<p><strong>ಬೇಲೂರು (ಹಾಸನ):</strong> ವಿದ್ಯಾರ್ಥಿಗಳ ಕ್ರೀಡಾಕೂಟದ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಎಚ್.ಕೆ.ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡರ ವಿರುದ್ಧ ಇಲ್ಲಿ ಹರಿಹಾಯ್ದರು. ಒಂದು ಹಂತದಲ್ಲಿ ಅಧಿಕಾರಿಗೆ ‘ಬದನೆಕಾಯಿ ಬಿಇಒ’ ಎಂದೂ ದೂಷಿಸಿದರು.</p>.<p>ಇಲ್ಲಿನ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಉದ್ಘಾಟನೆ ವೇಳೆ ಈ ಘಟನೆ ನಡೆಯಿತು. ‘ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲ. ಬಿಇಒ ಪಕ್ಕದಲ್ಲಿ ಕುಳಿತುಕೊಳ್ಳುವುದಿಲ್ಲ. ಅವರನ್ನು ಬೇರೆಡೆ ಕಳುಹಿಸಿ’ ಎಂದರು.</p>.<p>ಅದಕ್ಕೆ ಆಕ್ಷೇಪಿಸಿದ ಬಿಇಒ, ‘ನಾನು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ. ಬೇರೆಡೆ ಕಳುಹಿಸುವುದು ಸರಿಯಲ್ಲ’ ಎಂದರು.</p>.<p>ಸಿಟ್ಟಿಗೆದ್ದ ಶಾಸಕರು, ‘ಜಾಸ್ತಿ ಮಾತನಾಡಬೇಡ. ರಾತ್ರಿಯೆಲ್ಲ ಕುಡಿದು ಫೋನ್ ಮಾಡುತ್ತಿಯಾ. ನೀನು ಬದನೆಕಾಯಿ ಬಿಇಒ. ಶಿಕ್ಷಕರು ನಿನ್ನಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.</p>.<p>‘ಯಾರು ಹೇಳಿದೋರು ನಿಮಗೆ, ಕರೆಯಿರಿ ಅವರನ್ನು’ ಎಂದು ರಾಜೇಗೌಡ ಪ್ರತ್ಯುತ್ತರ ನೀಡಿದರು.</p>.<p>‘ನಾನು ಈ ಬಿಇಒ ಪಕ್ಕ ಕೂರುವುದಿಲ್ಲ’ ಎಂದು ಹಠ ಹಿಡಿದ ಶಾಸಕರು, ‘ಎದ್ದೇಳು. ಏಯ್ ಜಾಗ ಬಿಡು’ ಎಂದು ವೇದಿಕೆಯಿಂದಲೇ ಹೊರಟು ನಿಂತರು. ನಂತರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ‘ಕರೆಯದೇ ಬಂದವರಿಗೆ ಕೆರದಲ್ಲಿ ಹೊಡೆ ಸರ್ವಜ್ಞ ಎನ್ನುವಂತಾಗಿದೆ ನನ್ನ ಪರಿಸ್ಥಿತಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೇಲೂರು (ಹಾಸನ):</strong> ವಿದ್ಯಾರ್ಥಿಗಳ ಕ್ರೀಡಾಕೂಟದ ಆಹ್ವಾನ ಪತ್ರಿಕೆಯಲ್ಲಿ ಹೆಸರಿಲ್ಲದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಶಾಸಕ ಎಚ್.ಕೆ.ಸುರೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಗೌಡರ ವಿರುದ್ಧ ಇಲ್ಲಿ ಹರಿಹಾಯ್ದರು. ಒಂದು ಹಂತದಲ್ಲಿ ಅಧಿಕಾರಿಗೆ ‘ಬದನೆಕಾಯಿ ಬಿಇಒ’ ಎಂದೂ ದೂಷಿಸಿದರು.</p>.<p>ಇಲ್ಲಿನ ಕ್ರೀಡಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಪ್ರೌಢಶಾಲಾ ವಿದ್ಯಾರ್ಥಿಗಳ ಕ್ರೀಡಾಕೂಟದ ಉದ್ಘಾಟನೆ ವೇಳೆ ಈ ಘಟನೆ ನಡೆಯಿತು. ‘ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಲ್ಲ. ಬಿಇಒ ಪಕ್ಕದಲ್ಲಿ ಕುಳಿತುಕೊಳ್ಳುವುದಿಲ್ಲ. ಅವರನ್ನು ಬೇರೆಡೆ ಕಳುಹಿಸಿ’ ಎಂದರು.</p>.<p>ಅದಕ್ಕೆ ಆಕ್ಷೇಪಿಸಿದ ಬಿಇಒ, ‘ನಾನು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ. ಬೇರೆಡೆ ಕಳುಹಿಸುವುದು ಸರಿಯಲ್ಲ’ ಎಂದರು.</p>.<p>ಸಿಟ್ಟಿಗೆದ್ದ ಶಾಸಕರು, ‘ಜಾಸ್ತಿ ಮಾತನಾಡಬೇಡ. ರಾತ್ರಿಯೆಲ್ಲ ಕುಡಿದು ಫೋನ್ ಮಾಡುತ್ತಿಯಾ. ನೀನು ಬದನೆಕಾಯಿ ಬಿಇಒ. ಶಿಕ್ಷಕರು ನಿನ್ನಿಂದ ಚಿತ್ರಹಿಂಸೆ ಅನುಭವಿಸುತ್ತಿದ್ದಾರೆ’ ಎಂದು ಕಿಡಿಕಾರಿದರು.</p>.<p>‘ಯಾರು ಹೇಳಿದೋರು ನಿಮಗೆ, ಕರೆಯಿರಿ ಅವರನ್ನು’ ಎಂದು ರಾಜೇಗೌಡ ಪ್ರತ್ಯುತ್ತರ ನೀಡಿದರು.</p>.<p>‘ನಾನು ಈ ಬಿಇಒ ಪಕ್ಕ ಕೂರುವುದಿಲ್ಲ’ ಎಂದು ಹಠ ಹಿಡಿದ ಶಾಸಕರು, ‘ಎದ್ದೇಳು. ಏಯ್ ಜಾಗ ಬಿಡು’ ಎಂದು ವೇದಿಕೆಯಿಂದಲೇ ಹೊರಟು ನಿಂತರು. ನಂತರ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ‘ಕರೆಯದೇ ಬಂದವರಿಗೆ ಕೆರದಲ್ಲಿ ಹೊಡೆ ಸರ್ವಜ್ಞ ಎನ್ನುವಂತಾಗಿದೆ ನನ್ನ ಪರಿಸ್ಥಿತಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>