ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್ | ಕರ್ನಾಟಕದಲ್ಲಿ ಮಹಾರಾಷ್ಟ್ರ ಕಾರ್ಮಿಕನ ಪರದಾಟ

Last Updated 16 ಏಪ್ರಿಲ್ 2020, 3:28 IST
ಅಕ್ಷರ ಗಾತ್ರ

ಶ್ರವಣಬೆಳಗೊಳ: ಒನ್‌ ಟೈಮ್‌ ಎಟಿಎಂಗಳನ್ನು ಸ್ಥಾಪಿಸಲೆಂದು ಮಹಾರಾಷ್ಟ್ರದಿಂದ ಬಂದಿದ್ದ ಜೈಶ್‌ ಠಾಕೂರ್‌, ಲಾಕ್‌ಡೌನ್‌ ಘೋಷಣೆಯಿಂದಾಗಿ ಶ್ರವಣಬೆಳಗೊಳ ದಲ್ಲಿಯೇ ಉಳಿದಿದ್ದು, ಊಟ, ವಸತಿಗೆ ಪರದಾಡುತ್ತಿದ್ದಾರೆ.

ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯ ವತ್ಸಾಯ್‌ ಗಾಂವ್‌ನ 42 ವರ್ಷದ ಜೈಶ್‌ ಠಾಕೂರ್‌ ಮುಂಬೈನ ಬೋರಾ ಪ್ಲಾಸ್ಟ್‌ ಕಂಪನಿ ಎಟಿಎಂಗಳ ನಿರ್ವಹಣೆಯ ಜೋಡಣಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಮಾರ್ಚ್‌ 3ರಂದು ಹಾಸನ ನಗರಕ್ಕೆ ಬಂದಿದ್ದು, ಜಿಲ್ಲೆಯ ವಿವಿಧೆಡೆ ಎಟಿಎಂಗಳನ್ನು ಸ್ಥಾಪಿಸಿದ್ದಾರೆ. ಮಾರ್ಚ್‌ 22ರಂದು ಶ್ರವಣಬೆಳಗೊಳದ ಬಸ್‌ ನಿಲ್ದಾಣ ಮುಂಭಾಗದಲ್ಲಿ ಎಟಿಎಂ ಸ್ಥಾಪಿಸಿದ್ದರು.

‘ನನ್ನ ಮೊಬೈಲ್‌ ಸಹ ಕಳವಾಗಿದ್ದು, ದಿಕ್ಕು ತೋಚದಂತಾಗಿದೆ. ಬಯಲೇ ಮನೆಯಾಗಿದ್ದು, ಊಟಕ್ಕೂ ತೊಂದರೆಯಾಗಿದೆ’ ಎಂದು ಠಾಕೂರ್‌ ಅಳಲು ತೋಡಿಕೊಂಡರು.

ಪಟ್ಟಣದ ಬಸ್‌ ನಿಲ್ದಾಣ ದಲ್ಲಿರುವ ಶೌಚಾಲಯದಲ್ಲಿ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಿಹಾರದ ಜೈಕುಮಾರ ಚೌಧರಿ ಅವರು ಠಾಕೂರ್‌ ಅವರಿಗೆ ಆಶ್ರಯ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT