ಶನಿವಾರ ಮಳೆ ಬಿಡುವು ನೀಡಿದ್ದರಿಂದ ಸ್ವಲ್ಪ ಎತ್ತರದ ಮಳೆಯ ನೀರು ಬಸಿದುಹೋದ ಜಮೀನಿನಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಕೃಷಿ ಕಾರ್ಯದಲ್ಲಿ ಕಾರ್ಯೋನ್ಮುಖವಾಗಿದ್ದು, ಹೊಗೆಸೊಪ್ಪು ಬೆಳೆಯ ಜಮೀನಿನಲ್ಲಿ ಬೆಳೆದಿದ್ದ ಕಳೆಯನ್ನು ತೆಗೆಯುವ ಮತ್ತು ಗಿಡಗಳ ಬುಡಕ್ಕೆ ಮಣ್ಣು ಒದಗಿಸುವ ಮತ್ತು ಗೊಬ್ಬರ ಹಾಕುವ ಕೆಲಸವನ್ನು ತರಾತುರಿಯಿಂದ ಕೈಗೊಂಡಿದ್ದಾರೆ.