<p><strong>ರಾಮನಾಥಪುರ (ಕೊಣನೂರು)</strong>: ‘ಮರಣ ಹೊಂದಿರುವ ತಂಬಾಕು ಬೆಳೆಗಾರರ ಕುಟುಂಬದವರಿಗೆ 7 ದಿನ ಗಳೊಳಗೆ ಕ್ಷೇಮಾಭಿವೃದ್ಧಿ ನಿಧಿಯ ಹಣ ಪಾವತಿಸದೆ ಇದ್ದರೆ ಕಚೇರಿ ಬಂದ್ ಮಾಡಿ ಹೋರಾಟ ಮಾಡಲಾಗುವುದು’ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸೀಬಳ್ಳಿ ಯೋಗಣ್ಣ ಹೇಳಿದರು.</p>.<p>ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯ ರೈತ ಸಭಾಂಗಣದಲ್ಲಿ ಗುರುವಾರ ನಡೆದ ರಾಜ್ಯ ತಂಬಾಕು ಬೆಳೆಗಾರರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ತಂಬಾಕು ಮಂಡಳಿ ಪ್ರತಿವರ್ಷ ಸಿಂಗಲ್ ಬ್ಯಾರಲ್ ಬೆಳೆಗಾರರಿಂದ ₹500 ಮತ್ತು ಡಬಲ್ ಬ್ಯಾರಲ್ ಪರವಾನಗಿ ಹೊಂದಿರುವ ಬೆಳೆಗಾರರಿಂದ ₹ 1,000 ಪಡೆದು ರೈತ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ಜಮೆ ಮಾಡುತ್ತಿದೆ.</p>.<p>ಬೆಳೆಗಾರರು ಮೃತಪಟ್ಟಾಗ ಅವರ ಕುಟುಂಬಕ್ಕೆ ₹ 50 ಸಾವಿರದಿಂದ ₹ 2 ಲಕ್ಷ ನೀಡುತ್ತಿದೆ. ಒಂದು ವರ್ಷದಿಂದ ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯ ವ್ಯಾಪ್ತಿಯ 37 ಬೆಳೆಗಾರರು ಮೃತಪಟ್ಟಿದ್ದು, ಅಗತ್ಯ ದಾಖಲೆಗಳನ್ನು ಮಂಡಳಿ ಕಚೇರಿಗೆ ನೀಡಿದ್ದರೂ ಇದುವರೆಗೂ ಮರಣ ನಿಧಿ ರೈತರ ಕೈ ಸೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಪ್ಲಾಟ್ ಫಾರಂ 7ರ ಅಧ್ಯಕ್ಷ ನಿಲುವಾಗಿಲು ಈರೇಗೌಡ ಮಾತನಾಡಿ, ಅಂಧ್ರಪ್ರದೇಶದಲ್ಲಿ ಪ್ರಸ್ತುತ ವರ್ಷದ ತಂಬಾಕು ಕೊಳ್ಳುವಿಕೆಯ ಸಂದರ್ಭ ಖಾಸಗಿ ಕಂಪೆನಿಗಳು ಕಡಿಮೆಬೆಲೆಯಲ್ಲಿ ಕೊಳ್ಳಲು ಮುಂದಾಗಿದ್ದ ಕಡಿಮೆ ದರ್ಜೆಯ ತಂಬಾಕನ್ನು ರಾಜ್ಯ ಸರ್ಕಾರವು ಪ್ರತಿ ಕೆ.ಜಿ ತಂಬಾಕಿಗೆ ₹ 80 ರಂತೆ ಖರೀದಿಸಿದೆ. ರಾಜ್ಯದಲ್ಲೂ ಕಡಿಮೆ ದರ್ಜೆಯ ತಂಬಾಕನ್ನು ಆಂಧ್ರಪ್ರದೇಶದ ಮಾದರಿಯಲ್ಲಿ ಖರೀದಿಸಿ ನಷ್ಟ ತಪ್ಪಿಸಬೇಕು ಎಂದು ಒತ್ತಾಯಿಸಿದರು.</p>.<p>ಪ್ಲಾಟ್ ಫಾರಂ 63ರ ಅಧ್ಯಕ್ಷ ಕಾಡನೂರು ಕುಮಾರ್ ಮಾತನಾಡಿ, ಮರಣಹೊಂದಿರುವ ತಂಬಾಕು ಬೆಳೆಗಾರರಿಗೆ ಮರಣ ನಿಧಿಯ ಹಣವನ್ನು ನೀಡದಿರುವ ಕುರಿತು ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದೆ. ರೈತರು ಕುಂದುಕೊರತೆಗಳನ್ನು ಸಂಘದ ಗಮನಕ್ಕೆ ತರಬೇಕು ಎಂದರು.</p>.<p>ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಮರಣ ನಿಧಿಯ ಹಣವನ್ನು ನೀಡುವ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.</p>.<p>ತುಳಸಿರಾಮೇಗೌಡ, ಸುಂದ್ರೇಶ್, ನೇತ್ರಪಾಲ್, ಮಲ್ಲೇಶ್, ಚೇತನ್, ಮಹದೇವ್, ಕಾಳೇಗೌಡ, ರೈತ ಸಂಘದ ಜಗದೀಶ್, ಮಂಜೇಗೌಡ, ರವಿ ಮುಖಂಡರಾದ ದೇವರಾಜು, ಚನ್ನರಾಜು, ಕೃಷ್ಣೇಗೌಡ, ರೈತರು ಮತ್ತು ಮಂಡಳಿಯ ಅಧಿಕಾರಿಗಳಾದ ಪಾಂಡೆ, ಹೇಮಂತ್, ಯೋಗೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಮನಾಥಪುರ (ಕೊಣನೂರು)</strong>: ‘ಮರಣ ಹೊಂದಿರುವ ತಂಬಾಕು ಬೆಳೆಗಾರರ ಕುಟುಂಬದವರಿಗೆ 7 ದಿನ ಗಳೊಳಗೆ ಕ್ಷೇಮಾಭಿವೃದ್ಧಿ ನಿಧಿಯ ಹಣ ಪಾವತಿಸದೆ ಇದ್ದರೆ ಕಚೇರಿ ಬಂದ್ ಮಾಡಿ ಹೋರಾಟ ಮಾಡಲಾಗುವುದು’ ಎಂದು ರೈತ ಸಂಘದ ತಾಲ್ಲೂಕು ಅಧ್ಯಕ್ಷ ಸೀಬಳ್ಳಿ ಯೋಗಣ್ಣ ಹೇಳಿದರು.</p>.<p>ರಾಮನಾಥಪುರದ ತಂಬಾಕು ಹರಾಜು ಮಾರುಕಟ್ಟೆಯ ರೈತ ಸಭಾಂಗಣದಲ್ಲಿ ಗುರುವಾರ ನಡೆದ ರಾಜ್ಯ ತಂಬಾಕು ಬೆಳೆಗಾರರ ಸಂಘದ ಸಭೆಯಲ್ಲಿ ಮಾತನಾಡಿದ ಅವರು, ತಂಬಾಕು ಮಂಡಳಿ ಪ್ರತಿವರ್ಷ ಸಿಂಗಲ್ ಬ್ಯಾರಲ್ ಬೆಳೆಗಾರರಿಂದ ₹500 ಮತ್ತು ಡಬಲ್ ಬ್ಯಾರಲ್ ಪರವಾನಗಿ ಹೊಂದಿರುವ ಬೆಳೆಗಾರರಿಂದ ₹ 1,000 ಪಡೆದು ರೈತ ಕ್ಷೇಮಾಭಿವೃದ್ಧಿ ನಿಧಿಯಲ್ಲಿ ಜಮೆ ಮಾಡುತ್ತಿದೆ.</p>.<p>ಬೆಳೆಗಾರರು ಮೃತಪಟ್ಟಾಗ ಅವರ ಕುಟುಂಬಕ್ಕೆ ₹ 50 ಸಾವಿರದಿಂದ ₹ 2 ಲಕ್ಷ ನೀಡುತ್ತಿದೆ. ಒಂದು ವರ್ಷದಿಂದ ರಾಮನಾಥಪುರ ತಂಬಾಕು ಹರಾಜು ಮಾರುಕಟ್ಟೆಯ ವ್ಯಾಪ್ತಿಯ 37 ಬೆಳೆಗಾರರು ಮೃತಪಟ್ಟಿದ್ದು, ಅಗತ್ಯ ದಾಖಲೆಗಳನ್ನು ಮಂಡಳಿ ಕಚೇರಿಗೆ ನೀಡಿದ್ದರೂ ಇದುವರೆಗೂ ಮರಣ ನಿಧಿ ರೈತರ ಕೈ ಸೇರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.</p>.<p>ಪ್ಲಾಟ್ ಫಾರಂ 7ರ ಅಧ್ಯಕ್ಷ ನಿಲುವಾಗಿಲು ಈರೇಗೌಡ ಮಾತನಾಡಿ, ಅಂಧ್ರಪ್ರದೇಶದಲ್ಲಿ ಪ್ರಸ್ತುತ ವರ್ಷದ ತಂಬಾಕು ಕೊಳ್ಳುವಿಕೆಯ ಸಂದರ್ಭ ಖಾಸಗಿ ಕಂಪೆನಿಗಳು ಕಡಿಮೆಬೆಲೆಯಲ್ಲಿ ಕೊಳ್ಳಲು ಮುಂದಾಗಿದ್ದ ಕಡಿಮೆ ದರ್ಜೆಯ ತಂಬಾಕನ್ನು ರಾಜ್ಯ ಸರ್ಕಾರವು ಪ್ರತಿ ಕೆ.ಜಿ ತಂಬಾಕಿಗೆ ₹ 80 ರಂತೆ ಖರೀದಿಸಿದೆ. ರಾಜ್ಯದಲ್ಲೂ ಕಡಿಮೆ ದರ್ಜೆಯ ತಂಬಾಕನ್ನು ಆಂಧ್ರಪ್ರದೇಶದ ಮಾದರಿಯಲ್ಲಿ ಖರೀದಿಸಿ ನಷ್ಟ ತಪ್ಪಿಸಬೇಕು ಎಂದು ಒತ್ತಾಯಿಸಿದರು.</p>.<p>ಪ್ಲಾಟ್ ಫಾರಂ 63ರ ಅಧ್ಯಕ್ಷ ಕಾಡನೂರು ಕುಮಾರ್ ಮಾತನಾಡಿ, ಮರಣಹೊಂದಿರುವ ತಂಬಾಕು ಬೆಳೆಗಾರರಿಗೆ ಮರಣ ನಿಧಿಯ ಹಣವನ್ನು ನೀಡದಿರುವ ಕುರಿತು ಅಧಿಕಾರಿಗಳ ಸಭೆಯಲ್ಲಿ ಚರ್ಚಿಸಲಾಗಿದೆ. ರೈತರು ಕುಂದುಕೊರತೆಗಳನ್ನು ಸಂಘದ ಗಮನಕ್ಕೆ ತರಬೇಕು ಎಂದರು.</p>.<p>ಸಭೆಯಲ್ಲಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಮರಣ ನಿಧಿಯ ಹಣವನ್ನು ನೀಡುವ ಕುರಿತು ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.</p>.<p>ತುಳಸಿರಾಮೇಗೌಡ, ಸುಂದ್ರೇಶ್, ನೇತ್ರಪಾಲ್, ಮಲ್ಲೇಶ್, ಚೇತನ್, ಮಹದೇವ್, ಕಾಳೇಗೌಡ, ರೈತ ಸಂಘದ ಜಗದೀಶ್, ಮಂಜೇಗೌಡ, ರವಿ ಮುಖಂಡರಾದ ದೇವರಾಜು, ಚನ್ನರಾಜು, ಕೃಷ್ಣೇಗೌಡ, ರೈತರು ಮತ್ತು ಮಂಡಳಿಯ ಅಧಿಕಾರಿಗಳಾದ ಪಾಂಡೆ, ಹೇಮಂತ್, ಯೋಗೇಶ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>