‘ದೂರು ದಾಖಲಿಸಿಕೊಂಡು, ಇದುವರೆಗೂ ಸುಮ್ಮನಿದ್ದ ಪೊಲೀಸರು, ಪೆನ್ಡ್ರೈವ್ ಸಂಬಂಧ ಹೇಳಿಕೆ ನೀಡುತ್ತಿದ್ದಂತೆಯೇ ಬಂಧಿಸಿದ್ದಾರೆ. ಅದರ ಹಿಂದೆ ಏನೋ ಉದ್ದೇಶವಿದೆ ಎಂಬುದನ್ನು ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಡಲಾಗಿದೆ. ಹೀಗಾಗಿ ದೇವರಾಜೇಗೌಡರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ’ ಎಂದು ಮತ್ತೊಬ್ಬ ವಕೀಲ ಚಂದ್ರಶೇಖರ್ ಪ್ರತಿಪಾದಿಸಿದರು.