ಫಲಾನುಭವಿಗಳಿಗೆ ಪೌಷ್ಟಿಕ ಆಹಾರ ತಯಾರಿಸಲು ಹಾಗೂ ಆಹಾರ ಧಾನ್ಯಗಳನ್ನು ವಿತರಿಸಲು ತೂಕದ ಯಂತ್ರ ಖರೀದಿಸಲು ಅಂಗನವಾಡಿ ಕಾರ್ಯಕರ್ತೆಯರಿಂದ ಬಲವಂತವಾಗಿ ಹಣ ಸಂಗ್ರಹಿಸಿದ್ದಾರೆ ಎಂದು ಬಂದ ದೂರಿನನ್ವಯ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಫೆಡರೇಷನ್ ಸಂಘಟನೆಯ ರಾಜ್ಯ ಕಾರ್ಯದರ್ಶಿ ಎಂ.ಜಯಮ್ಮ ಇಲ್ಲಿನ ಯೋಜನಾಧಿಕಾರಿ ಶಿವಪ್ರಕಾಶ್ ಅವರನ್ನು ಆ. 9ರಂದು ಭೇಟಿಯಾಗಿ, ಚರ್ಚಿಸಿ ಹಣವನ್ನು ಕಾರ್ಯಕರ್ತೆಯರಿಗೆ ವಾಪಸ್ ಕೊಡಿಸುವಂತೆ ಕೋರಿದ್ದರು.