<p><strong>ಬೇಲೂರು</strong>: ಇಲ್ಲಿನ ರಾಘವೇಂದ್ರ ಮಠದ ಮುಂಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಕೆಳಹಂತದಲ್ಲಿ ಜೋತು ಬಿದ್ದಿದ್ದು, ಸ್ಥಳೀಯರು ಜೀವಭಯದಲ್ಲೇ ಸಂಚರಿಸಬೇಕಿದೆ.</p>.<p>11ನೇ ವಾರ್ಡ್ನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು, ಬೀದಿ ದೀಪ ಅಳವಡಿಸಲು ಕಂಬಗಳ ಮೂಲಕ ಹಾದು ಹೋಗಿರುವ ವಿದ್ಯುತ್ ತಂತಿಗಳು ನೆಲಮಟ್ಟದಿಂದ ಕೇವಲ 8 ಅಡಿ ಎತ್ತರವಿದ್ದು, 100 ಅಡಿಗಳಷ್ಟು ದೂರ ಈ ಸಮಸ್ಯೆ ಎದುರಾಗಿದೆ. ವಸ್ತುಗಳನ್ನು ಮೇಲೆತ್ತಿ ಹೋಗುವಾಗ ವಿದ್ಯುತ್ ಶಾಕ್ ಆಗುವ ಸಾಧ್ಯತೆಗಳಿವೆ. ಸ್ಥಳೀಯರಿಗೆ ಸಮಸ್ಯೆ ಎದುರಾಗಿದೆ.</p>.<p>ಮಠದ ಎದುರು ಇರುವ ಅರಳಿ ಮರದ ಕೊಂಬೆಗಳು ತಂತಿಯ ಮೇಲೆ ಬೀಳುತ್ತಿರುವುದರಿಂದ ವಿದ್ಯುತ್ ತಂತಿಗಳು ಕೆಳಕ್ಕೆ ಬಾಗುತ್ತಿವೆ. ಗಾಳಿಗೆ ತಂತಿಗಳು ಪರಸ್ಪರ ಸ್ಪರ್ಶಿಸಿ ಬೆಂಕಿ ಬರುತ್ತಿದೆ. ಸೆಸ್ಕ್ ಸಿಬ್ಬಂದಿಗೆ ಈ ಬಗ್ಗೆ ಸಾಕಷ್ಟು ಭಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ .ಅಧಿಕಾರಿಗಳು ಗಮನಹರಿಸಿ ಅರಳಿ ಮರದ ಕೊಂಬೆಗಳನ್ನು ಕತ್ತರಿಸಿ, ಬಾಗಿರುವ ತಂತಿಗಳನ್ನು ಎತ್ತರಿಸಬೇಕು ಎಂದು ಮಠದ ಆರ್ಚಕ ಸುಧೀಂದ್ರ, ಸ್ಥಳೀಯರಾದ ಲಕ್ಷ್ಮಿಕಾಂತ್, ವಸಂತ, ತೇಜು, ಶಿವು ಆಗ್ರಹಿಸಿದ್ದಾರೆ.</p>.<div><blockquote>ಸ್ಥಳ ಸ್ವತಃ ಭೇಟಿ ನೀಡಿ ಪರಿಶೀಲನೆ ಮಾಡಿ ಸಮಸ್ಯೆಯನ್ನು ಶೀಘ್ರವಾಗಿ ಸರಿಪಡಿಸಲಾಗುವುದು. </blockquote><span class="attribution">ಬಸವರಾಜು ಸೆಸ್ಕ್ ಎಇಇ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇಲೂರು</strong>: ಇಲ್ಲಿನ ರಾಘವೇಂದ್ರ ಮಠದ ಮುಂಭಾಗದಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿಗಳು ಕೆಳಹಂತದಲ್ಲಿ ಜೋತು ಬಿದ್ದಿದ್ದು, ಸ್ಥಳೀಯರು ಜೀವಭಯದಲ್ಲೇ ಸಂಚರಿಸಬೇಕಿದೆ.</p>.<p>11ನೇ ವಾರ್ಡ್ನ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು, ಬೀದಿ ದೀಪ ಅಳವಡಿಸಲು ಕಂಬಗಳ ಮೂಲಕ ಹಾದು ಹೋಗಿರುವ ವಿದ್ಯುತ್ ತಂತಿಗಳು ನೆಲಮಟ್ಟದಿಂದ ಕೇವಲ 8 ಅಡಿ ಎತ್ತರವಿದ್ದು, 100 ಅಡಿಗಳಷ್ಟು ದೂರ ಈ ಸಮಸ್ಯೆ ಎದುರಾಗಿದೆ. ವಸ್ತುಗಳನ್ನು ಮೇಲೆತ್ತಿ ಹೋಗುವಾಗ ವಿದ್ಯುತ್ ಶಾಕ್ ಆಗುವ ಸಾಧ್ಯತೆಗಳಿವೆ. ಸ್ಥಳೀಯರಿಗೆ ಸಮಸ್ಯೆ ಎದುರಾಗಿದೆ.</p>.<p>ಮಠದ ಎದುರು ಇರುವ ಅರಳಿ ಮರದ ಕೊಂಬೆಗಳು ತಂತಿಯ ಮೇಲೆ ಬೀಳುತ್ತಿರುವುದರಿಂದ ವಿದ್ಯುತ್ ತಂತಿಗಳು ಕೆಳಕ್ಕೆ ಬಾಗುತ್ತಿವೆ. ಗಾಳಿಗೆ ತಂತಿಗಳು ಪರಸ್ಪರ ಸ್ಪರ್ಶಿಸಿ ಬೆಂಕಿ ಬರುತ್ತಿದೆ. ಸೆಸ್ಕ್ ಸಿಬ್ಬಂದಿಗೆ ಈ ಬಗ್ಗೆ ಸಾಕಷ್ಟು ಭಾರಿ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ .ಅಧಿಕಾರಿಗಳು ಗಮನಹರಿಸಿ ಅರಳಿ ಮರದ ಕೊಂಬೆಗಳನ್ನು ಕತ್ತರಿಸಿ, ಬಾಗಿರುವ ತಂತಿಗಳನ್ನು ಎತ್ತರಿಸಬೇಕು ಎಂದು ಮಠದ ಆರ್ಚಕ ಸುಧೀಂದ್ರ, ಸ್ಥಳೀಯರಾದ ಲಕ್ಷ್ಮಿಕಾಂತ್, ವಸಂತ, ತೇಜು, ಶಿವು ಆಗ್ರಹಿಸಿದ್ದಾರೆ.</p>.<div><blockquote>ಸ್ಥಳ ಸ್ವತಃ ಭೇಟಿ ನೀಡಿ ಪರಿಶೀಲನೆ ಮಾಡಿ ಸಮಸ್ಯೆಯನ್ನು ಶೀಘ್ರವಾಗಿ ಸರಿಪಡಿಸಲಾಗುವುದು. </blockquote><span class="attribution">ಬಸವರಾಜು ಸೆಸ್ಕ್ ಎಇಇ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>