<p><strong>ನರಗುಂದ: </strong>ತಾಲ್ಲೂಕಿನ ಕೊಣ್ಣೂರು ಬಳಿಯ ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ವ್ಯಾಪ್ತಿಯ ಮಲಪ್ರಭಾ ಹಳೆಸೇತುವೆ ಮೇಲಿನ ಪ್ರವಾಹಕ್ಕೆ ಭಾನುವಾರ ಕೊಚ್ಚಿಹೋಗಿದ್ದ ಕೊಣ್ಣೂರಿನ ರೈತ ವೆಂಕನಗೌಡ ಸಾಲಿಗೌಡ್ರ ಅವರ ಮೃತ ದೇಹ ಬುಧವಾರ ಸಂಜೆ ಪತ್ತೆಯಾಗಿದೆ.</p>.<p>ನಾಲ್ಕು ದಿನಗಳಿಂದ ಬಾದಾಮಿ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದ್ದರೂ ಅವರ ದೇಹ ಪತ್ತೆಯಾಗಿರಲಿಲ್ಲ. ಇದರಿಂದಾಗಿ ಕುಟುಂಬದವರೂ ತೀವ್ರ ಆತಂಕಕ್ಕೆ ಒಳಗಾಗಿದ್ದರು.</p>.<p>ಕೊಣ್ಣೂರು ಗ್ರಾಮದ ಈಜುಗಾರರಾದ ಹಸನ್ಸಾಬ್ ನದಾಫ್, ಮೈಬುಸಾಬ್ ನದಾಫ್, ಸಯ್ಯದ್ ಸಾಬ ನದಾಫ್, ಶರೀಫ ಸಾಹೇಬ ನದಾಫ್ ಸೇರಿ ಬೂದಿಹಾಳ ಸಮೀಪದ ಹೊಳೆಯ ಪಕ್ಕ ಕಂಟಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಅವರ ಮೃತ ದೇಹವನ್ನು ಪತ್ತೆಹಚ್ಚಿದರು.</p>.<p>ಈ ಮಾಹಿತಿಯನ್ನು ಬಳಿಕ ಬಾದಾಮಿ ಅಗ್ನಿ ಶಾಮಕಕ್ಕೆ ತಿಳಿಸಲಾಯಿತು. ಅಗ್ನಿಶಾಮಕ ದಳದವರು ಬೋಟ್ ಮೂಲಕ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ತೆಗೆದುಕೊಂಡು ಬಂದಿದ್ದಾರೆ ಎಂದು ಮೃತ ರೈತನ ಸಹೋದರ ಸಂತೋಷ ಸಾಲಿಗೌಡ್ರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನರಗುಂದ: </strong>ತಾಲ್ಲೂಕಿನ ಕೊಣ್ಣೂರು ಬಳಿಯ ಬಾದಾಮಿ ತಾಲ್ಲೂಕಿನ ಗೋವನಕೊಪ್ಪ ವ್ಯಾಪ್ತಿಯ ಮಲಪ್ರಭಾ ಹಳೆಸೇತುವೆ ಮೇಲಿನ ಪ್ರವಾಹಕ್ಕೆ ಭಾನುವಾರ ಕೊಚ್ಚಿಹೋಗಿದ್ದ ಕೊಣ್ಣೂರಿನ ರೈತ ವೆಂಕನಗೌಡ ಸಾಲಿಗೌಡ್ರ ಅವರ ಮೃತ ದೇಹ ಬುಧವಾರ ಸಂಜೆ ಪತ್ತೆಯಾಗಿದೆ.</p>.<p>ನಾಲ್ಕು ದಿನಗಳಿಂದ ಬಾದಾಮಿ ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿದ್ದರೂ ಅವರ ದೇಹ ಪತ್ತೆಯಾಗಿರಲಿಲ್ಲ. ಇದರಿಂದಾಗಿ ಕುಟುಂಬದವರೂ ತೀವ್ರ ಆತಂಕಕ್ಕೆ ಒಳಗಾಗಿದ್ದರು.</p>.<p>ಕೊಣ್ಣೂರು ಗ್ರಾಮದ ಈಜುಗಾರರಾದ ಹಸನ್ಸಾಬ್ ನದಾಫ್, ಮೈಬುಸಾಬ್ ನದಾಫ್, ಸಯ್ಯದ್ ಸಾಬ ನದಾಫ್, ಶರೀಫ ಸಾಹೇಬ ನದಾಫ್ ಸೇರಿ ಬೂದಿಹಾಳ ಸಮೀಪದ ಹೊಳೆಯ ಪಕ್ಕ ಕಂಟಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಅವರ ಮೃತ ದೇಹವನ್ನು ಪತ್ತೆಹಚ್ಚಿದರು.</p>.<p>ಈ ಮಾಹಿತಿಯನ್ನು ಬಳಿಕ ಬಾದಾಮಿ ಅಗ್ನಿ ಶಾಮಕಕ್ಕೆ ತಿಳಿಸಲಾಯಿತು. ಅಗ್ನಿಶಾಮಕ ದಳದವರು ಬೋಟ್ ಮೂಲಕ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ತೆಗೆದುಕೊಂಡು ಬಂದಿದ್ದಾರೆ ಎಂದು ಮೃತ ರೈತನ ಸಹೋದರ ಸಂತೋಷ ಸಾಲಿಗೌಡ್ರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>