ಪಿಎಸ್ಐ ನೇಮಕಾತಿ ಭ್ರಷ್ಟಾಚಾರ ಆರೋಪ ಮಾಡಿರುವ ಕಾಂಗ್ರೆಸ್ ಶಾಸಕಪ್ರಿಯಾಂಕ ಖರ್ಗೆಗೆ ಸಿಐಡಿ ನೋಟಿಸ್ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ‘ಏನಾಗಿದೆ ಎಂದು ಅವರೇ ಬಂದು ಹೇಳಬೇಕು ಅಲ್ಲವೇ. ನೋಟಿಸ್ ಕೊಟ್ಟಿರುವುದು ಕ್ರೈಂ ಮಾಡಿದ್ದೀಯಾ ಅಂತ ಅಲ್ಲ. ಅವರ ಬಳಿ ಇರುವ ಮಾಹಿತಿ ಕೊಡುವಂತೆ. ಗಾಳಿಯಲ್ಲಿ ಗುಂಡು ಹೊಡೆದರೆ ಆಗುತ್ತಾ. ಧೈರ್ಯವಾಗಿ ಬಂದು ಅವರ ಬಳಿ ಇರುವ ಸಾಕ್ಷಿ ಹೇಳಬೇಕು’ ಎಂದರು.