗಾಗಿ ಕೆಲಸ ಗಡ್ಡಕ್ಕ ಬೆಂಕಿ ಹತ್ತಿದಾಗ ಬಾವಿ ತೋಡುವಂತೆ ನೀರಾವರಿ ಇಲಾಖೆ ಕಾಲುವೆಗೆ ನೀರು ಹರಿಸಲು ಕೆಲವೇ ದಿನಗಳು ಬಾಕಿ ಇದ್ದಾಗ ಹೂಳು ತೆಗೆಯಲು ಮುಂದಾಗುತ್ತದೆ. ಅದು ಸುಮ್ಮನೆ ತೋರಿಕೆಯಾಗಿ ಅಷ್ಟೇ. ಇದರಿಂದಾಗಿ ಕೆಳ ಹಂತದ ಕಾಲುವೆಗಳಿಗೆ ನೀರು ಹರಿಯುವುದೇ ಇಲ್ಲ.ಯಲ್ಲಪ್ಪ ಚಲುವಣ್ಣವರ ಕುರ್ಲಗೇರಿ
ಹೆಸರಿಗಷ್ಟೇ ನೀರಾವರಿ ಹೆಸರಿಗಷ್ಟೇ ನೀರಾವರಿ. ಆದರೆ ಕಾಲುವೆಯಲ್ಲಿ ನೀರು ಹರಿಯುವುದಿಲ್ಲ. ನೀರು ಬಿಟ್ಟರೂ ಜಮೀನುಗಳಿಗೆ ನೀರು ಸಿಗದಂತಾಗಿದೆ.ಎಂ.ಎಸ್.ಗೋಲಪ್ಪನವರ ಸುರಕೋಡ ರೈತರ ಜಮೀನಿಗೆ ನೀರು ಹರಿಸಿ ಮುಂಗಾರು ಅತಿವೃಷ್ಟಿ ಪ್ರವಾಹದಿಂದ ಹಾಳಾಗೇತಿ. ಉಳಿದಿರೋದು ಹಿಂಗಾರು ಬೆಳೆ ಮಾತ್ರ. ಅದಕರ ನೀರು ಸಿಗದಿದ್ದರೆ ನಮ್ಮ ಜೀವನ ಬೀದಿಗೆ ಬರತೈತಿ. ಇದನ್ನು ಅರಿತು ನೀರಾವರಿ ಇಲಾಖೆ ಎಲ್ಲ ರೈತರ ಜಮೀನುಗಳಿಗೆ ನೀರು ಹರಿಸಬೇಕು.ವಿಠಲ ಜಾಧವ ರೈತ ನರಗುಂದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.