<p><strong>ನರಗುಂದ:</strong> ಕೃಷಿಯಿಂದ ವಿಮುಖವಾಗುತ್ತಿರುವ ಪದವೀಧರರ ನಡುವೆ, ಕಲಾ ವಿಭಾಗದಲ್ಲಿ ಪದವಿ ಪಡೆದ ನರಗುಂದ ತಾಲ್ಲೂಕಿನ ಕೊಣ್ಣೂರಿನ ಮುತ್ತಪ್ಪ ಮಲ್ಲಪ್ಪ ಯಲಿಗಾರ 20ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ ಪದ್ದತಿ ಮಾಡಿ ಆರ್ಥಿಕ ಸ್ವಾವಲಂಬಿಯಾಗಿದ್ದಾರೆ.</p>.<p>ತೋಟಗಾರಿಕೆ ಬೆಳೆ, ವಾಣಿಜ್ಯ ಬೆಳೆ, ಆಹಾರ ಬೆಳೆ ಹಾಗೂ ತರಕಾರಿ,ಹಣ್ಣುಗಳನ್ನು ಬೆಳೆಯುವುದರ ಮೂಲಕ ಮಾದರಿಯಾಗಿದ್ದಾರೆ.</p>.<p>ನೀರಾವರಿ ಹಾಗೂ ಖುಷ್ಕಿ ಭೂಮಿ ಹೊಂದಿರುವ ಮುತ್ತಪ್ಪ ಅವರಿಗೆ ಮಲಪ್ರಭಾ ಕಾಲುವೆ ಹಾಗೂ ಕೃಷಿ ಭಾಗ್ಯದ ಮೂಲಕ ನಿರ್ಮಿಸಿಕೊಂಡ ಬೃಹತ್ ಕೃಷಿ ಹೊಂಡಗಳೇ ವರದಾನವಾಗಿವೆ. ಮಳೆ ಇಲ್ಲದಿದ್ದಾಗ ಕೃಷಿ ಹೊಂಡಗಳಿಂದ ಉತ್ತಮ ಫಸಲು ಪಡೆಯುತ್ತಿದ್ದಾರೆ.</p>.<p>ಎರಡು ಎಕರೆ ಭೂಮಿಯಲ್ಲಿ ಪೇರಲ ತೋಟ ನಿರ್ಮಿಸಿಕೊಂಡಿದ್ದು, ನಿತ್ಯ ಮಾರುಕಟ್ಟೆಗೆ ಪೇರಲ ರಫ್ತಾಗುತ್ತಿದ್ದು ಕೈ ತುಂಬ ಆದಾಯ ಗಳಿಸುತ್ತಿರುವ ಇವರು ಒಂದು ಎಕರೆಗೆ ಒಂದು ವರ್ಷಕ್ಕೆ ₹ 5 ಲಕ್ಷ ಲಾಭ ಪಡೆಯುತ್ತಿದ್ದಾರೆ. ಜೊತೆಗೆ ಬೇಡಿಕೆ ಇರುವ ಬೆಳೆಯೂ ಹೌದು ಎನ್ನುತ್ತಾರೆ ಅವರು.</p>.<p>200 ಮಹಾ ಗಣಿ, 115 ತೆಂಗು, 120 ಚೆರ್ರಿ, 20 ಶ್ರೀಗಂಧ ಗಿಡಗಳ ಜೊತೆಗೆ ಪಪ್ಪಾಯಿ, ಚಿಕ್ಕು, ನೇರಲೆ ಸೇರಿದಂತೆ ವಿವಿಧ ದೀರ್ಘಾವಧಿ ಬೆಳೆಗಳನ್ನು ಬೆಳೆದು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ.</p>.<p>ಪ್ರಮುಖ ವಾಣಿಜ್ಯ ಬೆಳೆಗಳಾದ ಗೋವಿನಜೋಳ, ಗೋಧಿ, ಕಡಲೆ, ಸೂರ್ಯಕಾಂತಿ ಸೇರಿದಂತೆ ಎಲ್ದ ರೀತಿಯ ಬೆಳೆ ಬೆಳೆದು ವರ್ಷಕ್ಕೆ ಈ ಬೆಳೆಗಳಿಂದ ಸರಾಸರಿ ₹10ಲಕ್ಷದವರೆಗೂ ಆದಾಯ ಗಳಿಸುತ್ತಿದ್ದಾರೆ.</p>.<p>ಕೋಳಿ ಸಾಕಾಣಿಕೆ: ಕೃಷಿ ಒಮ್ಮೊಮ್ಮೆ ನಷ್ಟಕ್ಕೂ ದೂಡುತ್ತದೆ. ಅದರಿಂದ ಪಾರಾಗಲು ಕೃಷಿ ಜೊತೆ ಉಪಕಸುಬು ಅಳವಡಿಸಿಕೊಳ್ಳುವುದು ಮುಖ್ಯ ಎನ್ನುವ ಯಲಿಗಾರ ಸ್ವಂತ ಕೋಳಿ ಫಾರ್ಮ್ ಹೊಂದಿದ್ದಾರೆ. ಒಂದು ಹಂತಕ್ಕೆ 6ಸಾವಿರಕ್ಕೂ ಹೆಚ್ಚು ಕೋಳಿ ಮಾರುವ ಇವರು ವರ್ಷದಲ್ಲಿ ಐದು ಹಂತದಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಾರೆ. ಈ ಮೂಲಕ ವಾರ್ಷಿಕ ₹5ಲಕ್ಷ ಲಾಭ ಪಡೆಯುತ್ತಿದ್ದಾರೆ.</p>.<p>‘ಕೃಷಿ ಎಂದರೆ ತಾತ್ಸಾರ ಬೇಡ. ಪದವಿ ಪಡೆದ ತಕ್ಷಣ ನೌಕರಿ ಎಂದು ಬೆನ್ನು ಹತ್ತುವ ಬದಲು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಕಾರ್ಮಿಕರ ಸಮಸ್ಯೆ ಇದೆ ಆದರೆ ಶ್ರಮ ಪಟ್ಟು ದುಡಿದು, ಸಮಸ್ಯೆ ಬಗೆಹರಿಸಿದರೆ ಲಕ್ಷಾಂತರ ಆದಾಯ ಗಳಿಸಬಹುದು’ ಎನ್ನುತ್ತಾರೆ ರೈತ ಮುತ್ತಪ್ಪ ಯಲಿಗಾರ.</p>.<div><blockquote>ಮುತ್ತಪ್ಪ ಯಲಿಗಾರ ಪದವೀಧರರಾದರೂ ಸಮಗ್ರ ಕೃಷಿಯೊಂದಿಗೆ ಪ್ರಗತಿಪರ ರೈತರಾಗಿದ್ದಾರೆ. ಅವರ ಶ್ರಮದ ಕೃಷಿ ಸಾಧನೆ ಎಲ್ಲ ರೈತರಿಗೂ ಮಾದರಿ </blockquote><span class="attribution">ಮಂಜುನಾಥ ಜನಮಟ್ಟಿ ಕೃಷಿ ಸಹಾಯಕ ನಿರ್ದೇಶಕರು ನರಗುಂದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಗುಂದ:</strong> ಕೃಷಿಯಿಂದ ವಿಮುಖವಾಗುತ್ತಿರುವ ಪದವೀಧರರ ನಡುವೆ, ಕಲಾ ವಿಭಾಗದಲ್ಲಿ ಪದವಿ ಪಡೆದ ನರಗುಂದ ತಾಲ್ಲೂಕಿನ ಕೊಣ್ಣೂರಿನ ಮುತ್ತಪ್ಪ ಮಲ್ಲಪ್ಪ ಯಲಿಗಾರ 20ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ ಪದ್ದತಿ ಮಾಡಿ ಆರ್ಥಿಕ ಸ್ವಾವಲಂಬಿಯಾಗಿದ್ದಾರೆ.</p>.<p>ತೋಟಗಾರಿಕೆ ಬೆಳೆ, ವಾಣಿಜ್ಯ ಬೆಳೆ, ಆಹಾರ ಬೆಳೆ ಹಾಗೂ ತರಕಾರಿ,ಹಣ್ಣುಗಳನ್ನು ಬೆಳೆಯುವುದರ ಮೂಲಕ ಮಾದರಿಯಾಗಿದ್ದಾರೆ.</p>.<p>ನೀರಾವರಿ ಹಾಗೂ ಖುಷ್ಕಿ ಭೂಮಿ ಹೊಂದಿರುವ ಮುತ್ತಪ್ಪ ಅವರಿಗೆ ಮಲಪ್ರಭಾ ಕಾಲುವೆ ಹಾಗೂ ಕೃಷಿ ಭಾಗ್ಯದ ಮೂಲಕ ನಿರ್ಮಿಸಿಕೊಂಡ ಬೃಹತ್ ಕೃಷಿ ಹೊಂಡಗಳೇ ವರದಾನವಾಗಿವೆ. ಮಳೆ ಇಲ್ಲದಿದ್ದಾಗ ಕೃಷಿ ಹೊಂಡಗಳಿಂದ ಉತ್ತಮ ಫಸಲು ಪಡೆಯುತ್ತಿದ್ದಾರೆ.</p>.<p>ಎರಡು ಎಕರೆ ಭೂಮಿಯಲ್ಲಿ ಪೇರಲ ತೋಟ ನಿರ್ಮಿಸಿಕೊಂಡಿದ್ದು, ನಿತ್ಯ ಮಾರುಕಟ್ಟೆಗೆ ಪೇರಲ ರಫ್ತಾಗುತ್ತಿದ್ದು ಕೈ ತುಂಬ ಆದಾಯ ಗಳಿಸುತ್ತಿರುವ ಇವರು ಒಂದು ಎಕರೆಗೆ ಒಂದು ವರ್ಷಕ್ಕೆ ₹ 5 ಲಕ್ಷ ಲಾಭ ಪಡೆಯುತ್ತಿದ್ದಾರೆ. ಜೊತೆಗೆ ಬೇಡಿಕೆ ಇರುವ ಬೆಳೆಯೂ ಹೌದು ಎನ್ನುತ್ತಾರೆ ಅವರು.</p>.<p>200 ಮಹಾ ಗಣಿ, 115 ತೆಂಗು, 120 ಚೆರ್ರಿ, 20 ಶ್ರೀಗಂಧ ಗಿಡಗಳ ಜೊತೆಗೆ ಪಪ್ಪಾಯಿ, ಚಿಕ್ಕು, ನೇರಲೆ ಸೇರಿದಂತೆ ವಿವಿಧ ದೀರ್ಘಾವಧಿ ಬೆಳೆಗಳನ್ನು ಬೆಳೆದು ಹೆಚ್ಚಿನ ಆದಾಯದ ನಿರೀಕ್ಷೆಯಲ್ಲಿದ್ದಾರೆ.</p>.<p>ಪ್ರಮುಖ ವಾಣಿಜ್ಯ ಬೆಳೆಗಳಾದ ಗೋವಿನಜೋಳ, ಗೋಧಿ, ಕಡಲೆ, ಸೂರ್ಯಕಾಂತಿ ಸೇರಿದಂತೆ ಎಲ್ದ ರೀತಿಯ ಬೆಳೆ ಬೆಳೆದು ವರ್ಷಕ್ಕೆ ಈ ಬೆಳೆಗಳಿಂದ ಸರಾಸರಿ ₹10ಲಕ್ಷದವರೆಗೂ ಆದಾಯ ಗಳಿಸುತ್ತಿದ್ದಾರೆ.</p>.<p>ಕೋಳಿ ಸಾಕಾಣಿಕೆ: ಕೃಷಿ ಒಮ್ಮೊಮ್ಮೆ ನಷ್ಟಕ್ಕೂ ದೂಡುತ್ತದೆ. ಅದರಿಂದ ಪಾರಾಗಲು ಕೃಷಿ ಜೊತೆ ಉಪಕಸುಬು ಅಳವಡಿಸಿಕೊಳ್ಳುವುದು ಮುಖ್ಯ ಎನ್ನುವ ಯಲಿಗಾರ ಸ್ವಂತ ಕೋಳಿ ಫಾರ್ಮ್ ಹೊಂದಿದ್ದಾರೆ. ಒಂದು ಹಂತಕ್ಕೆ 6ಸಾವಿರಕ್ಕೂ ಹೆಚ್ಚು ಕೋಳಿ ಮಾರುವ ಇವರು ವರ್ಷದಲ್ಲಿ ಐದು ಹಂತದಲ್ಲಿ ಕೋಳಿ ಸಾಕಾಣಿಕೆ ಮಾಡುತ್ತಾರೆ. ಈ ಮೂಲಕ ವಾರ್ಷಿಕ ₹5ಲಕ್ಷ ಲಾಭ ಪಡೆಯುತ್ತಿದ್ದಾರೆ.</p>.<p>‘ಕೃಷಿ ಎಂದರೆ ತಾತ್ಸಾರ ಬೇಡ. ಪದವಿ ಪಡೆದ ತಕ್ಷಣ ನೌಕರಿ ಎಂದು ಬೆನ್ನು ಹತ್ತುವ ಬದಲು ಕೃಷಿಯಲ್ಲಿ ತೊಡಗಿಸಿಕೊಳ್ಳಬೇಕು. ಕಾರ್ಮಿಕರ ಸಮಸ್ಯೆ ಇದೆ ಆದರೆ ಶ್ರಮ ಪಟ್ಟು ದುಡಿದು, ಸಮಸ್ಯೆ ಬಗೆಹರಿಸಿದರೆ ಲಕ್ಷಾಂತರ ಆದಾಯ ಗಳಿಸಬಹುದು’ ಎನ್ನುತ್ತಾರೆ ರೈತ ಮುತ್ತಪ್ಪ ಯಲಿಗಾರ.</p>.<div><blockquote>ಮುತ್ತಪ್ಪ ಯಲಿಗಾರ ಪದವೀಧರರಾದರೂ ಸಮಗ್ರ ಕೃಷಿಯೊಂದಿಗೆ ಪ್ರಗತಿಪರ ರೈತರಾಗಿದ್ದಾರೆ. ಅವರ ಶ್ರಮದ ಕೃಷಿ ಸಾಧನೆ ಎಲ್ಲ ರೈತರಿಗೂ ಮಾದರಿ </blockquote><span class="attribution">ಮಂಜುನಾಥ ಜನಮಟ್ಟಿ ಕೃಷಿ ಸಹಾಯಕ ನಿರ್ದೇಶಕರು ನರಗುಂದ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>